
ಯೋಗದಾ ಸತ್ಸಂಗ ಶಾಖಾ ಆಶ್ರಮ – ನೊಯ್ಡಾವನ್ನು ಪ್ರಥಮ ಹಂತದ ನಿರ್ಮಾಣವಾದ ನಂತರ ಜನವರಿ 2010ರಲ್ಲಿ ಉದ್ಘಾಟಿಸಲಾಯಿತು. ದೆಹಲಿ-ಉತ್ತರ ಪ್ರದೇಶ ರಾಜ್ಯದ ಗಡಿ ಪ್ರದೇಶದಿಂದ ಕೇವಲ 4 ಕಿ.ಮೀ. ದೂರದಲ್ಲಿ 5 ಎಕರೆ ಜಾಗದಲ್ಲಿ ಈ ಆಶ್ರಮವನ್ನು ನಿರ್ಮಿಸಲಾಗಿದೆ. ಆಡಳಿತ ಕಛೇರಿಯಿರುವ ಒಂದು ವಿಭಾಗ ಹಾಗೂ ಆಶ್ರಯಧಾಮಗಳಿರುವ ಎರಡು ಕಟ್ಟಡಗಳ ವಿಭಾಗಗಳನ್ನು ಆಶ್ರಮವು ಹೊಂದಿದೆ. ಆಡಳಿತ ವಿಭಾಗವು ಒಂದು ಸಂಪೂರ್ಣ ನೆಲಮಾಳಿಗೆಯಿರುವ 3 ಅಂತಸ್ತುಗಳ ಕಟ್ಟಡವನ್ನು ಹೊಂದಿದೆ. ಇದು ಧ್ಯಾನ ಮಂದಿರ, ಸ್ವಾಗತ ಕೇಂದ್ರ, ಪುಸ್ತಕಗಳು/ಗ್ರಂಥಾಲಯ, ಸಮಾಲೋಚನಾ ಕೊಠಡಿಗಳು, ಅಡುಗೆ ಕೋಣೆ/ಭೋಜನಾಲಯ, ಕಛೇರಿಗಳನ್ನು ಒಳಗೊಂಡಿದೆ. ರಾಷ್ಟ್ರದ ರಾಜಧಾನಿಯ ಪ್ರದೇಶದ ಮೂಲಕ ಪ್ರವಾಸ ಕೈಗೊಳ್ಳುವ ಸನ್ಯಾಸಿಗಳು ಮತ್ತು ಭಕ್ತರು ಮುಂಚಿತವಾಗಿ ಕಾಯ್ದಿರಿಸಿದಲ್ಲಿ ಗರಿಷ್ಠ 3 ದಿನಗಳವರೆಗೆ ತಂಗಲು ಕೊಠಡಿಗಳ ಲಭ್ಯತೆಯಿದೆ.
ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಆಶ್ರಯಧಾಮಗಳಿವೆ, ಮತ್ತು ಪ್ರತಿ ಆಶ್ರಯಧಾಮದಲ್ಲಿ 30 ಕೊಠಡಿಗಳಿವೆ. ವ್ಯಕ್ತಿಗಳು ಗಮನ ಕೇಂದ್ರೀಕರಿಸಲು ಅನುಕೂಲವಾಗುವಂತೆ ಈ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ ಮತ್ತು ಇಲ್ಲಿ ಆಧ್ಯಾತ್ಮಿಕ ಧ್ಯಾನ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ವೈಯಕ್ತಿಕ ಧ್ಯಾನವನ್ನು ಕೈಗೊಳ್ಳಲು ಭಕ್ತರು ಇಲ್ಲಿ 3 ರಿಂದ 5 ದಿವಸಗಳವರೆಗೆ ಉಳಿದುಕೊಂಡು ಮೌನ ಧ್ಯಾನ, ಅಧ್ಯಯನ ಮತ್ತು ಸಾಧನೆಗಳನ್ನು ಮಾಡಲು ಮತ್ತು ಆಶ್ರಮದ ಸನ್ಯಾಸಿಗಳ ಜೊತೆ ಸಮಾಲೋಚನಾ ಭೇಟಿಗೆ ಆಹ್ವಾನ ನೀಡಲಾಗುತ್ತದೆ. ಇದರ ಜೊತೆ, ವಾರಾಂತ್ಯದಲ್ಲಿ ಸನ್ಯಾಸಿಗಳಿಂದ ನಿಯಮಿತವಾಗಿ ಆಧ್ಯಾತ್ಮಿಕ ಶಿಬಿರಗಳನ್ನು ನಡೆಸಲಾಗುತ್ತದೆ. ಈ ಶಿಬಿರಗಳು ಸಾಮಾನ್ಯವಾಗಿ 3 ರಿಂದ 5 ದಿನಗಳ ಅವಧಿಯವಾಗಿರುತ್ತವೆ. ನಮ್ಮ ದಿವ್ಯ ಗುರುಗಳ ಬೋಧನೆಗಳು, ಬದುಕುವುದು-ಹೇಗೆ ಕುರಿತ ತತ್ವಗಳು, ಮತ್ತು ಏಕಾಗ್ರತೆ ಮತ್ತು ಧ್ಯಾನದ ತಂತ್ರಗಳ ಕುರಿತಾದ ನಿರ್ದಿಷ್ಟ ವಿಷಯಗಳನ್ನು ಈ ಶಿಬಿರಗಳು ಹೊಂದಿರುತ್ತವೆ. ಈ ಎರಡು ಸಂದರ್ಭಗಳಲ್ಲಿ ಮುಂಗಡ ಕಾಯ್ದಿರಿಸುವುದು ಅವಶ್ಯಕವಾಗಿದೆ.
ಆಶ್ರಮದಲ್ಲಿ ಚಿಕ್ಕ ಮತ್ತು ದೊಡ್ಡ ಪ್ರಮಾಣದ ಸಂಗಮಗಳನ್ನು ಆಯೋಜಿಸಲಾಗುತ್ತದೆ.
ನಿಮ್ಮ ಭೇಟಿಯನ್ನು ಯೋಜಿಸಿಕೊಳ್ಳಿ
ವೈಎಸ್ಎಸ್ ಮತ್ತು ಎಸ್ಆರ್ಎಫ್ ಪಾಠಗಳ ವಿದ್ಯಾರ್ಥಿಗಳು ಐದು ದಿನಗಳವರೆಗೆ ಆಶ್ರಮದಲ್ಲಿ ಉಳಿಯಲು ಸ್ವಾಗತ. ರೀಚಾರ್ಜ್ ಮಾಡಿಕೊಳ್ಳಲು ಮತ್ತು ಪುನಶ್ಚೇತನಕ್ಕಾಗಿ ವೈಯಕ್ತಿಕ ಧ್ಯಾನ ಶಿಬಿರವನ್ನು ಕೈಗೊಳ್ಳಲು ಅಥವಾ ಆಶ್ರಮವು ನಡೆಸಿಕೊಡುವ ಯಾವುದಾದರೂ ಒಂದು ಧ್ಯಾನ ಶಿಬಿರದಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲು ನಾವು ಭಕ್ತರನ್ನು ಪ್ರೋತ್ಸಾಹಿಸುತ್ತೇವೆ. ಈ ಧ್ಯಾನ ಶಿಬಿರಗಳ ಸಮಯದಲ್ಲಿ, ವೈಎಸ್ಎಸ್ ಸನ್ಯಾಸಿಗಳು ದಿನಕ್ಕೆ ಎರಡು ಬಾರಿ ನಡೆಸಿಕೊಡುವ ಸಮೂಹ ಧ್ಯಾನಗಳಲ್ಲಿ ನೀವು ಭಾಗವಹಿಸಬಹುದು ಮತ್ತು ಯೋಗದಾ ಸತ್ಸಂಗ ಬೋಧನೆಗಳ ಅಧ್ಯಯನ ಮತ್ತು ಅಭ್ಯಾಸದಲ್ಲಿ ಆಧ್ಯಾತ್ಮಿಕ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಬಹುದು.
ಆಶ್ರಮದಲ್ಲಿ ಸ್ಥಳ ಕಾದಿರಿಸಲು ದಯವಿಟ್ಟು ಕೆಳಗಿನ ಬಟನ್ ಮೇಲೆ ಒತ್ತಿ.