ಕಾರ್ಯಕ್ರಮದ ಬಗ್ಗೆ
ಮನಸ್ಸು ಮತ್ತು ಭಾವನೆಗಳು ಅಂತರ್ಮುಖಿಯಾದಾಗ, ನೀವು ದೇವರ ಆನಂದವನ್ನು ಅನುಭವಿಸಲು ಪ್ರಾರಂಭಿಸುತ್ತೀರಿ. ಇಂದ್ರಿಯ ಸುಖಗಳು ಶಾಶ್ವತವಲ್ಲ, ಆದರೆ ದೇವರ ಆನಂದವು ಶಾಶ್ವತವಾದುದು. ಅದು ಅನುಪಮ!
— ಶ್ರೀ ಶ್ರೀ ಪರಮಹಂಸ ಯೋಗಾನಂದ
ಒಂದು ಹೊಸ ಕಾರ್ಯಕ್ರಮ ಅರಳುತ್ತಿದೆ
ಮೊದಲ ಬಾರಿಗೆ ಕೈಗೊಂಡ ವಿಶೇಷ ಉಪಕ್ರಮವಾಗಿ, ಯೋಗೋದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್) 23-35 ವರ್ಷದ ಯುವ ಸಾಧಕರಿಗಾಗಿ ಮಾತ್ರ ಸಾಧನಾ ಸಂಗಮವನ್ನು ಆಯೋಜಿಸಿತು — ಇದು ಆಧ್ಯಾತ್ಮಿಕವಾಗಿ ಆಳವಾದ ಅನುಭವವಾಗಿದ್ದು, 2025ರ ಸೆಪ್ಟೆಂಬರ್ 10ರಿಂದ 14ರವರೆಗೆ ಶಾಂತಮಯ ವೈಎಸ್ಎಸ್ ರಾಂಚಿ ಆಶ್ರಮದಲ್ಲಿ ನಡೆಯಿತು.
ಈ ವಿಶೇಷ ಸಂಗಮವು ಪರಮಹಂಸ ಯೋಗಾನಂದರ ವಿಶ್ವವ್ಯಾಪಿ ಉಪದೇಶಗಳ ಬಗ್ಗೆ ಯುವಕರಲ್ಲಿ ಹೆಚ್ಚುತ್ತಿರುವ ಆಸಕ್ತಿಯ ಅಭಿವ್ಯಕ್ತಿಯಾಗಿತ್ತು, ಇದು ಅಂತರಂಗದ ಸ್ಪಷ್ಟತೆ ಮತ್ತು ಶಕ್ತಿಗಾಗಿ ಪ್ರೇರಣೆ ನೀಡುತ್ತದೆ.
ಸಂಗಮವು ಭಾರತದ ನಾನಾ ಭಾಗಗಳಿಂದ ನೂರಾರು ಯುವ ಭಕ್ತರು ಒಂದೇ ಸ್ಥಳದಲ್ಲಿ ಸೇರಿ, ಪರಮಹಂಸ ಯೋಗಾನಂದರ ಉಪದೇಶಗಳಲ್ಲಿ ಆಳವಾಗಿ ಮುಳುಗಿ, ಆತ್ಮಸ್ನೇಹವನ್ನು ಬೆಳೆಸಿ, ವೇಗವಾಗಿ ಬದಲಾಗುತ್ತಿರುವ ಆಧುನಿಕ ಜಗತ್ತಿಗೆ ಸೂಕ್ತವಾದ ಸಮತೋಲಿತ ಆಧ್ಯಾತ್ಮಿಕ ಜೀವನಶೈಲಿಯನ್ನು ಕಂಡುಕೊಳ್ಳಲು ಪವಿತ್ರ ವೇದಿಕೆಯನ್ನು ಒದಗಿಸಿತು.
ಯೋಗ ಪಥದ ಜೀವನಕ್ಕೆ ಪೂರಕವಾದ ಆಧ್ಯಾತ್ಮಿಕ ಅಭ್ಯಾಸ
ಯೋಗಾನಂದಜಿಯವರ ಸಮತೋಲಿತ ಜೀವನದ ಆದರ್ಶದ ಮೇಲೆ ಆಧಾರಿತವಾಗಿ, ಸಂಗಮದ ದೈನಂದಿನ ಚಟುವಟಿಕೆ ಸರಳವಾದರೂ ಪರಿವರ್ತನಾತ್ಮಕವಾಗಿತ್ತು: ಧ್ಯಾನಗಳು ಮತ್ತು ಕೀರ್ತನೆಗಳು, ತೊಡಗಿಸಿಕೊಳ್ಳುವ ತರಗತಿಗಳು ಮತ್ತು ಕಾರ್ಯಾಗಾರಗಳು, ಆನಂದಕರ ಸೇವಾ ಚಟುವಟಿಕೆಗಳು, ಪ್ರೇರಣಾದಾಯಕ ಸತ್ಸಂಗಗಳು, ವೈಎಸ್ಎಸ್ ಪಾಠಗಳ ಅಧ್ಯಯನ, ಆತ್ಮಾವಲೋಕನ, ಮತ್ತು ವಿಶ್ರಾಂತಿ, ಮನರಂಜನೆ ಮತ್ತು ಸಹಭಾಗಿತ್ವಕ್ಕಾಗಿ ಸಮಯ ಮೀಸಲಾಗಿತ್ತು.
ಈ ಸಮಗ್ರ ಯೋಗೀಯ ಜೀವನಶೈಲಿಯನ್ನು ಯುವ ಅನ್ವೇಷಕರಿಗಾಗಿ ಚಿಂತನಶೀಲವಾಗಿ ರೂಪಿಸಲಾಗಿತ್ತು — ಅವರು ಇದನ್ನು ತಮ್ಮೊಡನೆ ಒಯ್ದು ತಮ್ಮದಾಗಿಸಿಕೊಳ್ಳಬಹುದಾಗಿದೆ.
ಸಂಗಮದ ಮುಖ್ಯಾಂಶಗಳು
ಕಾರ್ಯಕ್ರಮದಲ್ಲಿ ವೈಎಸ್ಎಸ್ ಧ್ಯಾನದ ತಂತ್ರಗಳ ವಿಮರ್ಶೆ ಮತ್ತು ಮಾರ್ಗದರ್ಶನದ ಅಭ್ಯಾಸವನ್ನು ಒಳಗೊಂಡಿದ್ದರೂ, ವಿಶೇಷವಾಗಿ ಯುವ ಅನ್ವೇಷಕರಿಗಾಗಿ ಹೊಸ ಅಂಶಗಳನ್ನು ಪರಿಚಯಿಸಲಾಯಿತು. ಕಾರ್ಯಕ್ರಮಗಳ ವಿವರ:
- ಸಮೂಹ ಧ್ಯಾನಗಳು ಮತ್ತು ಕೀರ್ತನೆಗಳು
- ಪವಿತ್ರ ವೈಎಸ್ಎಸ್ ಧ್ಯಾನ ತಂತ್ರಗಳ ಪರಿಶೀಲನೆ ಮತ್ತು ಮಾರ್ಗದರ್ಶಿ ಅಭ್ಯಾಸ
- ಗುಂಪಿನಲ್ಲಿ ಪಾಠಗಳ ಅಧ್ಯಯನ ಮತ್ತು ಆತ್ಮಾವಲೋಕನ
- ಗುರೂಜಿಯವರ ಬೋಧನೆಗಳು ಮತ್ತು ಅವುಗಳನ್ನು ದೈನಂದಿನ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳುವುದು ಎಂಬುದರ ಕುರಿತು ಪ್ರೇರಣಾದಾಯಕ ಸತ್ಸಂಗಗಳು
- ಕಾರ್ಯಾಗಾರಗಳು ಮತ್ತು ಚರ್ಚಾ ಗುಂಪುಗಳು
- ಆಧ್ಯಾತ್ಮಿಕ ಜ್ಞಾನದ ಸಹಾಯದಿಂದ ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು
- ವೇಗದ ಜಗತ್ತಿನಲ್ಲಿ ಆಂತರಿಕ ಸಮತೋಲನವನ್ನು ಕಂಡುಕೊಳ್ಳುವುದು
- ದಯೆ ಮತ್ತು ಪರಿಗಣನೆಯೊಂದಿಗೆ ಸಂಬಂಧಗಳನ್ನು ಪೋಷಿಸುವುದು
- ಯಶಸ್ಸಿನ ನಿಯಮವನ್ನು ಅನ್ವಯಿಸುವುದು
- ರಾಂಚಿ ಹತ್ತಿರದ ಒಂದು ನೈಸರ್ಗಿಕ ತಾಣಕ್ಕೆ ವಿಹಾರಕ್ಕೆ ತೆರಳುವುದು
- ಹಠ ಯೋಗಾಭ್ಯಾಸಗಳು, ಕ್ರೀಡೆಗಳು ಇತ್ಯಾದಿ ಮನರಂಜನಾ ಚಟುವಟಿಕೆಗಳು.
- ಇತರ ಯುವ ಸಾಧಕರೊಂದಿಗೆ ಸೌಹಾರ್ದತೆ ಬೆಳೆಸಿಕೊಳ್ಳುವುದು
ತರಗತಿಗಳು ಮತ್ತು ಉಪನ್ಯಾಸಗಳು ಇಂಗ್ಲಿಷ್ನಲ್ಲಿ ನಡೆದವು. ಕ್ರಿಯಾ ಯೋಗ ದೀಕ್ಷಾ ಸಮಾರಂಭ ಇಲ್ಲದಿದ್ದರೂ, ಕ್ರಿಯಾ ಯೋಗ ತಂತ್ರದ ಪುನರಾವಲೋಕನ ತರಗತಿಯನ್ನು ನಡೆಸಲಾಯಿತು.
ನಿಮ್ಮ ಆರ್ಥಿಕ ಬೆಂಬಲವನ್ನು ಶ್ಲಾಘಿಸಲಾಗುತ್ತದೆ
ಈ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಆಗುವ ವಿವಿಧ ವೆಚ್ಚಗಳನ್ನು ಭರಿಸಲು ನಾವು ದೇಣಿಗೆಗಳನ್ನು ವಿನಂತಿಸುತ್ತೇವೆ. ನೋಂದಣಿ ಶುಲ್ಕಕ್ಕೆ ಸಹಾಯಧನ ನೀಡಲಾಗಿದೆ, ಇದರಿಂದ ಸೀಮಿತ ಆರ್ಥಿಕ ಸಾಮರ್ಥ್ಯದ ಭಕ್ತರೂ ಸಹ ಭಾಗವಹಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ದೇಣಿಗೆಗಳನ್ನು ನೀಡಲು ಸಮರ್ಥರಾಗಿರುವವರಿಗೆ ನಾವು ಕೃತಜ್ಞರಾಗಿದ್ದೇವೆ. ಇದರಿಂದ ನಮಗೆ ಈ ಸಹಾಯಧನವನ್ನು ನೀಡಲು ಮತ್ತು ಆ ಮೂಲಕ ಗುರುದೇವರ ಆತಿಥ್ಯವನ್ನು ಎಲ್ಲಾ ಪ್ರಾಮಾಣಿಕ ಸಾಧಕರಿಗೆ ವಿಸ್ತರಿಸಲು ಸಾಧ್ಯವಾಗಿದೆ.
ನೋಂದಣಿ ಮತ್ತು ವಿಚಾರಣೆಗಳಿಗಾಗಿ ಸಂಪರ್ಕ ವಿವರಗಳು
ಯೋಗದಾ ಸತ್ಸಂಗ ಶಾಖಾ ಮಠ — ರಾಂಚಿ
ಪರಮಹಂಸ ಯೋಗಾನಂದ ರಸ್ತೆ
ರಾಂಚಿ 834 001
ದೂರವಾಣಿ: (0651) 6655 555 (ಸೋಮವಾರ-ಶನಿವಾರ, ಬೆಳಗ್ಗೆ 9;30 ರಿಂದ ಸಂಜೆ 4:30)
ಇಮೇಲ್: [email protected]
ಯುವಜನರಿಗಾಗಿ ಇರುವ ನಮ್ಮಕಾರ್ಯಕ್ರಮಗಳ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ದಯವಿಟ್ಟು [email protected] ಗೆ ಇಮೇಲ್ ಮಾಡಿ.
















