ಕಾರ್ಯಕ್ರಮದ ಬಗ್ಗೆ
ಮನಸ್ಸು ಮತ್ತು ಭಾವನೆಗಳು ಅಂತರ್ಮುಖಿಯಾದಾಗ, ನೀವು ದೇವರ ಆನಂದವನ್ನು ಅನುಭವಿಸಲು ಪ್ರಾರಂಭಿಸುತ್ತೀರಿ. ಇಂದ್ರಿಯ ಸುಖಗಳು ಶಾಶ್ವತವಲ್ಲ, ಆದರೆ ದೇವರ ಆನಂದವು ಶಾಶ್ವತವಾದುದು. ಅದು ಅನುಪಮ!
— ಶ್ರೀ ಶ್ರೀ ಪರಮಹಂಸ ಯೋಗಾನಂದ
ಒಂದು ಹೊಸ ಕಾರ್ಯಕ್ರಮ ಅರಳುತ್ತಿದೆ
ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್) ಮೊಟ್ಟ ಮೊದಲ ಬಾರಿಗೆ, ಯುವ ಸಾಧಕರಿಗಾಗಿ (23-35 ವರ್ಷ ವಯಸ್ಸಿನವರು) ವಿಶೇಷವಾಗಿ ಸಾಧನಾ ಸಂಗಮವನ್ನು ಆಯೋಜಿಸುತ್ತಿದೆ ಎಂದು ನಾವು ಅಪಾರ ಸಂತೋಷದೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ — ಇದು ರಾಂಚಿಯ ಪ್ರಶಾಂತ ವೈಎಸ್ಎಸ್ ಆಶ್ರಮದಲ್ಲಿ ಸೆಪ್ಟೆಂಬರ್ 10 ರಿಂದ 14, 2025 ರವರೆಗೆ ನಡೆಯುವ ಆಧ್ಯಾತ್ಮಿಕತೆಯಲ್ಲಿ ಮುಳುಗೇಳುವ ಅನುಭವವನ್ನು ನೀಡಲಿದೆ.
ಈ ವಿಶೇಷ ಸಂಗಮವು ಆಂತರಿಕ ಸ್ಪಷ್ಟತೆ ಮತ್ತು ಶಕ್ತಿಗಾಗಿ ಪರಮಹಂಸ ಯೋಗಾನಂದರ ಸಾರ್ವತ್ರಿಕ ಬೋಧನೆಗಳಲ್ಲಿ ಯುವಕರಲ್ಲಿ ಹೆಚ್ಚುತ್ತಿರುವ ಆಸಕ್ತಿಯ ಅಭಿವ್ಯಕ್ತಿಯಾಗಿದೆ.
ಈ ಸಂಗಮವು ಭಾರತದಾದ್ಯಂತದಿಂದ ನೂರಾರು ಯುವ ಭಕ್ತರು ಒಟ್ಟಾಗಿ ಸೇರಿ, ಪರಮಹಂಸ ಯೋಗಾನಂದರ ಬೋಧನೆಗಳನ್ನು ಆಳವಾಗಿ ಅಧ್ಯಯನ ಮಾಡಲು, ಆತ್ಮ ಸೌಹಾರ್ದತೆಯನ್ನು ಬೆಳೆಸಲು ಮತ್ತು ವೇಗವಾಗಿ ಸಾಗುತ್ತಿರುವ ಆಧುನಿಕ ಜಗತ್ತಿಗೆ ಸೂಕ್ತವಾದ ಸಮತೋಲಿತ ಆಧ್ಯಾತ್ಮಿಕ ಜೀವನಶೈಲಿಯನ್ನು ಕಂಡುಕೊಳ್ಳಲು ಒಂದು ಪವಿತ್ರ ಸ್ಥಳವನ್ನು ಒದಗಿಸುತ್ತದೆ.
ಯೋಗ ಪಥದ ಜೀವನಕ್ಕೆ ಪೂರಕವಾದ ಆಧ್ಯಾತ್ಮಿಕ ಅಭ್ಯಾಸ
ಯೋಗಾನಂದಜಿಯ ಸಮತೋಲಿತ ಜೀವನದ ಆದರ್ಶದಲ್ಲಿ ನೆಲೆಯೂರಿರುವ, ಸಂಗಮದ ಅವಧಿಯ ದೈನಂದಿನ ದಿನಚರಿಯು ಸರಳವಾಗಿದ್ದರೂ ಪರಿವರ್ತಕವಾಗಿರುತ್ತದೆ: ಧ್ಯಾನಗಳು ಮತ್ತು ಕೀರ್ತನೆಗಳು, ಆಕರ್ಷಕ ತರಗತಿಗಳು ಮತ್ತು ಕಾರ್ಯಾಗಾರಗಳು, ಆನಂದಮಯ ಸೇವಾ, ಪ್ರೇರಣಾದಾಯಕ ಸತ್ಸಂಗಗಳು, ವೈಎಸ್ಎಸ್ ಪಾಠಗಳ ಅಧ್ಯಯನ, ಆತ್ಮಾವಲೋಕನ, ಮತ್ತು ವಿಶ್ರಾಂತಿ, ಮನರಂಜನೆ ಹಾಗೂ ಸಹಭಾಗಿತ್ವಕ್ಕಾಗಿ ಸಮಯ ಇರುತ್ತದೆ.
ಈ ಸಮಗ್ರ ಯೋಗ ಜೀವನಶೈಲಿಯನ್ನು ಯುವ ಸಾಧಕರಿಗಾಗಿ ಚಿಂತನಶೀಲವಾಗಿ ಯೋಜಿಸಲಾಗಿದೆ ಮತ್ತು ವಿನ್ಯಾಸಗೊಳಿಸಲಾಗಿದೆ — ಇದನ್ನು ಅವರು ತಮ್ಮೊಂದಿಗೆ ಮನೆಗೊಯ್ದು ತಮ್ಮದನ್ನಾಗಿಸಿಕೊಳ್ಳಬಹುದು.
ಸಂಗಮದ ಮುಖ್ಯಾಂಶಗಳು
ಕಾರ್ಯಕ್ರಮವು ವೈಎಸ್ಎಸ್ ಧ್ಯಾನ ತಂತ್ರಗಳ ಪರಿಶೀಲನೆ ಮತ್ತು ಮಾರ್ಗದರ್ಶಿ ಅಭ್ಯಾಸವನ್ನು ಒಳಗೊಂಡಿದ್ದರೂ, ವಿಶೇಷವಾಗಿ ಯುವ ಸಾಧಕರಿಗಾಗಿ ಹೊಸ ಅಂಶಗಳನ್ನು ಪರಿಚಯಿಸಲಾಗಿದೆ. ಕಾರ್ಯಕ್ರಮವು ಒಳಗೊಂಡಿರುವ ಅಂಶಗಳು:
- ಸಮೂಹ ಧ್ಯಾನಗಳು ಮತ್ತು ಕೀರ್ತನೆಗಳು
- ಪವಿತ್ರ ವೈಎಸ್ಎಸ್ ಧ್ಯಾನ ತಂತ್ರಗಳ ಪರಿಶೀಲನೆ ಮತ್ತು ಮಾರ್ಗದರ್ಶಿ ಅಭ್ಯಾಸ
- ಗುಂಪಿನಲ್ಲಿ ಪಾಠಗಳ ಅಧ್ಯಯನ ಮತ್ತು ಆತ್ಮಾವಲೋಕನ
- ಗುರೂಜಿಯವರ ಬೋಧನೆಗಳು ಮತ್ತು ಅವುಗಳನ್ನು ದೈನಂದಿನ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳುವುದು ಎಂಬುದರ ಕುರಿತು ಪ್ರೇರಣಾದಾಯಕ ಸತ್ಸಂಗಗಳು
- ಕಾರ್ಯಾಗಾರಗಳು ಮತ್ತು ಚರ್ಚಾ ಗುಂಪುಗಳು
- ಆಧ್ಯಾತ್ಮಿಕ ಜ್ಞಾನದ ಸಹಾಯದಿಂದ ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು
- ವೇಗದ ಜಗತ್ತಿನಲ್ಲಿ ಆಂತರಿಕ ಸಮತೋಲನವನ್ನು ಕಂಡುಕೊಳ್ಳುವುದು
- ದಯೆ ಮತ್ತು ಪರಿಗಣನೆಯೊಂದಿಗೆ ಸಂಬಂಧಗಳನ್ನು ಪೋಷಿಸುವುದು
- ಯಶಸ್ಸಿನ ನಿಯಮವನ್ನು ಅನ್ವಯಿಸುವುದು
- ರಾಂಚಿ ಹತ್ತಿರದ ಒಂದು ನೈಸರ್ಗಿಕ ತಾಣಕ್ಕೆ ವಿಹಾರಕ್ಕೆ ತೆರಳುವುದು
- ಹಠ ಯೋಗಾಭ್ಯಾಸಗಳು, ಕ್ರೀಡೆಗಳು ಇತ್ಯಾದಿ ಮನರಂಜನಾ ಚಟುವಟಿಕೆಗಳು.
- ಇತರ ಯುವ ಸಾಧಕರೊಂದಿಗೆ ಸೌಹಾರ್ದತೆ ಬೆಳೆಸಿಕೊಳ್ಳುವುದು
ತರಗತಿಗಳು ಮತ್ತು ಭಾಷಣಗಳು ಇಂಗ್ಲಿಷ್ನಲ್ಲಿರುತ್ತವೆ.
ಕ್ರಿಯಾ ಯೋಗ ದೀಕ್ಷಾ ಸಮಾರಂಭ ಇರುವುದಿಲ್ಲವಾದರೂ, ನಾವು ಕ್ರಿಯಾ ಯೋಗ ತಂತ್ರದ ಪರಿಶೀಲನಾ ತರಗತಿಯನ್ನು ನಡೆಸುತ್ತೇವೆ.
ವಿವರವಾದ ವೇಳಾಪಟ್ಟಿ ಕಾರ್ಯಕ್ರಮದ ದಿನಾಂಕ ಹತ್ತಿರಬಂದಂತೆ ಲಭ್ಯವಾಗುತ್ತದೆ. ಕಾರ್ಯಕ್ರಮ ಪ್ರಾರಂಭವಾಗುವ ಎರಡು ವಾರಗಳ ಮೊದಲು ದಯವಿಟ್ಟು ಈ ವಿಭಾಗವನ್ನು ವೀಕ್ಷಿಸಿ.
ಸಂಗಮಕ್ಕಾಗಿ ನೋಂದಣಿ ಈಗ 23 ರಿಂದ 35 ವರ್ಷ ವಯಸ್ಸಿನ ವೈಎಸ್ಎಸ್ ಭಕ್ತರಿಗೆ ತೆರೆದಿರುತ್ತದೆ. ನೀವು ಈ ವಯಸ್ಸಿನ ವ್ಯಾಪ್ತಿಯಿಂದ ಸ್ವಲ್ಪ ಹೊರಗಿದ್ದರೂ, ಭಾಗವಹಿಸಲು ಆಳವಾಗಿ ಆಕರ್ಷಿತರಾಗಿದ್ದರೆ, ಮಾರ್ಗದರ್ಶನಕ್ಕಾಗಿ ವೈಎಸ್ಎಸ್ ಸಹಾಯವಾಣಿಯನ್ನು ಸಂಪರ್ಕಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ನೋಂದಣಿ ಶುಲ್ಕ ಪ್ರತಿ ವ್ಯಕ್ತಿಗೆ ₹2500/-. ಈ ಶುಲ್ಕವು ಊಟದ ವೆಚ್ಚವನ್ನು ಒಳಗೊಂಡಿದೆ. ನೋಂದಣಿ ಶುಲ್ಕವನ್ನು ಪಾವತಿಸಲು ನಿಮಗೆ ಕಷ್ಟವಾಗಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಹೆಚ್ಚಿನ ಮಾಹಿತಿ:
- ನೋಂದಣಿಗೆ ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ.
- ವೈಎಸ್ಎಸ್/ಎಸ್ಆರ್ಎಫ್ ಭಕ್ತರು ಮಾತ್ರ ಸಂಗಮದಲ್ಲಿ ಭಾಗವಹಿಸಬಹುದು.
- ಎಸ್ಆರ್ಎಫ್ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವಾಗತಾರ್ಹರಾಗಿದ್ದರೂ, ಅವರು ಹತ್ತಿರದ ಹೋಟೆಲ್ಗಳಲ್ಲಿ ತಮ್ಮ ವಸತಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಅಂತಹ ಹೋಟೆಲ್ಗಳ ಪಟ್ಟಿಯು ಇಲ್ಲಿ ಲಭ್ಯವಿದೆ.
- ಕಾರ್ಯಕ್ರಮವು ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿರುವ ಕಾರಣ, ದುರ್ಬಲ ಆರೋಗ್ಯ ಅಥವಾ ವಿಶೇಷ ಅಗತ್ಯತೆಗಳಿರುವ ಭಕ್ತರು ಅರ್ಜಿ ಸಲ್ಲಿಸದಿರಲು ಸೂಚಿಸಲಾಗಿದೆ.
ನೋಂದಣಿ ಮಾಹಿತಿ
ನೋಂದಣಿ ಈಗ ಪ್ರಾರಂಭವಾಗಿದೆ!
ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದ ವಿವರವಾದ ಮಾಹಿತಿಯು ಈ ಕೆಳಗಿನಂತಿದೆ:
ಭಕ್ತರ ಪೋರ್ಟಲ್ ಮೂಲಕ ಆನ್ಲೈನ್ ನೋಂದಣಿ:
ತ್ವರಿತ ಮತ್ತು ಸುಲಭ ನೋಂದಣಿಗಾಗಿ, ದಯವಿಟ್ಟು ಕೆಳಗಿನ ಗುಂಡಿಯನ್ನು ಒತ್ತುವ ಮೂಲಕ ಆನ್ಲೈನ್ನಲ್ಲಿ ನೋಂದಾಯಿಸಿ.
ಸಹಾಯವಾಣಿಯನ್ನು ಸಂಪರ್ಕಿಸುವ ಮೂಲಕ ನೋಂದಣಿ:
ದಯವಿಟ್ಟು ರಾಂಚಿ ಆಶ್ರಮ ಸಹಾಯವಾಣಿಗೆ ಕರೆ ಮಾಡಿ (0651 6655 555) ಅಥವಾ ಇಮೇಲ್ ಮಾಡಿ ಮತ್ತು ಈ ಕೆಳಗಿನ ವಿವರಗಳನ್ನು ಒದಗಿಸಿ:
- ನಿಮ್ಮ ಪೂರ್ಣ ಹೆಸರು
- ವಯಸ್ಸು
- ವಿಳಾಸ
- ಇಮೇಲ್ ಮತ್ತು ದೂರವಾಣಿ ಸಂಖ್ಯೆ
- ವೈಎಸ್ಎಸ್ ಪಾಠಗಳ ನೋಂದಣಿ ಸಂಖ್ಯೆ (ಅಥವಾ ಎಸ್ಆರ್ಎಫ್ ಸದಸ್ಯತ್ವ ಸಂಖ್ಯೆ)
- ನೀವು ಯೋಜಿಸಿರುವ ಆಗಮನ ಮತ್ತು ನಿರ್ಗಮನದ ದಿನಾಂಕಗಳು
ನಿಮ್ಮ ಮೊಬೈಲ್ ಅಥವಾ ಇಮೇಲ್ ವಿಳಾಸಕ್ಕೆ ಕಳುಹಿಸುವ ಪಾವತಿ ಲಿಂಕ್ ಮೂಲಕ ನೀವು ಮೊತ್ತವನ್ನು ಪಾವತಿಸಬಹುದು.
ಎಸ್ಆರ್ಎಫ್ ಭಕ್ತರಿಗಾಗಿ ನೋಂದಣಿ:
- ಆಸಕ್ತ ಎಸ್ಆರ್ಎಫ್ ಭಕ್ತರು ದಯವಿಟ್ಟು ಇಮೇಲ್ ಮೂಲಕ ವೈಎಸ್ಎಸ್ ಸಹಾಯವಾಣಿಯನ್ನು ಸಂಪರ್ಕಿಸಿ ಮತ್ತು ಮೇಲೆ ತಿಳಿಸಲಾದ ತಮ್ಮ ಎಲ್ಲಾ ವಿವರಗಳನ್ನು ಒದಗಿಸುವಂತೆ ನಾವು ವಿನಂತಿಸುತ್ತೇವೆ.
- ಎಸ್ಆರ್ಎಫ್ ಭಕ್ತರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಸ್ಥಳದಲ್ಲಿ ಭೋಜನ ಸ್ವೀಕರಿಸಲು ಆದರದ ಸ್ವಾಗತವಿದೆ. ಆದರೆ, ಅವರು ಹತ್ತಿರದ ಯಾವುದೇ ಹೋಟೆಲ್ಗಳಲ್ಲಿ ತಮ್ಮ ವಸತಿ ವ್ಯವಸ್ಥೆಯನ್ನು ಸ್ವತಃ ಮಾಡಿಕೊಳ್ಳಬೇಕೆಂದು ವಿನಂತಿಸಲಾಗಿದೆ. ಅಂತಹ ಹೋಟೆಲ್ಗಳ ಪಟ್ಟಿಯು ಇಲ್ಲಿ ಲಭ್ಯವಿದೆ..
ದಯವಿಟ್ಟು ಗಮನಿಸಿ:
- ನಿಮ್ಮ ನೋಂದಣಿ ದೃಢೀಕರಿಸಿದ ನಂತರ ನೀವು ಭಾಗವಹಿಸಲು ಸಾಧ್ಯವಾಗದಿದ್ದರೆ, ನೋಂದಣಿ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ ಅಥವಾ ಬೇರೆ ವ್ಯಕ್ತಿಗೆ ವರ್ಗಾಯಿಸಲಾಗುವುದಿಲ್ಲ.
- ನೋಂದಣಿ ಯಶಸ್ವಿಯಾದ ನಂತರ, ನಿಮಗೆ ಇಮೇಲ್, ವಾಟ್ಸಾಪ್ ಅಥವಾ ಎಸ್ಎಂಎಸ್ ಮೂಲಕ ದೃಢೀಕರಣ ದೊರೆಯುತ್ತದೆ. ನಿಮಗೆ ಅಂತಹ ಯಾವುದೇ ಮಾಹಿತಿ ಬರದಿದ್ದರೆ, ದಯವಿಟ್ಟು ವೈಎಸ್ಎಸ್ ರಾಂಚಿ ಸಹಾಯವಾಣಿಯನ್ನು ಫೋನ್ (0651 6655 555) ಅಥವಾ ಇಮೇಲ್ ([email protected]) ಮೂಲಕ ಸಂಪರ್ಕಿಸಿ.
ಕಾರ್ಯಕ್ರಮವು ಬುಧವಾರ ಬೆಳಿಗ್ಗೆ ಪ್ರಾರಂಭವಾಗಿ, ಭಾನುವಾರ ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಳ್ಳುತ್ತದೆ. ಭಾಗವಹಿಸುವವರು ಮಂಗಳವಾರದೊಳಗೆ ಆಗಮಿಸಲು ವಿನಂತಿಸಲಾಗಿದೆ. ಆದಾಗ್ಯೂ, ಎಲ್ಲರೂ ಎರಡು ದಿನ ಮುಂಚಿತವಾಗಿ ಆಗಮಿಸಬಹುದು ಮತ್ತು ಕಾರ್ಯಕ್ರಮ ಮುಗಿದ ನಂತರ ಒಂದು ಹೆಚ್ಚುವರಿ ದಿನ ಉಳಿದುಕೊಳ್ಳಲೂ ಎಲ್ಲರಿಗೂ ಸ್ವಾಗತ.
ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ವಸತಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಕುಟುಂಬ ಸದಸ್ಯರು ಅದಕ್ಕೆ ಅನುಗುಣವಾಗಿ ಯೋಜನೆ ರೂಪಿಸಲು ಮತ್ತು ಸಾಮಾನುಗಳನ್ನು ಸಿದ್ಧಪಡಿಸಿಕೊಳ್ಳಲು ವಿನಂತಿಸಲಾಗಿದೆ.
ಭಾಗವಹಿಸುವ ಎಲ್ಲರೂ ಆಶ್ರಮದ ಆವರಣದಲ್ಲಿಯೇ ಉಳಿದುಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಆದಾಗ್ಯೂ, ವಿಶೇಷ ವಸತಿ ಅಥವಾ ಆಹಾರದ ಅಗತ್ಯಗಳಿರುವ ಭಕ್ತರು ದಯವಿಟ್ಟು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು. ಹತ್ತಿರದ ಹೋಟೆಲ್ಗಳ ಪಟ್ಟಿಯು ಇಲ್ಲಿ ಲಭ್ಯವಿದೆ.
ಹಿಂದಿನಂತೆಯೇ, ಈ ಬಾರಿಯೂ ನೋಂದಣಿ, ವಸತಿ, ಆಡಿಯೋ-ವಿಶುವಲ್, ಊಟೋಪಚಾರ, ನೈರ್ಮಲ್ಯ, ಜನಸಮೂಹ ನಿರ್ವಹಣೆ ಮತ್ತು ಇತರೆ ವಿಭಾಗಗಳಲ್ಲಿ ಸೇವೆ ಸಲ್ಲಿಸಲು ಭಕ್ತ-ಸ್ವಯಂಸೇವಕರ ಅಗತ್ಯವಿದೆ. ಕೆಲವು ವಿಭಾಗಗಳಲ್ಲಿ, ಕಾರ್ಯಕ್ರಮ ಪ್ರಾರಂಭವಾಗುವ ಒಂದು ಅಥವಾ ಎರಡು ದಿನ ಮುಂಚಿತವಾಗಿ ಸ್ವಯಂಸೇವಕರು ಆಗಮಿಸುವ ಅಗತ್ಯವಿರಬಹುದು.
ಸೇವೆಯನ್ನು ಸಲ್ಲಿಸಲು ನಿಮಗೆ ಪ್ರೇರಣೆ ಇದ್ದರೆ, ನಿಮ್ಮ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡುವಾಗ ನಿಮ್ಮ ಆಸಕ್ತಿಯನ್ನು ದಯವಿಟ್ಟು ಸೂಚಿಸಿ.
ನಿಮ್ಮ ಆರ್ಥಿಕ ಬೆಂಬಲವನ್ನು ಶ್ಲಾಘಿಸಲಾಗುತ್ತದೆ
ಈ ಕಾರ್ಯಕ್ರಮಗಳನ್ನು ಆಯೋಜಿಸಲು ತಗಲುವ ವಿವಿಧ ವೆಚ್ಚಗಳನ್ನು ಭರಿಸಲು ನಾವು ದೇಣಿಗೆಗಳನ್ನು ಕೋರುತ್ತಿದ್ದೇವೆ. ನೋಂದಣಿ ಶುಲ್ಕವನ್ನು ಸಹಾಯಧನವಾಗಿ ಮಾಡಲಾಗಿದೆ, ಇದರಿಂದಾಗಿ ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಭಕ್ತರು ಸಹ ಭಾಗವಹಿಸಬಹುದು. ಹೆಚ್ಚಿನ ದೇಣಿಗೆಗಳನ್ನು ನೀಡಲು ಸಮರ್ಥರಾಗಿರುವವರಿಗೆ ನಾವು ಕೃತಜ್ಞರಾಗಿದ್ದೇವೆ, ಏಕೆಂದರೆ ಇದು ನಮಗೆ ಈ ಸಹಾಯಧನವನ್ನು ನೀಡಲು ಮತ್ತು ಗುರುದೇವರ ಆತಿಥ್ಯವನ್ನು ಎಲ್ಲಾ ಪ್ರಾಮಾಣಿಕ ಸಾಧಕರಿಗೂ ವಿಸ್ತರಿಸಲು ಸಹಾಯ ಮಾಡುತ್ತದೆ.
ನೋಂದಣಿ ಮತ್ತು ವಿಚಾರಣೆಗಳಿಗಾಗಿ ಸಂಪರ್ಕ ವಿವರಗಳು
ಯೋಗದಾ ಸತ್ಸಂಗ ಶಾಖಾ ಮಠ — ರಾಂಚಿ
ಪರಮಹಂಸ ಯೋಗಾನಂದ ರಸ್ತೆ
ರಾಂಚಿ 834 001
ದೂರವಾಣಿ: (0651) 6655 555 (ಸೋಮವಾರ-ಶನಿವಾರ, ಬೆಳಗ್ಗೆ 9;30 ರಿಂದ ಸಂಜೆ 4:30)
ಇಮೇಲ್: [email protected]
ಯುವಜನರಿಗಾಗಿ ಇರುವ ನಮ್ಮಕಾರ್ಯಕ್ರಮಗಳ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ದಯವಿಟ್ಟು [email protected] ಗೆ ಇಮೇಲ್ ಮಾಡಿ.