
Yogoda Satsanga Dhyana Kendra – Serampore
57, Netaji Subhas Avenue
Hooghly - 712201
West Bengal
ದೈನಂದಿನ ವ್ಯಸ್ತತೆಯಿಂದ ಹಿಂದೆ ಸರಿದು, ಮೌನದಲ್ಲಿ ನಿಮ್ಮನ್ನು ನೀವು ಪುನಶ್ಚೇತನಗೊಳಿಸಿಕೊಳ್ಳಿ ಮತ್ತು ದಿವ್ಯತೆಯ ಜಾಗೃತಿಯನ್ನು ಆಳಗೊಳಿಸಿಕೊಳ್ಳಿ.
ದೇವರೊಂದಿಗೆ ಕಳೆದ ಏಕಾಂತತೆಯ ಸಮಯವು ನಿಮ್ಮ ಮನಸ್ಸು, ದೇಹ ಮತ್ತು ಆತ್ಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಅಚ್ಚರಿಯನ್ನೇ ಉಂಟುಮಾಡಬಹುದು… ಮೌನದ ದ್ವಾರಗಳ ಮೂಲಕ ಜ್ಞಾನ ಮತ್ತು ಶಾಂತಿಯ ಉಪಶಮನಕಾರಿ ಸೂರ್ಯನ ಬೆಳಕು ನಿನ್ನ ಮೇಲೆ ಪ್ರಕಾಶಿಸಲಿದೆ.
— ಶ್ರೀ ಶ್ರೀ ಪರಮಹಂಸ ಯೋಗಾನಂದ
ಯೋಗದಾ ಸತ್ಸಂಗ ಸೊಸೈಟಿಯ “ಹೌ-ಟು-ಲಿವ್” ಶಿಬಿರ ಕಾರ್ಯಕ್ರಮಗಳು ಆಧ್ಯಾತ್ಮಿಕ ಪುನರುಜ್ಜೀವನ ಇಚ್ಛಿಸುವ ಮತ್ತು ದಿನನಿತ್ಯದ ಜೀವನದ ಒತ್ತಡಗಳಿಂದ – ಕೇವಲ ಕೆಲವು ದಿನಗಳಿಗಾದರೂ – ದೂರವಿದ್ದು ದಿವ್ಯತೆಯ ಜಾಗೃತಿಯನ್ನು ಆಳಗೊಳಿಸಲು ಬಯಸುವ ಎಲ್ಲರಿಗೂ ತೆರೆದಿವೆ. ಈ ಕಾರ್ಯಕ್ರಮಗಳು, ಪರಮಹಂಸ ಯೋಗಾನಂದರವರ ಮಾತಿನಲ್ಲಿ ಹೇಳುವುದಾದರೆ, “ಅನಂತ ಶಕ್ತಿಯಿಂದ ಪುನಶ್ಚೇತನಗೊಳ್ಳಲು ಮಾತ್ರ ಮೀಸಲಾಗಿರುವ ಮೌನದ ಶಕ್ತಿಕೇಂದ್ರ”ವನ್ನು ಒದಗಿಸುತ್ತವೆ.
ನಿಷ್ಠಾವಂತ ಸಾಧಕರಿಗೆ ನಿತ್ಯಜೀವನದ ಬಿಡುವಿಲ್ಲದ ಚಟುವಟಿಕೆಗಳಿಂದ ತಮ್ಮ ಮನಸ್ಸನ್ನು ಹಿಂದಕ್ಕೆ ಎಳೆದು ಆಂತರಿಕ ಮೌನದಲ್ಲಿ ಕೇಂದ್ರೀಕರಿಸುವ ಅದ್ಭುತ ಅವಕಾಶ ದೊರೆಯುತ್ತದೆ ಮತ್ತು ಈ ಮೂಲಕ ಅವರು ದೇವರ ಶಾಂತಿ ಮತ್ತು ಆನಂದ ಎಂಬ ಅಮೃತವನ್ನು ಪಾನ ಮಾಡುವಂತಾಗುತ್ತದೆ. ಅವರು ವಿಶ್ರಾಂತಿಯನ್ನು ಪಡೆಯಲು, ಆಧ್ಯಾತ್ಮಿಕ ಪ್ರೇರಣೆ ಮತ್ತು ಪುನರುಜ್ಜೀವನವನ್ನು ಅನುಭವಿಸಲು ಶಿಬಿರಕ್ಕೆ ಬರಬಹುದು. ಅಥವಾ, ಆಳವಾದ ಧ್ಯಾನ, ಆತ್ಮಚಿಂತನೆ, ಆಂತರ್ಯ ಜ್ಞಾನದಿಂದ ಮಾತ್ರ ಉತ್ತರಿಸಬಹುದಾದ ಪ್ರಶ್ನೆಗಳಿಗೆ ಉತ್ತರಗಳನ್ನು ಮತ್ತು ಜೀವನದ ಗಾಢ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಬರಬಹುದು.
ಒಬ್ಬ ಭಕ್ತನು ತಾನಾಗಿ ಮೌನ ಮತ್ತು ಆತ್ಮಚಿಂತನೆಗೆ ಮುಕ್ತವಾದ ವೈಯಕ್ತಿಕ ಶಿಬಿರಕ್ಕೆ ಬರುವುದಾಗಿ ಆಯ್ಕಮಾಡಿಕೊಳ್ಳಬಹುದು, ಅಥವಾ ಪರಮಹಂಸ ಯೋಗಾನಂದರ ಹೌ-ಟು-ಲಿವ್ ಎಂಬ ದಿವ್ಯಜ್ಞಾನಾಧಾರಿತ ಪ್ರೇರಣಾದಾಯಕ ಅಧಿವೇಶನಗಳು ಹಾಗೂ ನಿತ್ಯ ಧ್ಯಾನಗಳಿಂದ ಕೂಡಿದ ಸಂಕೀರ್ಣ ಕಾರ್ಯಕ್ರಮವಿರುವ ಸಂಘಟಿತ ಧ್ಯಾನ ಶಿಬಿರದಲ್ಲಿ ಭಾಗವಹಿಸಬಹುದು. ಈ ಶಿಬಿರಗಳು ವೈಎಸ್ಎಸ್ ಆಶ್ರಮಗಳು ಹಾಗೂ ಭಾರತದಾದ್ಯಂತ ಇರುವ ವೈಎಸ್ಎಸ್ ಕೇಂದ್ರಗಳಲ್ಲಿ ವರ್ಷಪೂರ್ತಿ ಆಯೋಜಿಸಲ್ಪಟ್ಟಿರುತ್ತವೆ.
ಯೋಗದ ಸತ್ಸಂಗ ಸಂಸ್ಥೆ ಭಾರತದಾದ್ಯಂತ ವಿವಿಧ ಕೇಂದ್ರಗಳನ್ನು ಹೊಂದಿದ್ದು, ಇವು ವಿಶೇಷವಾಗಿ ಶಿಬಿರಕ್ಕೆ ಮೀಸಲಾಗಿರುತ್ತವೆ. ಶಾಂತ, ನೈಸರ್ಗಿಕ ವಾತಾವರಣದಲ್ಲಿ, ನಗರ ಜೀವನದ ಗದ್ದಲದಿಂದ ದೂರದಲ್ಲಿರುವ ಈ ಕೇಂದ್ರಗಳು ತಪೋವನಾರ್ಥಿಗಳಿಗೆ ವಿಶ್ರಾಂತಿ ಪಡೆಯಲು, ತಮ್ಮ ಸಾಧನೆಗೆ ಆಳವಾಗಿ ತೊಡಗಲು ಮತ್ತು ತಮ್ಮ ನಿಜಸ್ವಭಾವದೊಂದಿಗೆ ಹತ್ತಿರವಾಗಲು ಆದರ್ಶಪೂರ್ಣ ಪರಿಸರವನ್ನು ಒದಗಿಸುತ್ತವೆ.
ಈ ಕೇಂದ್ರಗಳ ಜೊತೆಗೆ, ವಿವಿಧ ವೈಎಸ್ಎಸ್ ಆಶ್ರಮಗಳಲ್ಲಿ ಸಹ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಭಾರತದೆಲ್ಲೆಡೆ ಇರುವ ವಿವಿಧ ವೈಎಸ್ಎಸ್ ಆಶ್ರಮಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇಲ್ಲಿ ಒತ್ತಿ.
ಜುಲೈ – ಸೆಪ್ಟೆಂಬರ್ 2025
ఈ సంవత్సరం తృతీయ త్రైమాసికంలో వై.ఎస్.ఎస్. ఆశ్రమాలు మరియు ఏకాంత ధ్యాన వాస కేంద్రాల వద్ద జరిగబోయే ఏకాంత ధ్యాన వాసాల గురించి ప్రకటించడం మాకెంతో ఆహ్లాదాన్ని కలిగిస్తోంది. ಉಳಿದ ತಿಂಗಳ ಶಿಬಿರಗಳ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.
ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ||
---|---|---|---|---|---|
ವೈಎಸ್ಎಸ್ ನೋಯ್ಡಾ ಆಶ್ರಮ | — | ಜುಲೈ 18-20* | — | ಸೆಪ್ಟೆಂಬರ್ 12-14* | |
ವೈಎಸ್ಎಸ್ ದ್ವಾರಾಹಟ್ಆಶ್ರಮ | — | — | — | ಸೆಪ್ಟೆಂಬರ್ 28-30* | |
ಇಗತ್ಪುರಿ | ಜೂನ್ 14-15 | ಜುಲೈ 9-11 ಜುಲೈ 25-27 | ಆಗಸ್ಟ್ 14-17 | ಸೆಪ್ಟೆಂಬರ್ 26-28 | |
ಶಿಮ್ಲಾ | ಜೂನ್ 6-8 ಜೂನ್ 20-22 | — | ಆಗಸ್ಟ್ 15-17 | ಸೆಪ್ಟೆಂಬರ್ 5-7 ಸೆಪ್ಟೆಂಬರ್ 19-21 | |
ಪುಣೆ | ಜೂನ್ 28-29 | ಜುಲೈ 26-27 | ಆಗಸ್ಟ್ 30-31 | ಸೆಪ್ಟೆಂಬರ್ 27-28 | |
ಕೊಯಮತ್ತೂರು | — | ಜುಲೈ 18-20* | — | ಸೆಪ್ಟೆಂಬರ್ 27-28 | |
ರಾಜಮಂಡ್ರಿ | — | ಜುಲೈ 18-20* | — | ಜುಲೈ 12-14* |
ದಯವಿಟ್ಟು ಗಮನಿಸಿ:
ವೈಎಸ್ಎಸ್ ಮತ್ತು ಎಸ್ ಆರ್ ಎಫ್ ಪಾಠಗಳ ವಿದ್ಯಾರ್ಥಿಗಳು ಈ ಯೋಜಿತ ಶಿಬಿರಗಳಲ್ಲಿ ಭಾಗವಹಿಸಲು ಅಥವಾ ತಮಗೆ ಸೂಕ್ತವಾದ ಸಮಯದಲ್ಲಿ ವೈಯಕ್ತಿಕ ಶಿಬಿರವನ್ನು ಯೋಜನೆ ಮಾಡಲು ಸ್ವಾಗತಿಸಲಾಗುತ್ತದೆ. ಈ ಶಿಬಿರ ಕಾರ್ಯಕ್ರಮಗಳಲ್ಲಿ ಯಾವುದರಲ್ಲಾದರೂ ನೀವು ಭಾಗವಹಿಸಲು ಬಯಸಿದರೆ, ದಯವಿಟ್ಟು ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ಕೆಳಗಿನ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಸಂಬಂಧಿತ ಆಶ್ರಮ/ ಶಿಬಿರ ಸ್ಥಳಕ್ಕೆ ತಿಳಿಸಿ:
ದಯವಿಟ್ಟು ಗಮನಿಸಿ:
ಈ ಶಿಬಿರಗಳಿಗೆ ಯಾವುದೇ ನಿಗದಿತ ಶುಲ್ಕವಿಲ್ಲ. ಗುರುದೇವರ ಶಿಬಿರಗಳು — ನೀವು ಆರ್ಥಿಕ ಸಹಾಯ ಮಾಡುವ ಸಾಮರ್ಥ್ಯ ಹೊಂದಿದ್ದೀರಾ ಅಥವಾ ಇಲ್ಲವೋ ಎಂಬುದರ ಹೊರತಾಗಿ ಎಲ್ಲರಿಗೂ ಮುಕ್ತವಾಗಿವೆ. ಈ ಶಿಬಿರದ ಸೌಲಭ್ಯಗಳಾದ ಭೋಜನ, ವಸತಿ, ನಿರ್ವಹಣೆ ಮತ್ತು ಇತರೆ ವೆಚ್ಚಗಳು ನಿಮ್ಮ ದಾನಗಳಿಂದ ನಿರ್ವಹಿಸಲ್ಪಡುತ್ತಿರುವುದರಿಂದ, ಹೆಚ್ಚಿನ ಹಣಕಾಸು ಸಹಾಯ ನೀಡುವ ಮೂಲಕ ನಮಗೆ ವೆಚ್ಚಗಳನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಪ್ರಾಮಾಣಿಕ ಆತ್ಮಸಾಧಕರಿಗೆ ಗುರುದೇವರ ಆತಿಥ್ಯವನ್ನು ವಿಸ್ತರಿಸಲು ಸಾಧ್ಯವಾಗುವಂತೆ ಮಾಡುವ ಎಲ್ಲಾ ಭಕ್ತರಿಗೆ ನಾವು ಕೃತಜ್ಞರಾಗಿದ್ದೇವೆ.
ಆನ್ಲೈನ್ ಮೂಲಕ ದೇಣಿಗೆಯನ್ನು ನೀಡಲು ಮೊದಲು ‘ಕೇಂದ್ರ ನಿಧಿ’ ಆಯ್ಕೆಮಾಡಿ, ನಂತರ ‘ಕೇಂದ್ರದ ಹೆಸರು’ ಎಂಬ ಪಟ್ಟಿಯಿಂದ ಶಿಬಿರದ ಸ್ಥಳದ ಹೆಸರನ್ನು ಆಯ್ಕೆಮಾಡಿ. ಅಲ್ಲದೆ, ನೀವು ಚೆಕ್ ಮೂಲಕವೂ ಶಿಬಿರದ ಸ್ಥಳಕ್ಕೆ ದೇಣಿಗೆಯನ್ನು ಕಳುಹಿಸಬಹುದಾಗಿದೆ.
ಶಿಬಿರದ ಸಮಯದಲ್ಲಿ ನೀಮ್ಮ ಪಾತ್ರವೇನೆಂದರೆ, ವಿಶ್ರಾಂತಿ ಪಡೆಯುವುದು ಮತ್ತು ಭಗವಂತನ ಸರ್ವವ್ಯಾಪಿಯಾದ ಆಶೀರ್ವಾದಗಳನ್ನು ಸ್ವೀಕರಿಸಲು ಗ್ರಹನಶೀಲರಾಗಿ. ಶುದ್ಧ ಗಾಳಿಯಲ್ಲಿ ಕಾಲ ಕಳೆಯುವುದು, ವ್ಯಾಯಾಮ ಮಾಡುವುದು ಮತ್ತು ವಿಶ್ರಾಂತಿ ಪಡೆಯುವುದರಿಂದ ದೈಹಿಕವಾಗಿ ವಿಶ್ರಮಿಸಿ. ದಿನನಿತ್ಯದ ಚಿಂತೆಗಳು ಮತ್ತು ಒತ್ತಡಗಳನ್ನು ಬದಿಗಿಟ್ಟು ಮನಸ್ಸನ್ನು ಶಾಂತಗೊಳಿಸಿ. ಬಾಹ್ಯ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ತ್ಯಜಿಸಿ, ದೇವರನ್ನು ಗ್ರಹಿಸುವಂತವರಾಗಿ. ದೇವರು ನಿಮ್ಮ ಮನಸ್ಸಿನ ಶ್ರೇಷ್ಠ ಚಿಂತನೆ ಆಗಲಿ ಮತ್ತು ನಿಮ್ಮ ಹೃದಯದ ಆಳವಾದ ಆಸೆ ಆಗಲಿ. ನಿಮ್ಮ ಒಳಗಿನ ಅವನ ಉಪಸ್ಥಿತಿಯ ಬಗ್ಗೆ ಹೆಚ್ಚುತ್ತಿರುವ ಅರಿವು ಉಳಿದ ಎಲ್ಲಾ ಕೆಲಸಗಳನ್ನು ಮಾಡುತ್ತದೆ. ನಿರಂತರ ಚಟುವಟಿಕೆಯಿಂದ ಹಿಂದೆ ಸರಿದು ದೇವರ ಬಗ್ಗೆ ಆಳವಾದ ಜಾಗೃತಿಯನ್ನು ಬೆಳೆಸುವ ಶಿಬಿರದ ಅನುಭವವು, ಅವನಿಗೆ ನಿಮ್ಮ ಶಕ್ತಿಯನ್ನು ಪುನರುಜ್ಜೀವನಗೊಳಿಸಲು ಮತ್ತು ನಿಮಗೆ ಶಾಶ್ವತ ಶಾಂತಿ ಮತ್ತು ಆನಂದವನ್ನು ನೀಡಲು ಅನುವುಮಾಡಿಕೊಡುತ್ತದೆ.
ಶಿಬಿರದ ಸುಂದರ ಪರಿಸರದಲ್ಲಿ ದೇವರ ಉಪಸ್ಥಿತಿಯನ್ನು ಅನುಭವಿಸುತ್ತಾ ವಿಶ್ರಾಂತಿ ಪಡೆಯಲು ಸಾಕಷ್ಟು ಮುಕ್ತ ಸಮಯವು ಇರುತ್ತದೆ. ಭಕ್ತರು ತಾಜಾ ಹವೆಯಲ್ಲಿ ನಡಿಗೆ ಅಥವಾ ವ್ಯಾಯಾಮದ ಮೂಲಕ ದೈಹಿಕ ವಿಶ್ರಾಂತಿಯನ್ನು ಪಡೆಯಬಹುದು. ಬೆಳಗಿನ ಹಾಗೂ ಸಂಜೆಯ ಸಮೂಹ ಧ್ಯಾನಗಳ ಜೊತೆಗೆ, ಭಕ್ತರು ವೈಯಕ್ತಿಕ ಧ್ಯಾನಕ್ಕೂ ಸಮಯವನ್ನು ಮೀಸಲಿಡಬಹುದು.
ಫಲಪ್ರದವಾದ ಶಿಬಿರದ ಜವಾಬ್ದಾರಿ ಮುಖ್ಯವಾಗಿ ಪ್ರತಿ ವ್ಯಕ್ತಿಯ ಮೇಲಿದೆ. ನೀವು ನಿಮ್ಮ ಆತ್ಮವನ್ನು ಪುನರುಜ್ಜೀವನಗೊಳಿಸಲು ಬಂದಿರುವಿರೋ ಅಥವಾ ಒಳಗಿನಿಂದ ಕಾಡುವ ಪ್ರಶ್ನೆಗಳು ಮತ್ತು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಬಂದಿರುವಿರೋ ಎಂಬುದರ ಯಶಸ್ಸು ಕೊನೆಗೆ ದೇವರೊಂದಿಗೆ ಇರುವ ನಿಮ್ಮ ವೈಯಕ್ತಿಕ ಸಂಬಂಧದ ಮೇಲೆ ಅವಲಂಬಿತವಾಗಿರುತ್ತದೆ — ಜೀವ, ಜ್ಞಾನ, ಆರೋಗ್ಯ ಮತ್ತು ಸಂತೋಷದ ಮೂಲವಾದ ದೈವಿಕ ಶಕ್ತಿ. ನೀವು ಎಷ್ಟು ಮಟ್ಟಿಗೆ ಆತನ ಶಾಶ್ವತ ಉಪಸ್ಥಿತಿಯ ಅರಿವನ್ನು ಬೆಳೆಸುತ್ತೀರೋ, ಅಷ್ಟು ಹೆಚ್ಚು ಪ್ರೇರಣೆ, ಭರವಸೆ, ಮತ್ತು ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯುವ ದಿಕ್ಕಿನಲ್ಲಿ ಮಾರ್ಗದರ್ಶನವನ್ನು ಪಡೆಯುತ್ತೀರಿ.
ಈ ಕೆಳಗಿನ ಅಂಶಗಳನ್ನು ಪಾಲಿಸುವುದರಿಂದ ಆ ಅರಿವನ್ನು ಬೆಳೆಸಿಕೊಳ್ಳಲು ನಿಮಗೆ ತುಂಬಾ ಸಹಾಯವಾಗುತ್ತದೆ:
ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:
ಇದನ್ನು ಹಂಚಿಕೊಳ್ಳಿ