ಸಾವಿರಾರು ಜನರ ಪ್ರಾರ್ಥನೆಗಳು ಏಕಮೇವವಾಗಿ ಒಂದಾಗುವಾಗ, ಉತ್ಪತ್ತಿಯಾದ ಶಾಂತಿ ಮತ್ತು ದೈವಿಕ ಉಪಶಮನಕಾರಿ ಶಕ್ತಿಶಾಲಿ ಕಂಪನಗಳು ಇಚ್ಚಿತ ಫಲಗಳು ವ್ಯಕ್ತವಾಗಲು ಸಹಕಾರಿಯಾಗಿದೆ.
ಒಂದು ಪರಿಷ್ಕರಣೆ: ನಮ್ಮ ದೇಶದಲ್ಲಿ ಪರಿಸ್ಥಿತಿ ಸ್ಥಿರಗೊಂಡಿರುವುದರಿಂದ, ಈ ವಿಶೇಷ ಉಪಕ್ರಮವನ್ನು ಮುಕ್ತಾಯಗೊಳಿಸಲಾಗಿದೆ – ಈ ನಿಸ್ವಾರ್ಥ ಪ್ರೀತಿ ಮತ್ತು ಉಪಶಮನಕಾರಿ ಸೇವೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಮೇ 23 ರ ಶುಕ್ರವಾರದ ಅವಧಿಯ ನಂತರ, ಇದನ್ನು ಮುಕ್ತಾಯಗೊಳಿಸಲಾಯಿತು.
ನಿಮ್ಮ ದೈನಂದಿನ ಧ್ಯಾನಗಳಲ್ಲಿ ಮತ್ತು ಇತರ ಸಮಯಗಳಲ್ಲಿ, ನಮ್ಮ ಪ್ರೀತಿಯ ಗುರುದೇವ ಪರಮಹಂಸ ಯೋಗಾನಂದರು ಕಲಿಸಿದಂತೆ ಪ್ರಾರ್ಥನೆಗಳನ್ನು ಸಲ್ಲಿಸುವುದನ್ನು ಮತ್ತು ಉಪಶಮನಕಾರಿ ತಂತ್ರವನ್ನು ಅಭ್ಯಾಸ ಮಾಡುವುದನ್ನು ಮುಂದುವರಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ – ನಿಮ್ಮ ಪ್ರೀತಿಪಾತ್ರರನ್ನು ಮತ್ತು ಜಗತ್ತನ್ನು ದೈವಿಕ ಬೆಳಕು ಮತ್ತು ಉಪಶಮನದಲ್ಲಿ ಆವರಿಸಿಕೊಳ್ಳಿ.
ನಮ್ಮ ದೇಶದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಅನಿಶ್ಚಿತತೆಯ ಹಿನ್ನೆಲೆಯಲ್ಲಿ, ನಮ್ಮ ಭಕ್ತರಿಗೆ ಮತ್ತು ಬಾಧಿತರಾದ ಎಲ್ಲರಿಗೂ ಭರವಸೆ, ಸಮಾಧಾನ ಮತ್ತು ಆಶ್ವಾಸನೆಯ ಕಂಪನಗಳನ್ನು ಕಳುಹಿಸಲು ಸಹಾಯ ಮಾಡಲು ಪ್ರತಿದಿನದ ಆನ್ಲೈನ್ ಪ್ರಾರ್ಥನಾ ಅವಧಿಯನ್ನು ಪ್ರಾರಂಭಿಸಲಾಯಿತು. ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಅನುಭವಿಸಿದಂತೆ, ನಮ್ಮ ಗುಂಪು ಧ್ಯಾನಗಳು ಮತ್ತು ಪ್ರಾರ್ಥನೆಗಳು ಕಣ್ಣಿಗೆ ಕಾಣದಿದ್ದರೂ, ಪ್ರಮುಖ ಪಾತ್ರವನ್ನು ವಹಿಸಬಲ್ಲವು.
ಪ್ರತಿ ಪ್ರಾರ್ಥನಾ ಅವಧಿಯು ಸುಮಾರು 20 ನಿಮಿಷಗಳ ಕಾಲದ್ದಾಗಿತ್ತು. ಇದು ಆರಂಭಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು, ನಂತರ ಸ್ಪೂರ್ತಿದಾಯಕ ಓದುವಿಕೆ, ಅಥವಾ ಪಠಣ, ಅಥವಾ ದೃಢೀಕರಣ ಅಭ್ಯಾಸದ ಒಂದು ಸಣ್ಣ ಅವಧಿ ಇತ್ತು. ಇದರ ನಂತರ ಸಂಕ್ಷಿಪ್ತ ಮೌನ ಧ್ಯಾನ ನಡೆಯಿತು, ಈ ಸಮಯದಲ್ಲಿ ವೈಎಸ್ಎಸ್/ಎಸ್ ಆರ್ ಎಫ್ ವಿಶ್ವವ್ಯಾಪಿ ಪ್ರಾರ್ಥನಾ ಮಂಡಳಿಯ ಮೂಲಕ ಸಹಾಯ ಕೋರಿದವರಿಗಾಗಿ ನಾವು ಮಾನಸಿಕವಾಗಿ ಪ್ರಾರ್ಥಿಸಿದೆವು. ಭಕ್ತರು ತಮ್ಮ ಪ್ರೀತಿಪಾತ್ರರಿಗಾಗಿ ಅಥವಾ ತಮ್ಮದೇ ಆದ ಸವಾಲುಗಳನ್ನು ಎದುರಿಸಲು ಶಕ್ತಿಗಾಗಿ ವೈಯಕ್ತಿಕ ಪ್ರಾರ್ಥನೆಗಳನ್ನು ಸಹ ಸಲ್ಲಿಸಬಹುದಾಗಿತ್ತು. ಪರಮಹಂಸ ಯೋಗಾನಂದರು ಕಲಿಸಿದ ಉಪಶಮನಕಾರಿ ತಂತ್ರದ ಅಭ್ಯಾಸ ಮತ್ತು ಮುಕ್ತಾಯದ ಪ್ರಾರ್ಥನೆಯೊಂದಿಗೆ ಅವಧಿಯು ಕೊನೆಗೊಂಡಿತು.
ವರ್ಲ್ಡ್ ವೈಡ್ ಪ್ರೇಯರ್ ಸರ್ಕಲ್
ನಾವು ನಿಮಗೆ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದಿಂದ ಪ್ರಕಟಿಸಲ್ಪಟ್ಟ ಕೆಳಗೆ ನೀಡಲಾದ ವರ್ಲ್ಡ್ ವೈಡ್ ಪ್ರೇಯರ್ ಸರ್ಕಲ್ ನ ಪುಸ್ತಕವನ್ನು (ಪಿಡಿಎಫ್ ಸ್ವರೂಪದಲ್ಲಿ) ಓದಲು ಪ್ರೋತ್ಸಾಹಿಸುತ್ತೇವೆ.
ನಾವು ನಿಮಗೆ ಭರವಸೆಯನ್ನು ನೀಡುತ್ತೇವೆ ವೈಎಸ್ಎಸ್ ಆಶ್ರಮಗಳಲ್ಲಿ ನಮ್ಮ ಸನ್ಯಾಸಿಗಳು ಎಲ್ಲಾ ಅಗತ್ಯವಿರುವವರಿಗೆ ಆಳವಾಗಿ ಪ್ರಾರ್ಥಿಸುತ್ತಿದ್ದಾರೆ. ನೀವು ನಿಮಗಾಗಿ ಅಥವಾ ಬೇರೆ ಯಾರಿಗಾಗಿಯಾದರೂ ಪ್ರಾರ್ಥಿಸಬೇಕಾದರೆ, ಇಲ್ಲಿ ಒತ್ತಿ:
