ಆತ್ಮ ಸಾಕ್ಷಾತ್ಕಾರದ ಬಗ್ಗೆ
ಯೋಗದಾ ಸತ್ಸಂಗ ಪಾಠಗಳು

ನಿಮ್ಮ ಜೀವನದಲ್ಲಿ
ಬದಲಾವಣೆ ಮತ್ತು ಸಮತೋಲನವನ್ನು ತರಲು
ಕ್ರಿಯಾ ಯೋಗದ ಪವಿತ್ರ ವಿಜ್ಞಾನವನ್ನು ಕಲಿಯಿರಿ.

Devotee reading YSS Lesson in self-realization

ದಯವಿಟ್ಟು ಗಮನಿಸಿ:

  • ದಯವಿಟ್ಟು ಗಮನಿಸಿ: ಯೋಗದಾ ಸತ್ಸಂಗ ಪಾಠಗಳ ಮೂಲ ಸರಣಿಯು ಪ್ರಸ್ತುತ ಇಂಗ್ಲಿಷ್, ಹಿಂದಿ, ತಮಿಳು, ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಿದೆ.
  • ಪಾಠ ಗಳ ಕನ್ನಡ ಆವೃತ್ತಿಗಾಗಿ ನೊಂದಣಿಯು ಭಾನುವಾರ, ಮಾರ್ಚ್ 22, 2026 ರಂದು ಬೆಳಿಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ) ಪ್ರಾರಂಭವಾಗಲಿದೆ.

ಈ ಮಾರ್ಗದಲ್ಲಿ ನಿಮ್ಮ ಪಯಣವನ್ನು ಆರಂಭಿಸಿ

ವೈಎಸ್‌ಎಸ್‌ ಪಾಠಗಳು ಭಗವಂತನೊಡನೆಯ ನಿಮ್ಮ ಸಂಬಂಧವನ್ನು ಜಾಗೃತಗೊಳಿಸಿ ಒಂದು ಸಮತೋಲಿತ ಹಾಗೂ ಯಶಸ್ವಿ ಜೀವನವನ್ನು ಹೇಗೆ ಬಾಳುವುದು ಎಂಬುದನ್ನು ಕಲಿಸುತ್ತವೆ

ನೀವು ಏನನ್ನು ಅರಸುತ್ತಿದ್ದೀರೋ ಅದು ಈಗಾಗಲೇ ನಿಮ್ಮೊಳಗಿದೆ

ದೈನಂದಿನ ಜೀವನದ ಒತ್ತಡ ಮತ್ತು ತರಾತುರಿಯಿಂದ ಸುಲಭವಾಗಿ ಭಾವೋದ್ವೇಗಕ್ಕೆ ಒಳಗಾಗುತ್ತೇವೆ ಹಾಗೂ ಇತರರು ಮತ್ತು ಸಮಾಜವು ನಮ್ಮ ಮೇಲೆ ಹೇರುವ ನಿರೀಕ್ಷೆಗಳಿಂದ ವಿಚಲಿತರಾಗುತ್ತೇವೆ. ಆದರೆ ನಿಮ್ಮ ಸರ್ವೋತ್ಕೃಷ್ಟ ಶಾಂತಿ, ಸುರಕ್ಷೆ ಹಾಗೂ ಸಂತೋಷಕ್ಕೆ ಬೇಕಾಗಿರುವುದೆಲ್ಲವೋ ಈಗಾಗಲೇ ನಿಮ್ಮೊಳಗಿದೆ.

ಈ ಅಜ್ಞಾತ ಮೂಲಸೆಲೆಯನ್ನು ತಟ್ಟುವುದಕ್ಕೆ ನೀವು ಮಾಡಬೇಕಾದದ್ದೇನೆಂದರೆ, ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ ಬೋಧಿಸುವ ಯೋಗದ ವೈಜ್ಞಾನಿಕ ಹಾಗೂ ಸಾರ್ವತ್ರಿಕ ಮಾರ್ಗದ ಧ್ಯಾನದ ಅಭ್ಯಾಸವನ್ನು ಪ್ರತಿ ದಿನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು.

ನಿಮ್ಮ ಅತ್ಯಂತ ಗಂಭೀರವಾದ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳನ್ನು ಪಡೆದುಕೊಳ್ಳಬಹುದು ಮತ್ತು ಕೊನೆಗಾಣದ ಆನಂದವನ್ನು ಬೆಳೆಸಿಕೊಳ್ಳಬಹುದು

ನಿಜವಾದ ಸಂತೃಪ್ತಿ, ಜೀವನದ ಬಗ್ಗೆ ಇರುವ ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳುವುದು ಮತ್ತು ಕೊನೆಗಾಣದ ಆನಂದ, ಇವು ನಿಮ್ಮ ಕೈಗೆಟಕುವ ದೂರದಲ್ಲಿವೆ-ಮತ್ತು ಆಧ್ಯಾತ್ಮಿಕ ಮಾರ್ಗದಲ್ಲಿ ನೀವು ಹಂತ-ಹಂತವಾಗಿ ಏರಿದಂತೆ ಅವು ನಿಮ್ಮ ಪ್ರತಿದಿನದ ಅನುಭವವಾಗುವುದು.

ಧ್ಯಾನವು ಜನಮನ್ನಣೆಯ ನೂತನ ಆಯಾಮವನ್ನು ತಲುಪಿದೆ. ವೈಜ್ಞಾನಿಕ ಅಧ್ಯಯನಗಳು ಅನೇಕ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಪ್ರಯೋಜನಗಳನ್ನು ಹಾಗೂ ಒಂದು ದೈನಂದಿನ ಅಭ್ಯಾಸವು ಹೇಗೆ ನಿಮ್ಮ ಜೀವನವನ್ನು ಧನಾತ್ಮಕವಾಗಿ ಪ್ರಭಾವಿತಗೊಳಿಸಬಹುದು ಎಂಬುದನ್ನು ದೃಢಪಡಿಸಿವೆ. ಆದರೆ ಧ್ಯಾನದ ಮೂಲದಲ್ಲಿ ಅದಕ್ಕಿಂತ ಹೆಚ್ಚಿನದಿದೆ.

ಧ್ಯಾನವು ನಿಮ್ಮ ಪರಮಾನಂದ-ಪ್ರಜ್ಞೆಯ ಪ್ರವೇಶದ್ವಾರವಾಗಿದೆ

ಧ್ಯಾನವನ್ನು ವೈಜ್ಞಾನಿಕವಾಗಿ ಅಭ್ಯಾಸ ಮಾಡಿದಾಗ, ನೀವು ನಿಮ್ಮ ಮನಸ್ಸು, ಉಸಿರು ಮತ್ತು ಹೃದಯವನ್ನು ಶಾಂತಗೊಳಿಸಬಹುದು ಮತ್ತು ನಿಮ್ಮ ಚೈತನ್ಯವನ್ನು ಒಳಗೆ ತೆಗೆದುಕೊಳ್ಳಬಹುದು, ಅಲ್ಲಿ ನೀವು ಪರಮಾನದೊಂದಿಗಿನ ನಿಮ್ಮ ಆತ್ಮದ ಐಕ್ಯತೆಯನ್ನು ಗ್ರಹಿಸಬಹುದು.

ಈ ಆತ್ಮ-ಗ್ರಹಿಕೆ ಮರ್ತ್ಯ ಮಿತಿಗಳ ಭಾವನೆಯನ್ನು ಕರಗಿಸುತ್ತದೆ ಮತ್ತು ಮಹತ್ತರ ಆನಂದವನ್ನು ಮಾತ್ರವಲ್ಲ, ಜೊತೆಗೆ ನೀವು ಎಂದೂ ಕಲ್ಪಿಸಿಕೊಂಡಿರದಂತಹ ಮಹತ್ತರ ಶಾಂತಿ, ಜ್ಞಾನ ಹಾಗೂ ಪ್ರೀತಿಯನ್ನು ನೀಡುತ್ತದೆ. ಇದೇ ಪುರಾತನ ಕಾಲದಿಂದಲೂ ಯೋಗಿಗಳು ಸಿದ್ಧಿಸಿಕೊಂಡ ಅಸ್ತಿತ್ವದ ಸ್ಥಿತಿ ಮತ್ತು ಇದು ನಮಗೆಲ್ಲರಿಗೂ ಈಗ ಲಭ್ಯವಿದೆ.

ನೀವು ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಅಥವಾ ಜೀವನದ ರಹಸ್ಯವನ್ನು ಅರಿಯಬೇಕೆಂಬ ಮಾನವನ ಸಾರ್ವತ್ರಿಕ ಸಮಸ್ಯೆಯನ್ನು ಬಗೆಹರಿಸಲು ಕಟ್ಟಾಸೆಯುಳ್ಳವರಲ್ಲೊಬ್ಬರಾಗಿದ್ದರೆ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ (ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ) ಬೋಧನೆಗಳನ್ನು ಕಲಿತು ಅನುಸರಿಸಿ. ಭಾರತದ ಈ ಆಧ್ಯಾತ್ಮಿಕ ಬೋಧನೆಗಳು ಅನಾದಿ ಕಾಲದಿಂದ ಭಾರತದ ದೇದೀಪ್ಯಮಾನರಾದ ಜ್ಞಾನಿಗಳು ಮತ್ತು ಋಷಿಗಳು ಕೊಟ್ಟ ಕೊಡುಗೆ. ಇದರಲ್ಲಿ ನಿಮಗೆ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.

— ಪರಮಹಂಸ ಯೋಗಾನಂದ

ನೀವು ಎಂದೂ ಊಹಿಸಿಕೊಳ್ಳಲಾಗದಂತಹ ರೀತಿಯಲ್ಲಿ ನಿಮ್ಮ ಜೀವನವನ್ನು ಬದಲಾಯಿಸುವ, ಒಂದು ಹಂತಹಂತವಾಗಿ ಮುಂದುವರಿಯುವ ಗೃಹಾಧ್ಯಯನದ ಸರಣಿ

ವೈಎಸ್‌ಎಸ್‌ ಪಾಠಗಳು ನಿಮ್ಮನ್ನು ಉನ್ನತಿಗೇರಿಸುವ ಮತ್ತು ನಿಜ ಜೀವನವನ್ನು ಎಲ್ಲ ಆಯಾಮಗಳಲ್ಲೂ ಬದಲಾಯಿಸುವ ಪವಿತ್ರ ಜ್ಞಾನದ ಸಂವಹನ: ಮಹಾತವಾರ್‌ ಬಾಬಾಜಿ, ಲಾಹಿರಿ ಮಹಾಶಯ, ಸ್ವಾಮಿ ಶ್ರೀ ಯುಕ್ತೇಶ್ವರ್‌ ಮತ್ತು ಪರಮಹಂಸ ಯೋಗಾನಂದರಂತಹ ಮಹಾನ್‌ ಯೋಗ ಪುರುಷರ ಹೆಸರಾಂತ ಪರಂಪರೆಯ ಮೂಲಕ ನೀಡಲಾದ ಧ್ಯಾನ ತಂತ್ರಗಳ ಮತ್ತು ಆಧ್ಯಾತ್ಮಿಕ ಸಾರಸರ್ವಸ್ವವನ್ನೊಳಗೊಂಡ ಒಂದು ಗೃಹಾಧ್ಯಯನದ ಸರಣಿ — ಮತ್ತು ನಿಮಗೆ ಲಭ್ಯವಿದೆ.

paramahansa-yogananda-for-lessons-page

ನಿಮ್ಮ ಆಧ್ಯಾತ್ಮಿಕ ಮಾರ್ಗದಲ್ಲಿ ನೀವು ಎಷ್ಟು ದೂರ ಹೋಗಬಯಸುತ್ತೀರೋ ಅಲ್ಲಿಯವರೆಗೆ ನಾನು ನಿಮಗೆ ಮಾರ್ಗದರ್ಶನ ಮಾಡಬಲ್ಲೆ; ಮತ್ತು ಪಾಠಗಳಲ್ಲಿರುವ ತಂತ್ರಗಳನ್ನು ನೀವು ಅಭ್ಯಾಸ ಮಾಡಿದಲ್ಲಿ ನಿಮ್ಮ ಪ್ರಗತಿಯಲ್ಲಿ ನೀವು ಎಂದಿಗೂ ನಿಷ್ಕ್ರಿಯತೆಯನ್ನು ಕಾಣುವುದಿಲ್ಲ.

— ಪರಮಹಂಸ ಯೋಗಾನಂದ

ಕ್ರಿಯಾ ಯೋಗ ಧ್ಯಾನದ ಪುರಾತನ ತಂತ್ರಗಳನ್ನು ನೀವು ಕಲಿಯುವಿರಿ 

ಪಾಠಗಳನ್ನು ಪರಮಹಂಸ ಯೋಗಾನಂದರು ಪ್ರಾರಂಭಿಸಿದರು. ಅವರ ಬೋಧನೆಗಳ ಮೂಲದಲ್ಲಿ ಧ್ಯಾನ ತಂತ್ರಗಳ ಒಂದು ಶಕ್ತಿಯುತ ಕಾರ್ಯವಿಧಾನವಿದೆ: ಧ್ಯಾನದ ಕ್ರಿಯಾ ಯೋಗ ವಿಜ್ಞಾನ. ಅವರ ಯೋಗಿಯ ಆತ್ಮಕಥೆ ಹಾಗು ಅವರ ಇತರ ಪುಸ್ತಕಗಳ ಮೂಲಕ ಲಕ್ಷಾಂತರ ಜನರಿಗೆ ಪರಿಚಿತವಾದ ಆತ್ಮದ ಈ ಪುರಾತನ ವಿಜ್ಞಾನವು ಮೇಲ್‌ಸ್ತರದ ಆಧ್ಯಾತ್ಮಿಕ ಪ್ರಜ್ಞೆ ಮತ್ತು ದಿವ್ಯಾನುಭವದ ಆಂತರಿಕ ಆನಂದವನ್ನು ಜಾಗೃತಗೊಳಿಸುವ ಶಕ್ತಿಯುತ ವಿಧಾನಗಳನ್ನು ನೀಡುತ್ತದೆ.

ಮೊದಲನೆಯ ಪಾಠದಿಂದಲೇ, ಧ್ಯಾನದ ಲಾಭಗಳನ್ನು ನೀವು ಮನಗಾಣಬಹುದಾದ ಖಚಿತ ವಿಧಾನಗಳನ್ನು ಕೂಡಲೇ ಪಡೆಯುತ್ತೀರಿ.

ಗಾಢವಾದ ಧ್ಯಾನಕ್ಕೆ ಒಂದು ದೃಢ ಅಸ್ತಿಭಾರವನ್ನು ಹಾಕುತ್ತಿರುವಂತೆ, ಪರಮಹಂಸ ಯೋಗಾನಂದರು ಬೋಧಿಸಿದ ಮೂರು ಶಕ್ತಿಯುತ ತಂತ್ರಗಳನ್ನು, ಕ್ರಿಯಾ ಯೋಗದ ಸಮಗ್ರ ಆಧ್ಯಾತ್ಮಿಕ ವಿಜ್ಞಾನದ ಅವಶ್ಯಕವಾದ ಮೊದಲ ಹೆಜ್ಜೆಗಳನ್ನು ಕಲಿಯುತ್ತೀರಿ:

ಚೈತನ್ಯದಾಯಕ ತಂತ್ರ ಮತ್ತು ವ್ಯಾಯಾಮಗಳು

ಪರಮಹಂಸ ಯೋಗಾನಂದರಿದ ಪ್ರಸ್ತುತಪಡಿಸಲಾದ ಚೈತನ್ಯದಾಯಕ ವ್ಯಾಯಮಗಳ ವಿಶಿಷ್ಟ ಸರಣಿ ಒಬ್ಬರಿಗೆ ಬ್ರಹ್ಮಾಂಡ ಮೂಲದಿಂದ ಶರೀರದೊಳಗೆ ಪ್ರಜ್ಞಾಪೂರ್ವಕವಾಗಿ ಚೈತನ್ಯವನ್ನು ಸೆಳೆದುಕೊಳ್ಳಲು ಸಾಧ್ಯವಾಗಿಸುತ್ತದೆ. ಪ್ರಾಣ-ಶಕ್ತಿ ನಿಯಂತ್ರಣದ ಈ ತಂತ್ರವು ಶರೀರವನ್ನು ಶುದ್ಧಗೊಳಿಸುತ್ತದೆ ಮತ್ತು ಸದೃಢಗೊಳಿಸುತ್ತದೆ ಮತ್ತು ಪ್ರಜ್ಞೆಯ ಮೇಲ್‌ಸ್ತರದ ಸ್ಥಿತಿಗಳನ್ನು ತಲುಪಲು ಚೈತನ್ಯವನ್ನು ನಿರ್ದೇಶಿಸುವುದನ್ನು ಸುಲಭವಾಗಿಸಿ ಧ್ಯಾನಕ್ಕೆ ಅಣಿಗೊಳಿಸುತ್ತದೆ. ನಿಯತ ಅಭ್ಯಾಸವು ಮಾನಸಿಕ ಹಾಗೂ ದೈಹಿಕ ಆರಾಮವನ್ನೂ ಉತ್ತೇಜಿಸುತ್ತದೆ ಮತ್ತು ಕ್ರಿಯಾತ್ಮಕ ಇಚ್ಛಾ ಶಕ್ತಿಯನ್ನು ವೃದ್ಧಿಪಡಿಸುತ್ತದೆ.

ಏಕಾಗ್ರತೆಯ ಹಾಂಗ್‌-ಸಾ ತಂತ್ರ

ಈ ಪುರಾತನ ಹಾಗೂ ಶಕ್ತಿಯುತ ತಂತ್ರವು ಮನಸ್ಸಿನ ಏಕಾಗ್ರತೆಯ ಸುಪ್ತ ಶಕ್ತಿಗಳನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ನಿಯತ ಅಭ್ಯಾಸದ ಮೂಲಕ ಒಬ್ಬರ ಆಲೋಚನೆ ಮತ್ತು ಚೈತನ್ಯವನ್ನು ಬಾಹ್ಯ ಅಡೆತಡೆಗಳಿಂದ ಹಿಂದಕ್ಕೆ ಸೆಳೆದುಕೊಂಡು ಅವನ್ನು ಯಾವುದೇ ಸಾಧಿಸಬೇಕಾದ ಗುರಿ ಅಥವಾ ಪರಿಹರಿಸಬೇಕಾದ ಸಮಸ್ಯೆಯ ಕಡೆಗೆ ಕೇಂದ್ರೀಕರಿಸುವುದನ್ನು ಕಲಿಯುತ್ತಾರೆ. ಅಥವಾ ಯಶಸ್ವಿ ಅಭ್ಯಾಸದಿಂದ ಫಲಿಸುವ ಕೇಂದ್ರೀಕೃತ ಗಮನವನ್ನು ಒಬ್ಬರು ಆಂತರ್ಯದಲ್ಲಿನ ದಿವ್ಯ ಪ್ರಜ್ಞೆಯನ್ನು ಸಾಕ್ಷಾತ್ಕರಿಸಿಕೊಳ್ಳುವೆಡೆಗೆ ನಿರ್ದೇಶಿಸಬಹುದು.

ಧ್ಯಾನದ ಓಂ ತಂತ್ರ

ಹಿಂದಿನ ತಂತ್ರಗಳ ಅಭ್ಯಾಸದ ಮೂಲಕ, ವಿದ್ಯಾರ್ಥಿಯು ಶರೀರವನ್ನು ಆರಾಮವಾಗಿರಿಸಲು ಮತ್ತು ಮನಸ್ಸನ್ನು ಕೇಂದ್ರೀಕರಿಸಲು ಕಲಿತ ನಂತರ, ಈ ಉನ್ನತ ಧ್ಯಾನದ ತಂತ್ರವು, ಅರಿವನ್ನು ಶರೀರದ ಮಿತಿಗಳಿಂದಾಚೆಗೆ ಮತ್ತು ಮನಸ್ಸನ್ನು ಒಬ್ಬರ ಅನಂತ ಸಾಮರ್ಥ್ಯದ ಆನಂದಮಯ ಅರಿವಿನೆಡೆಗೆ ವಿಸ್ತರಿಸುತ್ತದೆ.

ಕ್ರಿಯಾ ಯೋಗವನ್ನು ಪಡೆಯುವುದು

ಆಧ್ಯಾತ್ಮಿಕ ಪ್ರಜ್ಞೆಯ ಎಲ್ಲ ಶ್ರದ್ಧಾವಂತ ಅನ್ವೇಷಕರೂ — ಧಾರ್ಮಿಕ ಪಂಗಡದ ಬೇಧಭಾವವಿಲ್ಲದೆ — ಮೇಲಿನ ತಂತ್ರಗಳನ್ನು ವೈಎಸ್‌ಎಸ್‌ ಪಾಠಗಳ ಮೂಲ ಸರಣಿಯಲ್ಲಿ ಪಡೆದುಕೊಳ್ಳಬಹುದು. ಪಾಠಗಳ ಅಧ್ಯಯನದ ಮೊದಲ ಎಂಟು ತಿಂಗಳುಗಳ ಅವಧಿಯಲ್ಲಿ ಈ ಮೂರು ಮೂಲ ತಂತ್ರಗಳನ್ನು ಕಲಿತು ಅಭ್ಯಾಸ ಮಾಡಿದ ನಂತರ, ಆಸಕ್ತರು ಕ್ರಿಯಾ ಯೋಗ ದೀಕ್ಷೆಗೆ ಅರ್ಜಿ ಸಲ್ಲಿಸಬಹುದು. ದೀಕ್ಷೆಯು ಈ ಮಾರ್ಗದ ಒಂದು ಗಾಢವಾದ ಬದ್ಧತೆಗೆ ಒಳಪಡಿಸುತ್ತದೆ. ಮೂಲ ಪಾಠಗಳ ಅಧ್ಯಯನ ಮತ್ತು ಅಭ್ಯಾಸವು ನೀವು ಆ ಬದ್ಧತೆಗೆ ಸಿದ್ಧರಿರುವಿರೇ ಎಂಬುದನ್ನು ನಿರ್ಧರಿಸಲು ಸಾಧ್ಯವಾಗಿಸುತ್ತದೆ.

ಒಬ್ಬರು ಕ್ರಿಯಾ ಯೋಗವನ್ನು ಸ್ವೀಕರಿಸಲು ನಿರ್ಧರಿಸುತ್ತಾರೋ ಇಲ್ಲವೋ, ಪಾಠಗಳ ಮೂಲ ಸರಣಿಯಲ್ಲಿ ಕಲಿಸುವ ತಂತ್ರಗಳ ಪಾಲನೆಯಲ್ಲಿ ಶ್ರದ್ಧಾಯುಕ್ತರಾಗಿದ್ದಲ್ಲಿ ಅವರು ತಮಗಾಗಿ ಪ್ರತಿಫಲವನ್ನು ನೀಡುವ ಒಂದು ಆಳವಾದ ಧ್ಯಾನದ ಅಭ್ಯಾಸವನ್ನು ಬೆಳೆಸಿಕೊಳ್ಳಬಹುದು. ಮೇಲೆ ಪಟ್ಟಿಮಾಡಿರುವ ಮೂಲ ತಂತ್ರಗಳ ಮೂಲಕ ಅವರು ದಿವ್ಯ ಪ್ರಜ್ಞೆಯ ಅತ್ಯಂತ ಉನ್ನತ ಮಟ್ಟದ ಸ್ಥಿತಿಯನ್ನು ಸಿದ್ಧಿಸಿಕೊಳ್ಳಬಹುದು ಎಂಬ ಪರಮಹಂಸ ಯೋಗಾನಂದರ ವಾಗ್ದಾನವನ್ನು ತಮಗೆ ತಾವೇ ಖಚಿತ ಪಡಿಸಿಕೊಳ್ಳಬಹುದು — ಕ್ರಿಯಾ ಯೋಗವು ಅತಿ ಶೀಘ್ರವಾದ ಮತ್ತು ಬಹಳ ಪರಿಣಾಮಕಾರಿಯಾದ ವಿಧಾನವಾಗಿದ್ದರೂ ಕೂಡ.

ನಿಮ್ಮ ಆಧ್ಯಾತ್ಮಿಕ ಪಯಣವನ್ನು ಉತ್ತೇಜಿಸಲು ಮತ್ತು ನೀವು ನಿಮ್ಮ ಹೆಣಗಾಟಗಳನ್ನು ಜಯಿಸಲು ವಿಶೇಷ ಸೂಚನೆಗಳು

ಈ ಪಾಠಗಳನ್ನು ಉಪಯೋಗಿಸುತ್ತ, ಮತ್ತು ನಿಯತವಾಗಿ ಧ್ಯಾನ ಮಾಡುತ್ತ, ನೀವು ಅಂತಹ ಸಂತೋಷನ್ನು ಅನುಭವಿಸುತ್ತೀರಿ, ನಿಮ್ಮ ಸಮಸ್ಯೆಗಳಿಗೆ ಅಂತಹ ಉತ್ತರಗಳನ್ನು ಪಡೆಯುತ್ತೀರಿ! ಕೇವಲ ನುಡಿಗಳಿಂದ ತೃಪ್ತರಾಗಬೇಡಿ. ಸತ್ಯದ ನಿಜವಾದ ಅನುಭವವನ್ನು ಹೊಂದಿ. ಆತ್ಮ-ಸಾಕ್ಷಾತ್ಕಾರವನ್ನು ಹೊಂದಿ!

— ಪರಮಹಂಸ ಯೋಗಾನಂದ

  • ಧ್ಯಾನದ ವೈಎಸ್‌ಎಸ್‌ ಯೋಗದ ತಂತ್ರಗಳನ್ನು — ಆತ್ಮ-ಸಾಕ್ಷಾತ್ಕಾರ ಹಾಗು ಭಗವದ್‌-ಸಂಸರ್ಗದ ಅನುಭವಕ್ಕಾಗಿ ಹಂತಹಂತವಾದ ಉನ್ನತ ವಿಧಾನಗಳು — ಪಡೆಯಿರಿ.
  • ವೈಎಸ್‌ಎಸ್‌ ಸನ್ಯಾಸಿಗಳ ಸಂಪರ್ಕದಿಂದ ಮತ್ತು ಮಾರ್ಗದರ್ಶನದಿಂದ ಪ್ರಯೋಜನವನ್ನು ಪಡೆಯಿರಿ. ನಿಮ್ಮ ಅಭ್ಯಾಸ, ಪಾಠಗಳು ಮತ್ತು ಧ್ಯಾನ ತಂತ್ರಗಳ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ.
  • ನಿಮ್ಮ ಬದುಕಿನ ಅಸಂಖ್ಯಾತ ಸಮಸ್ಯೆಗಳನ್ನು ಪರಿಹರಿಸಲು “ಬದುಕುವುದು-ಹೇಗೆ” ಇದರ ಕಾರ್ಯೋಪಯೋಗಿ ಜ್ಞಾನವನ್ನು ಪರಿಪಾಲಿಸಿ. ನಿಮ್ಮ ಅಸ್ತಿತ್ವದ ಪ್ರತಿಯೊಂದು ಕ್ಷೇತ್ರದಲ್ಲಿ ಸಾಮರಸ್ಯ ಮತ್ತು ಯಶಸ್ಸನ್ನು ಸೃಷ್ಟಿಸಿ.
  • ಸ್ವ-ಸುಧಾರಣೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಏಕಾಗ್ರತೆಯ ಶಕ್ತಿ ಮತ್ತು ಇಚ್ಛಾಶಕ್ತಿಯನ್ನು ಪ್ರಯೋಗಿಸಲು ದೃಢೀಕರಣಗಳನ್ನು ಉಪಯೋಗಿಸಿ.
  • ದೈವೀ ಪ್ರೇರಿತ ಪ್ರಾರ್ಥನೆಗಳು ಮತ್ತು ಗೀತೆಗಳೊಂದಿಗೆ ಭಗವಂತನಿಗಾಗಿ ಹೃದಯ-ಕೇಂದ್ರಿತ ಭಕ್ತಿ ಮತ್ತು ಅಪೇಕ್ಷೆಯನ್ನು ಜಾಗೃತಗೊಳಿಸಿ.
  • ಧ್ಯಾನದ ತಂತ್ರಗಳು ಆಧರಿಸಿರುವ ವೈಜ್ಞಾನಿಕ ತತ್ತ್ವಗಳು ಮತ್ತು ಸಿದ್ಧಾಂತಗಳ ಬಗ್ಗೆ ತಿಳಿವಳಿಕೆ ಗಳಿಸಿಕೊಳ್ಳಿ — ನಿಮ್ಮ ತರ್ಕ ಹಾಗೂ ನಿಮ್ಮ ಅಂತರಾಳವನ್ನು ತೃಪ್ತಿಪಡಿಸಲು.
  • ಹೇಗೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ವ್ಯಾಧಿಯಿಂದ ನಿಮ್ಮನ್ನು ನೀವು ವೈಜ್ಞಾನಿಕವಾಗಿ ತಪ್ಪಿಸಿಕೊಳ್ಳಬಹುದು ಮತ್ತು ಗುಣ ಹೊಂದಬಹುದು ಎಂಬುದನ್ನು ಕಲಿಯಿರಿ.
  • ನಿಮಗಾಗಿ ಮತ್ತು ನಿಮ್ಮ ಪರಿವಾರಿಕ ಜೀವನಕ್ಕಾಗಿ ನೈತಿಕ ಮತ್ತು ಆಧ್ಯಾತ್ಮಿಕ ತತ್ತ್ವಗಳನ್ನು ನಿರೂಪಿಸುವ ಬೋಧಪ್ರದ ಕಥೆಗಳನ್ನು ಅನ್ವಯಿಸಿ.
  • ಪರಮಹಂಸ ಯೋಗಾನಂದರ ದೈವೀ ಪ್ರೇರಿತ ನುಡಿಗಳ ಸ್ಫೂರ್ತಿಯನ್ನು ಮನಗಾಣಿ.
  • ಬದುಕಿನ ಅತ್ಯುನ್ನತ ಗುರಿಯೆಡೆಗೆ ನಿಮ್ಮ ವೈಯಕ್ತಿಕ ಪಯಣವನ್ನು ಪ್ರೇರಿಸಿ: ಭಗವದ್‌-ಸಾಕ್ಷಾತ್ಕಾರ.

ಸ್ಫೂರ್ತಿ ಮತ್ತು ಕಾರ್ಯೋಪಯೋಗಿ ಮಾರ್ಗದರ್ಶನದ ಖಜಾನೆ

ತಂತ್ರಗಳ ಜೊತೆಗೆ ಪಾಠಗಳು ಆಧ್ಯಾತ್ಮಿಕ ಬಾಳ್ವೆಗಾಗಿ ಸ್ಫೂರ್ತಿ ಮತ್ತು ಕಾರ್ಯೋಪಯೋಗಿ ಮಾರ್ಗದರ್ಶನದ ಒಂದು ಖಜಾನೆಯನ್ನೇ ನೀಡುತ್ತದೆ — ಬದಲಾವಣೆಯ ಈ ಜಗತ್ತಿನಲ್ಲಿ ನಿರಂತರ ಸವಾಲುಗಳು ಮತ್ತು ಅವಕಾಶಗಳ ನಡುವೆ ಹೇಗೆ ಆನಂದಮಯವಾಗಿ ಮತ್ತು ಯಶಸ್ವಿಯಾಗಿ ಬಾಳುವುದು. ಆ ಸ್ಫೂರ್ತಿಯನ್ನು ಹೇಗೆ ನಿಮ್ಮ ದೈನಂದಿನ ಆಧ್ಯಾತ್ಮಿಕ ಅಭ್ಯಾಸವಾಗಿ ಪರಿವರ್ತನೆ ಮಾಡಿಕೊಳ್ಳಬಹುದು ಎಂಬುದನ್ನು ನೀವು ಕಲಿಯುತ್ತೀರಿ.

ಕೆಲವು ಪಾಠಗಳ ವಿಷಯಗಳ ನಮೂನೆಗಳು

  • ಯೋಗ: ಭಗವಂತನನ್ನು ಅರಿಯುವ ವೈಜ್ಞಾನಿಕ ಮಾರ್ಗ
  • ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ವಿಶ್ರಾಂತಿ
  • ಸೃಷ್ಟಿಯ ಪ್ರಕೃತಿಯನ್ನು ಅರಿಯುವುದು
  • ಬೆನ್ನುಹುರಿಯಲ್ಲಿ ಚಕ್ರಗಳನ್ನು ಜಾಗೃತಗೊಳಿಸುವುದು
  • ಆರೋಗ್ಯ ಮತ್ತು ಉಪಶಮನದ ಯೋಗ ತತ್ವಗಳು
  • ಗುರು-ಶಿಷ್ಯ ಸಂಬಂಧ
  • ಬದುಕು, ಸಾವು, ಕರ್ಮ ಮತ್ತು ಪುನರ್ಜನ್ಮ
  • ಆಧ್ಯಾತ್ಮಿಕ ಚಕ್ಷು: ಅನಂತದೆಡೆಗಿನ ದ್ವಾರ
  • ಪ್ರಾರ್ಥನೆಯ ಮೂಲಕ ಭಗವಂತನೊಡನೆ ಸಂಸರ್ಗ
  • ಸಮತೋಲಿತ ಆಧ್ಯಾತ್ಮಿಕ ಬಾಳ್ವೆಯ ಕಲೆ

ಈಗಲೇ ಪರಮಹಂಸ ಯೋಗಾನಂದರ ಪರಿಚಯಾತ್ಮಕ ಪಾಠವನ್ನು ಓದಿ 

ನಿಮ್ಮ ಪಯಣವನ್ನು ನಮ್ಮೊಂದಿಗೆ ಆರಂಭಿಸಿ — ಈಗಲೇ ಅರ್ಜಿ ಸಲ್ಲಿಸಿ

ಪರಮಹಂಸ ಯೋಗಾನಂದರ ಬೋಧನೆಗಳ ಮೂಲಕ ಆತ್ಮದ ಶಾಂತಿ, ಆನಂದ ಮತ್ತು ಜ್ಞಾನದ ಬದುಕನ್ನು-ಪರಿವರ್ತಿಸುವ ಶೋಧನೆಯ ನಿಮ್ಮ ಪಯಣವನ್ನು ನಮ್ಮೊಡನೆ ಆರಂಭಿಸಲು ನಾವು ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ

ಮೂರು ಸರಳ ಹಂತಗಳಲ್ಲಿ ವೈಎಸ್‌ಎಸ್‌ ಪಾಠಗಳಿಗೆ ಅರ್ಜಿ ಸಲ್ಲಿಸಿ:

ಹಂತ 1: ಒಂದು ಖಾತೆಯನ್ನು ತೆರೆಯಿರಿ.

ಹಂತ 2: ಅರ್ಜಿಯನ್ನು ಭರ್ತಿ ಮಾಡಿ.

ಹಂತ 3: ಪ್ರತಿಜ್ಞೆಯಲ್ಲಿ ಡಿಜಿಟಲಿ ಹಸ್ತಾಕ್ಷರ ಮಾಡಿ ಆನ್‌ಲೈನ್‌ನಲ್ಲಿ ಸಲ್ಲಿಸಿ.

ಬೆಲೆ ಮತ್ತು ತಲುಪುವ ಸಮಯ

ವೈಎಸ್‌ಎಸ್‌ ಪಾಠಗಳನ್ನು (ಮೂಲ ಸರಣಿ) 18 ಗಹನವಾದ ಪಾಠಗಳನ್ನಾಗಿ ವಿಂಗಡಿಸಲಾಗಿದೆ (ಪ್ರತಿಯೊಂದೂ ಸರಿ ಸುಮಾರು 24-40 ಪುಟಗಳು), ಇವುಗಳನ್ನು 9 ತಿಂಗಳುಗಳ ವರೆಗೆ ಪ್ರತಿ ಎರಡು ವಾರಕ್ಕೊಮ್ಮೆ ವಿದ್ಯಾರ್ಥಿಗಳು ಪಡೆಯುತ್ತಾರೆ. ಕ್ರಿಯಾ ಯೋಗಕ್ಕೆ ಅಣಿಗೊಳಿಸುವ ಎಲ್ಲ ಪ್ರಾಥಮಿಕ ಧ್ಯಾನದ ತಂತ್ರಗಳನ್ನು ಈ ಅವಧಿಯ ಅಂತ್ಯದೊಳಗೆ ಮೇಲ್‌ ಮಾಡಲಾಗುತ್ತದೆ.

ವೈಎಸ್‌ಎಸ್ ಪಾಠಗಳ ಮೂಲ ಸರಣಿಯ ಚಂದಾ ಶುಲ್ಕ (ಕೊರಿಯರ್/ವಿಶೇಷ ಪೋಸ್ಟ್ ಮೂಲಕ ಕಳುಹಿಸಲಾಗುವುದು) ₹1,600 ಆಗಿದ್ದು, ಇದು ಮುದ್ರಣ, ಪ್ಯಾಕಿಂಗ್ ಮತ್ತು ವಿತರಣಾ ವೆಚ್ಚವನ್ನು ಒಳಗೊಂಡಿದೆ. ಪೂರ್ಣ ಮೊತ್ತವನ್ನು ಪಾವತಿಸಲು ನಿಮಗೆ ಕಷ್ಟವಾಗುತ್ತಿದ್ದರೆ, ದಯವಿಟ್ಟು (0651) 6655 555 ಗೆ ಕರೆ ಮಾಡಿ ಅಥವಾ [email protected] ಗೆ ಇಮೇಲ್ ಮಾಡಿ (ಸೋಮವಾರದಿಂದ ಶನಿವಾರದವರೆಗೆ, ಬೆಳಿಗ್ಗೆ 9:00 ರಿಂದ ಸಂಜೆ 4:30 ರವರೆಗೆ).

ಮೇಲಿನ ಬೆಲೆಗಳು ಭಾರತಕ್ಕೆ ಮಾತ್ರ ಅನ್ವಯಿಸುತ್ತದೆ. ಬಾಂಗ್ಲಾದೇಶ, ಭೂತಾನ್‌, ಮಾಲ್ಡೀವ್ಸ್, ಮತ್ತು ಶ್ರೀ ಲಂಕಾ ದೇಶಗಳಿಗೆ ಚಂದಾ ದರ ₹7,500. ನೇಪಾಳದ ಪಾಠಗಳ ವಿದ್ಯಾರ್ಥಿಗಳು ಚಂದಾ ಮಾಹಿತಿಗೆ ಕೋಪುಂಡೋಲ್‌ ನಲ್ಲಿರುವ ನಮ್ಮ ಧ್ಯಾನ ಕೇಂದ್ರವನ್ನು ಸಂಪರ್ಕಿಸಬೇಕೆಂದು ಕೋರುತ್ತೇವೆ. ನೀವು ಇತರ ಯಾವುದೇ ದೇಶದಲ್ಲಿ ವಾಸಿಸುತ್ತಿದ್ದರೆ, ಅಥವಾ ಪಾಠಮಾಲೆಯನ್ನು ಪೂರ್ಣಗೊಳಿಸುವ ಮೊದಲೇ ಆ ದೇಶಗಳಿಗೆ ಮರಳುತ್ತಿರುವುದಾದರೆ, ನಾವು ನಿಮ್ಮನ್ನು ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್‌ಗೆ ದಾಖಲಾಗಲು ಪ್ರೋತ್ಸಾಹಿಸುತ್ತೇವೆ.

ಈ ಬೆಲೆಯಲ್ಲಿ ನಿಮ್ಮ ಮೂಲ ಪಾಠಗಳ ಸರಣಿಯ ಚಂದಾ ಅವಧಿಯಲ್ಲಿ ವೈಎಸ್‌ಎಸ್‌ ಆಪ್‌ನಲ್ಲಿ ಪಾಠಗಳ ಡಿಜಿಟಲ್‌ ಆವೃತ್ತಿ ಮತ್ತು ಪಾಠಗಳ ಎಲ್ಲ ಸಹಾಯಕ ವಿಷಯಗಳಿಗೆ ಉಚಿತ ಪ್ರವೇಶವೂ ಸೇರಿದೆ.

ವಿಶೇಷ ಸೂಚನೆ: ಪಾಠಗಳ ಹೊಸ ಆವೃತ್ತಿಯನ್ನು ನಾವು ಸಾಧ್ಯವಾದಷ್ಟು ಕಡಿಮೆ ಬೆಲೆಗೆ ಪರಿಚಯಿಸುತ್ತಿದ್ದೇವೆ, ಪಾಠಗಳನ್ನು ಪಡೆಯಲು ಸಾಧ್ಯವಾಗದಿದ್ದವರಿಗೂ ಲಭ್ಯವಾಗುವಂತೆ ಮಾಡಲಿಕ್ಕಾಗಿ. ಪರಮಹಂಸ ಯೋಗಾನಂದರ ಕಾರ್ಯವನ್ನು ಎಲ್ಲಾ ದೇಶಗಳ ಜನರಿಗೆ ಹರಡಲು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಅನೇಕ ಭಕ್ತಾದಿಗಳಿಂದ ನಾವು ನಿರೀಕ್ಷಿಸುವ ಉದಾರ ಬೆಂಬಲದಿಂದಾಗಿ ನಾವು ಇಷ್ಟು ಕಡಿಮೆ ಬೆಲೆಯಲ್ಲಿ ನೀಡಲು ಸಾಧ್ಯವಾಗುತ್ತಿದೆ.

ನಿಮಗೆ ಸಾಧ್ಯವಾದಲ್ಲಿ, ನೀವು ಚಂದಾದಾರರಾಗುವಾಗ ದೇಣಿಗೆಯನ್ನು ಕೊಡಲು ನೀವು ನಿರ್ಧರಿಸಿದರೆ, ಅದಕ್ಕೆ ನಾವು ಆಭಾರಿಯಾಗಿರುತ್ತೇವೆ. ಇದು ನಮ್ಮ ಸಾಮಾನ್ಯ ಕಾರ್ಯನಿರ್ವಹಣೆಯ ಖರ್ಚುವೆಚ್ಚಗಳನ್ನು ಭರಿಸಲು ಮತ್ತು ಪರಮಹಂಸ ಯೋಗಾನಂದರ ಬೋಧನೆಗಳನ್ನು ಎಲ್ಲ ನಿಷ್ಠಾವಂತ ಅನ್ವೇಷಕರಿಗೂ ತಲುಪಿಸಲು ಸಹಾಯ ಮಾಡುತ್ತದೆ.

ಮೊದಲ ಪಾಠ ಬರುವುದಕ್ಕೆ ದಯಮಾಡಿ 2 ರಿಂದ 4 ವಾರಗಳ ಅವಕಾಶ ನೀಡಿ.

“ಹೊಸ ಪಾಠಗಳಿಗೆ ನಿಮಗೆ ಧನ್ಯವಾದಗಳು, ಅವು ಬಹಳ ಸಹಾಯಕವಾಗಿವೆ, ನಾನು ಈಗ ಬೋಧನೆಗಳನ್ನು ಮತ್ತು ನಮ್ಮ ಮಹಾನ್‌ ಗುರುಗಳ ಆಶೀರ್ವಾದಗಳನ್ನು ಉತ್ತಮ ರೀತಿಯಲ್ಲಿ ತಿಳಿದುಕೊಳ್ಳುತ್ತಿದ್ದೇನೆ.”
– ಎಸ್‌. ಜೆ., ದಿಲ್ಲಿ

ಕ್ರಿಯಾ ಯೋಗ

ಆಧುನಿಕ ಕಾಲಕ್ಕಾಗಿ ಒಂದು ಪುರಾತನ ತಂತ್ರ

ಕ್ರಿಯಾ ಯೋಗ ಸಾಧಾರಣ ಉಸಿರಾಟದ ಅಭ್ಯಾಸವಲ್ಲ: ಇದು ಗೊತ್ತಿರುವ ಪ್ರಾಣಾಯಾಮ ತಂತ್ರಗಳಲ್ಲೇ ಅತ್ಯುನ್ನತವಾದುದು, ಇದರಿಂದ ನೀವು ಶರೀರದಲ್ಲಿ ಪ್ರಜ್ಞಾಪೂರ್ವಕವಾಗಿ ಪ್ರಾಣ ಶಕ್ತಿಯನ್ನು ನಿಯಂತ್ರಿಸಬಹುದು ಮತ್ತು ಬ್ರಹ್ಮಾಂಡ ಪ್ರಜ್ಞೆಯನ್ನು ಸಿದ್ಧಿಸಿಕೊಳ್ಳಬಹುದು.

— ಪರಮಹಂಸ ಯೋಗಾನಂದ

ಕ್ರಿಯಾ ಯೋಗ ದೀಕ್ಷೆಯನ್ನು ನಾನು ಯಾವಾಗ ಪಡೆಯಬಹುದು?

ಕ್ರಿಯಾ ಯೋಗದ ಉನ್ನತ ತಂತ್ರವನ್ನು ಅಭ್ಯಾಸ ಮಾಡುವ ಮೊದಲು, ಪಾಠಗಳಲ್ಲಿ ಪರಮಹಂಸ ಯೋಗಾನಂದರ ವೈಯಕ್ತಿಕ ಸೂಚನೆಗಳನ್ನು ಪಡೆದ ಮೊದಲ ಎಂಟು ತಿಂಗಳ ಅವಧಿಯಲ್ಲಿ ಮೂರು ಮೂಲ ತಂತ್ರಗಳ (ಚೈತನ್ಯದಾಯಕ, ಏಕಾಗ್ರತೆ, ಮತ್ತು ಧ್ಯಾನ) ಕಲಿಕೆ ಮತ್ತು ಅಭ್ಯಾಸದ ನಂತರ, ಯಾರಿಗೆ ಇಚ್ಛೆಯಿದೆಯೋ ಅವರು ಕ್ರಿಯಾ ಯೋಗದ ದೀಕ್ಷೆಗೆ ಅರ್ಜಿ ಸಲ್ಲಿಸಬಹುದು.

ವೈಎಸ್‌ಎಸ್‌ ಪಾಠಗಳು ಕ್ರಿಯಾ ಯೋಗ ಬೋಧನೆಯ ಪವಿತ್ರ ಮಾರ್ಗಸೂಚಿಗಳನ್ನು ಪಾಲಿಸುತ್ತವೆ.

ಯೋಗಿಯ ಆತ್ಮಕಥೆಯಲ್ಲಿ ಪರಮಹಂಸಜಿ, ಎಲ್ಲ ಮಾನವ ಸಂಕುಲಕ್ಕೆ ಕ್ರಿಯಾ ಯೋಗವನ್ನು ಮಹಾವತಾರ್‌ ಬಾಬಾಜಿ 1861ರಲ್ಲಿ ಹೇಗೆ ಪುನರಾಚರಣೆಗೆ ತಂದರು ಎಂಬ ಕಥೆಯನ್ನು ಹೇಳುತ್ತಾರೆ. ಬಾಬಾಜಿಯವರು ತಮ್ಮ ಶಿಷ್ಯ ಲಾಹಿರಿ ಮಹಾಶಯರಿಗೆ ಈ ಪುರಾತನ ವಿಜ್ಞಾನವನ್ನು ಕಲಿಸಿದರು, ಮತ್ತು ಇತರರಿಗೆ ಮುಕ್ತವಾಗಿ ಅದನ್ನು ಕಲಿಸುವದರಲ್ಲಿಯ (ಈ ಹಿಂದೆ ಹಲವಾರು ಶತಮಾನಗಳವರೆಗೆ ಮಾಡದಿದ್ದರಿಂದ) ಅವರ ಪಾತ್ರದ ಬಗ್ಗೆ ಅವರಿಗೆ ತಿಳಿಸಿದರು. ಮೊದಲಿಗೆ ಕ್ರಿಯಾ ಯೋಗ ದೀಕ್ಷೆಗೆ ಬಾಬಾಜಿ ಅತ್ಯಂತ ಉನ್ನತ ಮಾನದಂಡವನ್ನು ಇರಿಸಿದ್ದರು. ಆಗ ಲಾಹಿರಿ ಮಹಾಶಯರು ಶಿಷ್ಯತ್ವದ ಈ ಪಾರಂಪರಿಕ ಕಟ್ಟುನಿಟ್ಟಿನ ಅವಶ್ಯಕತೆಗಳನ್ನು ಸಡಿಲಗೊಳಿಸಬೇಕೆಂದು ಬಾಬಾಜಿಯವರನ್ನು ಕೋರಿದರು. “ಹಾಗೇ ಆಗಲಿ. ದೈವೇಚ್ಛೆಯೇ ನಿನ್ನ ಮೂಲಕ ನುಡಿದಿದೆ. ನೆರವಿಗಾಗಿ ಯಾರು ನಿನ್ನ ಬಳಿ ಬಂದು ನಮ್ರತೆಯಿಂದ ಬೇಡುತ್ತಾರೋ ಅಂಥವರೆಲ್ಲರಿಗೂ ಕ್ರಿಯಾಯೋಗವನ್ನುಪದೇಶಿಸು,” ಎಂದರು ದಯಾರ್ದಹೃದಯಿಗಳಾದ ಬಾಬಾಜಿ.

1949ರಲ್ಲಿ ಎಸ್‌ಆರ್‌ಎಫ್‌ ಮದರ್‌ ಸೆಂಟರ್‌ನಲ್ಲಿ ಶಿಷ್ಯರಿಗೆ ಹೇಳುತ್ತಾ ಪರಮಹಂಸಜಿ ಇದರ ಬಗ್ಗೆ ಹೆಚ್ಚಿನ ವಿವರಣೆಯನ್ನು ಕೊಟ್ಟರು: “ಕ್ರಿಯಾಯೋಗದಿಂದ ಜನಸಾಮಾನ್ಯರೂ ಪ್ರಯೋಜನ ಪಡೆಯಬೇಕೆಂಬ ಕಾರಣದಿಂದ ಸರ್ವಸಂಗ ಪರಿತ್ಯಾಗ ಮತ್ತು ಸಂನ್ಯಾಸದಂತಹ ಪ್ರಾಚೀನ ಕಾಲದ ನಿರ್ಬಂಧಗಳನ್ನು ಬಾಬಾಜಿ ತೆಗೆದುಹಾಕಿದ್ದರೂ ಲಾಹಿರಿ ಮಹಾಶಯರಾಗಲಿ ಅವರ ಆಧ್ಯಾತ್ಮಿಕ ಮಾರ್ಗದ ಎಲ್ಲ ಶಿಷ್ಯ ಪರಂಪರೆಯವರಾಗಲಿ (ವೈಎಸ್ಎಸ್/ಎಸ್ಆರ್‌ಎಫ್ ಗುರುಗಳು) ಉಪದೇಶವನ್ನು ಬಯಸಿ ಬಂದವರಿಗೆ, ಕ್ರಿಯಾಯೋಗ ಸಾಧನೆಯ ಪೂರ್ವ ಸಿದ್ಧತೆಯ ರೂಪದಲ್ಲಿ ಅವರಿಗೆ ಕೆಲವು ಕಾಲದ ಪ್ರಾರಂಭಿಕ ಆಧ್ಯಾತ್ಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕೊಡಬೇಕೆಂದು ಅವರು ವಿಧಿಸಿದರು.”

ಪಶ್ಚಿಮದಲ್ಲಿನ ತಮ್ಮ ಗುರಿಯ ಪ್ರಾರಂಭದ ವರ್ಷಗಳಿಂದಲೇ ಪರಮಹಂಸಜಿ, ಶ್ರದ್ಧಾವಂತ ವಿದ್ಯಾರ್ಥಿಗಳನ್ನು ಕ್ರಿಯಾ ಯೋಗದ ದೀಕ್ಷೆಗೆ ಸಿದ್ಧಮಾಡಲು ಬಾಬಾಜಿ ಅವರು ಗೊತ್ತುಪಡಿಸಿದ್ದ ಅವಶ್ಯತೆಗಳಿಗನುಗುಣವಾಗಿ ಯೋಗ ತತ್ತ್ವಗಳು ಮತ್ತು ತಂತ್ರಗಳಿಗಾಗಿ ಒಂದು ವ್ಯವಸ್ಥಿತ ಸೂಚನಾ ವಿಧಾನವನ್ನು ಅಭಿವೃದ್ಧಿಗೊಳಿಸಲು ಆರಂಭಿಸಿದರು. ಪ್ರಾರಂಭದಲ್ಲಿ ಈ ವಿಧಾನವನ್ನು ಪರಮಹಂಸಜಿ ಅವರೇ ತೆಗೆದುಕೊಳ್ಳುತ್ತಿದ್ದ ತರಗತಿಗಳಲ್ಲಿ ಮಾತ್ರ ಕಲಿಸಲಾಗುತ್ತಿತ್ತು, ಮತ್ತು ಇದರಲ್ಲಿ ಕ್ರಿಯಾ ಯೋಗದ ಸಂಪೂರ್ಣ ಪರಿಣಾಮಕಾರಿತ್ವಕ್ಕಾಗಿ ಅತ್ಯವಶ್ಯಕ ಎಂದು ಅವರು ಭಾವಿಸಿದ ಮೂರು ಪ್ರಾಥಮಿಕ ತಂತ್ರಗಳ ಅಭ್ಯಾಸವು ಸೇರಿತ್ತು: ಚೈತನ್ಯದಾಯಕ ತಂತ್ರ, ಏಕಾಗ್ರತೆಯ ಹಾಂಗ್‌-ಸಾ ತಂತ್ರ, ಮತ್ತು ಧ್ಯಾನದ ಓಂ ತಂತ್ರ.

1934ರಿಂದೀಚೆಗೆ ಯೋಗದಾ ಸತ್ಸಂಗದ ಪಾಠಗಳಲ್ಲಿ ಮೇಲಿನ ಎಲ್ಲ ಮೂರು ತಂತ್ರಗಳ ವಿಸ್ತೃತ ಸೂಚನೆಗಳನ್ನು ಕೊಡಲಾಗುತ್ತಿದೆ. ಭಗವಂತನೆಡೆಯ ದಾರಿಯೇ ತಮ್ಮ ವೈಯಕ್ತಿಕ ಗುರಿ ಎಂದು ಕ್ರಿಯಾ ಯೋಗದ ವಿಜ್ಞಾನದೆಡೆಗೆ ಸೆಳೆಯಲ್ಪಟ್ಟ ವೈಎಸ್‌ಎಸ್‌ ಪಾಠಗಳ ವಿದ್ಯಾರ್ಥಿಗಳಿಗೆ, ಪರಮಹಂಸಜಿ ಕ್ರಿಯಾ ಯೋಗ ತಂತ್ರದ ಅಭ್ಯಾಸಕ್ಕಾಗಿ ದೀಕ್ಷೆಯನ್ನು ನೀಡಿದರು. ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಮೂಲಕ ನೀಡಲಾಗುತ್ತಿರುವ ಈ ಪವಿತ್ರ ದೀಕ್ಷೆ, ವಿದ್ಯಾರ್ಥಿ ಮತ್ತು ಪರಮಹಂಸ ಯೋಗಾನಂದರ ನಡುವೆ ಗುರು-ಶಿಷ್ಯ ಸಂಬಂಧವನ್ನು ಹುಟ್ಟುಹಾಕುತ್ತದೆ.

ಗುರು-ಶಿಷ್ಯ ಸಂಬಂಧವನ್ನು, “ಬಹಳ ವೈಯಕ್ತಿಕ ಹಾಗೂ ಖಾಸಗಿ ಆಧ್ಯಾತ್ಮಿಕ ಸಂಬಂಧ…ಶಿಷ್ಯನಿಗೆ ಸಂಬಂಧಿಸಿದಂತೆ ನಿಷ್ಠಾವಂತ ಆಧ್ಯಾತ್ಮಿಕ ಪ್ರಯತ್ನ ಮತ್ತು ಗುರುಗಳು ದಯಪಾಲಿಸಿದ ದಿವ್ಯಾನುಗ್ರಹದ ಒಂದು ಸಮ್ಮಿಲನ,” ಎಂದು ಪರಮಹಂಸ ಯೋಗಾನಂದರು ವಿವರಿಸಿದ್ದಾರೆ.

ಭಗವಂತನಲ್ಲಿರುವ ನಿನ್ನ ಆನಂದದ ಹೊರತು ನಾನು ಬೇರೆ ಏನನ್ನೂ ಕೇಳುವುದಿಲ್ಲ. ಮತ್ತು ಭಗವಂತನ ಅರಿವು ಮತ್ತು ಆನಂದದ ಹೊರತು ಬೇರೇನನ್ನೂ ನೀನು ನನ್ನಿಂದ ಕೇಳಬೇಡ.

— ಪರಮಹಂಸ ಯೋಗಾನಂದ

ಈಗಲೇ ಅರ್ಜಿ ಸಲ್ಲಿಸಿ

ಅತ್ಯಂತ ಕಾರ್ಯನಿರತನಾದ ವ್ಯಕ್ತಿ ಕೂಡ ಧ್ಯಾನವನ್ನು ಅಭ್ಯಾಸ ಮಾಡಬಹುದು

ಯೋಗದಾ ಸತ್ಸಂಗ ಬೋಧನೆಗಳ ಪ್ರಾಥಮಿಕ ಕೇಂದ್ರ ಬಿಂದು, ಅನವಶ್ಯಕ ಸಿದ್ಧಾಂತಗಳಿಲ್ಲದ ತಂತ್ರ. ಪಾಠಗಳಲ್ಲಿ ವಿವರಿಸಿರುವ ಸತ್ಯಗಳು ಸಾರ್ವತ್ರಿಕವಾಗಿ ಕಾರ್ಯತಃ ಮಾಡಬಲ್ಲಂಥವು. ಅವುಗಳ ಸ್ಪಷ್ಟ ಹಾಗು ಸರಳ ನಿರೂಪಣೆ, ಅತ್ಯಂತ ಸಂಕೀರ್ಣವಾದ ಸತ್ಯಗಳನ್ನು ಕೂಡ ಯುವಕರು ಮತ್ತು ವಯಸ್ಕರು ಒಂದೇ ತೆರನಾಗಿ ತಮ್ಮ ದಿನನಿತ್ಯದ ಜೀವನದಲ್ಲಿ ಅನಾಯಾಸವಾಗಿ ಅರಿಯಬಹುದಂಥದ್ದಾಗಿದೆ ಮತ್ತು ಸುಲಭವಾಗಿ ಅಳವಡಿಸಿಕೊಳ್ಳಬಲ್ಲಂಥದ್ದಾಗಿದೆ. ಅತ್ಯಂತ ಕಾರ್ಯನಿರತನಾದ ವ್ಯಕ್ತಿ ಕೂಡ ಈ ಆದರ್ಶಗಳನ್ನು ಪಾಲಿಸಬಹುದು ಮತ್ತು ಆಚರಣೆಗೆ ತರಬಹುದು, ಏಕೆಂದರೆ, ತಂತ್ರಗಳ ಅಭ್ಯಾಸಕ್ಕೆ ಹೆಚ್ಚು ಕಡಿಮೆ ಪ್ರತಿ ದಿನ ಕೇವಲ ಸ್ವಲ್ಪ ಸಮಯ ಮಾತ್ರ ಬೇಕಾಗುತ್ತದೆ.

— ಪರಮಹಂಸ ಯೋಗಾನಂದ

ಮೂರು ಸರಳ ಹಂತಗಳಲ್ಲಿ ವೈಎಸ್‌ಎಸ್‌ ಪಾಠಗಳಿಗೆ ಅರ್ಜಿ ಸಲ್ಲಿಸಿ: 

ಹಂತ 1: ಒಂದು ಖಾತೆಯನ್ನು ತೆರೆಯಿರಿ.

ಹಂತ 2: ಅರ್ಜಿಯನ್ನು ಭರ್ತಿ ಮಾಡಿ.

ಹಂತ 3: ಪ್ರತಿಜ್ಞೆಯನ್ನು ಡಿಜಿಟಲಿ ಹಸ್ತಾಕ್ಷರ ಮಾಡಿ ಆನ್‌ಲೈನ್‌ನಲ್ಲಿ ಸಲ್ಲಿಸಿ.

ಭಾರತದಿಂದ ಹೊರಗೆ ಹಾಗು ನೆರೆಹೊರೆಯ ದೇಶಗಳವರ ಗಮನಕ್ಕೆ:

ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ ಪರಮಹಂಸ ಯೋಗಾನಂದರ ಬೋಧನೆಗಳನ್ನು ಭಾರತ, ಬಾಂಗ್ಲಾದೇಶ, ಭೂತಾನ್‌, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀ ಲಂಕಾದಲ್ಲಿ ಪ್ರಸಾರ ಮಾಡುತ್ತಿದೆ. ಈ ದೇಶಗಳನ್ನು ಬಿಟ್ಟು ನೀವು ಬೇರೆ ದೇಶದಲ್ಲಿ ವಾಸಿಸುತ್ತಿದ್ದರೆ, ದಯವಿಟ್ಟು ಈ ಪಾಠಗಳಿಗೆ ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ (ಎಸ್‌ಆರ್‌ಎಫ್‌) ಮೂಲಕ ಅರ್ಜಿ ಸಲ್ಲಿಸಿ. ಎಸ್‌ಆರ್‌ಎಫ್‌ ನಮ್ಮ ಸೋದರ ಸಂಸ್ಥೆ, ತಮ್ಮ ಬೋಧನೆಗಳನ್ನು ಪ್ರಪಂಚದ ಇತರ ಎಲ್ಲ‌ ಭಾಗಗಳಲ್ಲೂ ಪ್ರಸಾರ ಮಾಡಲು ಪರಮಹಂಸಜಿ ಇದನ್ನು 1920ರಲ್ಲಿ ಸ್ಥಾಪಿಸಿದರು. ವೈಎಸ್‌ಎಸ್‌ ಪಾಠಗಳು ಮತ್ತು ಎಸ್‌ಆರ್‌ಎಫ್‌ ಪಾಠಗಳ ವಿಷಯ ವಸ್ತುಗಳು ಒಂದೇ ಆಗಿವೆ.

ಬೆಲೆ ಮತ್ತು ತಲುಪುವ ಸಮಯ

ವೈಎಸ್‌ಎಸ್‌ ಪಾಠಗಳನ್ನು (ಮೂಲ ಸರಣಿ) 18 ಗಹನವಾದ ಪಾಠಗಳನ್ನಾಗಿ ವಿಂಗಡಿಸಲಾಗಿದೆ (ಪ್ರತಿಯೊಂದೂ ಸರಿ ಸುಮಾರು 24-40 ಪುಟಗಳು), ಇವುಗಳನ್ನು 9 ತಿಂಗಳುಗಳ ವರೆಗೆ ಪ್ರತಿ ಎರಡು ವಾರಕ್ಕೊಮ್ಮೆ ವಿದ್ಯಾರ್ಥಿಗಳು ಪಡೆಯುತ್ತಾರೆ. ಕ್ರಿಯಾ ಯೋಗದ ಪೂರ್ವಭಾವಿ ಎಲ್ಲ ಪ್ರಾಥಮಿಕ ಧ್ಯಾನದ ತಂತ್ರಗಳನ್ನು ಈ ಅವಧಿಯ ಅಂತ್ಯದೊಳಗೆ ಮೇಲ್‌ ಮಾಡಲಾಗುತ್ತದೆ.

ವೈಎಸ್‌ಎಸ್ ಪಾಠಗಳ ಮೂಲ ಸರಣಿಯ ಚಂದಾ ಶುಲ್ಕ (ಕೊರಿಯರ್/ವಿಶೇಷ ಪೋಸ್ಟ್ ಮೂಲಕ ಕಳುಹಿಸಲಾಗುವುದು) ₹1,600 ಆಗಿದ್ದು, ಇದು ಮುದ್ರಣ, ಪ್ಯಾಕಿಂಗ್ ಮತ್ತು ವಿತರಣಾ ವೆಚ್ಚವನ್ನು ಒಳಗೊಂಡಿದೆ. ಪೂರ್ಣ ಮೊತ್ತವನ್ನು ಪಾವತಿಸಲು ನಿಮಗೆ ಕಷ್ಟವಾಗುತ್ತಿದ್ದರೆ, ದಯವಿಟ್ಟು (0651) 6655 555 ಗೆ ಕರೆ ಮಾಡಿ ಅಥವಾ [email protected] ಗೆ ಇಮೇಲ್ ಮಾಡಿ (ಸೋಮವಾರದಿಂದ ಶನಿವಾರದವರೆಗೆ, ಬೆಳಿಗ್ಗೆ 9:00 ರಿಂದ ಸಂಜೆ 4:30 ರವರೆಗೆ).

ಮೇಲಿನ ಬೆಲೆಗಳು ಭಾರತಕ್ಕೆ ಮಾತ್ರ ಅನ್ವಯಿಸುತ್ತದೆ. ಬಾಂಗ್ಲಾದೇಶ, ಭೂತಾನ್‌, ಮಾಲ್ಡೀವ್ಸ್ ಮತ್ತು ಶ್ರೀ ಲಂಕಾದ ಚಂದಾ ದರ INR 7,500 ನೇಪಾಳದ ಪಾಠಗಳ ವಿದ್ಯಾರ್ಥಿಗಳು ಚಂದಾ ಮಾಹಿತಿಗೆ ಕೋಪುಂಡೋಲ್‌ ನಲ್ಲಿರುವ ನಮ್ಮ ಧ್ಯಾನ ಕೇಂದ್ರವನ್ನು ಸಂಪರ್ಕಿಸಬೇಕೆಂದು ಕೋರುತ್ತೇವೆ.ನೀವು ಇತರ ಯಾವುದೇ ದೇಶದಲ್ಲಿ ವಾಸಿಸುತ್ತಿದ್ದರೆ, ಅಥವಾ ಪಾಠಮಾಲೆಯನ್ನು ಪೂರ್ಣಗೊಳಿಸುವ ಮೊದಲೇ ಆ ದೇಶಗಳಿಗೆ ಮರಳುತ್ತಿರುವುದಾದರೆ, ನಾವು ನಿಮ್ಮನ್ನು ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್‌ಗೆ ದಾಖಲಾಗಲು ಪ್ರೋತ್ಸಾಹಿಸುತ್ತೇವೆ.

ಈ ಬೆಲೆಯಲ್ಲಿ ನಿಮ್ಮ ಮೂಲ ಪಾಠಗಳ ಸರಣಿಯ ಚಂದಾ ಅವಧಿಯಲ್ಲಿ ವೈಎಸ್‌ಎಸ್‌ ಆಪ್‌ನಲ್ಲಿ ಪಾಠಗಳ ಡಿಜಿಟಲ್‌ ಆವೃತ್ತಿ ಮತ್ತು ಪಾಠಗಳ ಎಲ್ಲ ಸಹಾಯಕ ವಿಷಯಗಳಿಗೆ ಉಚಿತ ಪ್ರವೇಶವೂ ಸೇರಿದೆ.

ವಿಶೇಷ ಸೂಚನೆ: ಪಾಠಗಳ ಹೊಸ ಆವೃತ್ತಿಯನ್ನು ನಾವು ಸಾಧ್ಯವಾದಷ್ಟು ಕಡಿಮೆ ಬೆಲೆಗೆ ಪರಿಚಯಿಸುತ್ತಿದ್ದೇವೆ, ಪಾಠಗಳನ್ನು ಪಡೆಯಲು ಸಾಧ್ಯವಾಗದಿದ್ದವರಿಗೂ ಲಭ್ಯವಾಗುವಂತೆ ಮಾಡಲಿಕ್ಕಾಗಿ. ಪರಮಹಂಸ ಯೋಗಾನಂದರ ಕಾರ್ಯವನ್ನು ಎಲ್ಲಾ ದೇಶಗಳ ಜನರಿಗೆ ಹರಡಲು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಅನೇಕ ಭಕ್ತಾದಿಗಳಿಂದ ನಾವು ನಿರೀಕ್ಷಿಸುವ ಉದಾರ ಬೆಂಬಲದಿಂದಾಗಿ ನಾವು ಇಷ್ಟು ಕಡಿಮೆ ಬೆಲೆಯಲ್ಲಿ ನೀಡಲು ಸಾಧ್ಯವಾಗುತ್ತಿದೆ.

ನಿಮಗೆ ಸಾಧ್ಯವಾದಲ್ಲಿ, ನೀವು ಚಂದಾದಾರರಾಗುವಾಗ ದೇಣಿಗೆಯನ್ನು ಕೊಡಲು ನೀವು ನಿರ್ಧರಿಸಿದರೆ, ಅದಕ್ಕೆ ನಾವು ಆಭಾರಿಯಾಗಿರುತ್ತೇವೆ. ಇದು ನಮ್ಮ ಸಾಮಾನ್ಯ ಕಾರ್ಯನಿರ್ವಹಣೆಯ ಖರ್ಚುವೆಚ್ಚಗಳನ್ನು ಭರಿಸಲು ಮತ್ತು ಪರಮಹಂಸ ಯೋಗಾನಂದರ ಬೋಧನೆಗಳನ್ನು ಎಲ್ಲ ನಿಷ್ಠಾವಂತ ಅನ್ವೇಷಕರಿಗೂ ತಲುಪಿಸಲು ಸಹಾಯ ಮಾಡುತ್ತದೆ.

ಮೊದಲ ಪಾಠ ಬರುವುದಕ್ಕೆ ದಯಮಾಡಿ 2 ರಿಂದ 4 ವಾರಗಳ ಅವಕಾಶ ನೀಡಿ.

“ಹೊಸ ಪಾಠಗಳಿಗೆ ನಿಮಗೆ ಧನ್ಯವಾದಗಳು, ಅವು ಬಹಳ ಸಹಾಯಕವಾಗಿವೆ, ನಾನು ಈಗ ಬೋಧನೆಗಳನ್ನು ಮತ್ತು ನಮ್ಮ ಮಹಾನ್‌ ಗುರುಗಳ ಆಶೀರ್ವಾದಗಳನ್ನು ಉತ್ತಮ ರೀತಿಯಲ್ಲಿ ತಿಳಿದುಕೊಳ್ಳುತ್ತಿದ್ದೇನೆ.”
– ಎಸ್‌. ಜೆ., ದಿಲ್ಲಿ

ಎಸ್‌ಆರ್‌ಎಫ್‌/ವೈಎಸ್‌ಎಸ್‌ ಆಪ್‌ — ಅಧ್ಯಯನ, ಧ್ಯಾನ ಮತ್ತು ಸ್ಫೂರ್ತಿಗಾಗಿ ನಿಮ್ಮ ಡಿಜಿಟಲ್‌ ಆಧ್ಯಾತ್ಮಿಕ ಸಂಗಾತಿ

ನಿಮ್ಮ ಆಧ್ಯಾತ್ಮಿಕ ಪಯಣಕ್ಕೆ ಸಹಾಯ ಮಾಡಲು ಒಂದು ಡಿಜಿಟಲ್‌ ಸಂಪನ್ಮೂಲ

ಆಧ್ಯಾತ್ಮಿಕ ಮೇರುಕೃತಿ ಯೋಗಿಯ ಆತ್ಮಕಥೆಯ ಲೇಖಕರಾದ ಪರಮಹಂಸ ಯೋಗಾನಂದರ ಬೋಧನೆಗಳ ಮೂಲಕ ಒಂದು ಬದುಕು-ಪರಿವರ್ತಿಸುವ, ಆತ್ಮವನ್ನು ಜಾಗೃತಗೊಳಿಸುವ ಶಾಂತಿ, ಆನಂದ ಮತ್ತು ಜ್ಞಾನವನ್ನು ಅನುಭವಿಸಿ.

ಎಸ್‌ಆರ್‌ಎಫ್‌/ವೈಎಸ್‌ಎಸ್‌ ಆಪ್‌ ಪ್ರತಿಯೊಬ್ಬರಿಗಾಗಿ ಇದೆ — ನೀವು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಚ್ಚ ಹೊಸಬರಾಗಿರಲಿ ಅಥವಾ ದಶಕಗಳಿಂದ ನಿಮ್ಮನ್ನು ನೀವು ಈ ಮಹಾನ್‌ ಗುರುಗಳ ಜ್ಞಾನದಲ್ಲಿ ತಲ್ಲೀನಗೊಳಿಸಿಕೊಂಡಿರಲಿ. ಧ್ಯಾನ, ಕ್ರಿಯಾ ಯೋಗ ವಿಜ್ಞಾನ, ಮತ್ತು ಒಂದು ಆಧ್ಯಾತ್ಮಿಕ ಸಮತೋಲಿತ ಬದುಕನ್ನು ಬಾಳುವ ಕಾರ್ಯೋಪಯೋಗಿ ಮಾರ್ಗಗಳನ್ನು ಕಲಿಯಲು ಬಯಸುವ ಯಾರಿಗಾದರೂ ಕೂಡ.

ನಿರೂಪಣೆಗಳು:

  • ಶಾಂತಿ, ಭಯವಿಲ್ಲದೆ ಬದುಕುವುದು, ಭಗವಂತ ಬೆಳಕಾಗಿ, ಪ್ರಜ್ಞೆಯ ವಿಸ್ತರಣೆ ಮತ್ತು ಇನ್ನೂ ಹೆಚ್ಚಿನ ವಿಷಯಗಳ ಮೇಲೆ ಮಾರ್ಗದರ್ಶಿತ ಧ್ಯಾನ — 15ರಿಂದ 45 ನಿಮಿಷಗಳ ಕಾಲಾವಧಿಗೆ ಅಳವಡಿಸಿಕೊಳ್ಳಬಹುದಾದ ಧ್ಯಾನ
  • ಆನ್‌ಲೈನ್‌ ಧ್ಯಾನಗಳಿಗೆ ಮುಕ್ತ ಅವಕಾಶ
  • ವೈಎಸ್‌ಎಸ್‌/ಎಸ್‌ಆರ್‌ಎಫ್‌ ಸಮಾಚಾರಗಳು ಮತ್ತು ಕಾರ್ಯಕ್ರಮಗಳ ಮಾಹಿತಿ

ವೈಎಸ್‌ಎಸ್‌/ಎಸ್‌ಆರ್‌ಎಫ್‌ ಪಾಠಗಳ ವಿದ್ಯಾರ್ಥಿಗಳಾದವರಿಗೆ…

ವೈಎಸ್‌ಎಸ್‌/ಎಸ್‌ಆರ್‌ಎಫ್‌ ಕ್ರಿಯಾ ಯೋಗ ಬೋಧನಗೆಳನ್ನು ನಿಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಲು ಈ ಆಪ್‌ನಲ್ಲಿ ನಿಮ್ಮ ಪಾಠಗಳ ಡಿಜಿಟಲ್‌ ಆವೃತ್ತಿಗಳೊಂದಿಗೆ ವೈವಿಧ್ಯಮಯ ಸಮೃದ್ಧ ಮಲ್ಟಿಮೀಡಿಯಾ ವಸ್ತುಗಳೂ ಸೇರಿವೆ.

ಸೇರಿದಂತೆ:

  • ಪರಮಹಂಸ ಯೋಗಾನಂದರ ಆಡಿಯೋ ಮುದ್ರಿಕೆಗಳು
  • ವೈಎಸ್‌ಎಸ್‌/ಎಸ್‌ಆರ್‌ಎಫ್‌ ಸನ್ಯಾಸಿಗಳಿಂದ ಮಾರ್ಗದರ್ಶಿತ ಧ್ಯಾನಗಳು ಮತ್ತು ದೃಶ್ಯೀಕರಣಗಳು
  • ವೈಎಸ್‌ಎಸ್‌/ಎಸ್‌ಆರ್‌ಎಫ್‌ ಧ್ಯಾನ ತಂತ್ರಗಳ ತರಗತಿಗಳು
  • ವೈಎಸ್‌ಎಸ್‌/ಎಸ್‌ಆರ್‌ಎಫ್‌ ಚೈತನ್ಯದಾಯಕ ವ್ಯಾಯಾಮಗಳ ಹೆಜ್ಜೆ ಹೆಜ್ಜೆಯ ವೀಡಿಯೋ ಮಾಹಿತಿಗಳು

ನೀವು ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಪಾಠಗಳ ವಿದ್ಯಾರ್ಥಿಯಾಗಿದ್ದಲ್ಲಿ, ಆಪ್‌ನಲ್ಲಿ ಪಾಠಗಳನ್ನು ನೋಡಲು ದಯವಿಟ್ಟು ಸರಿಯೆಂದು ಪರಿಶೀಲಿಸಿದ ನಿಮ್ಮ ಖಾತೆಯ ಮಾಹಿತಿಯನ್ನು ಉಪಯೋಗಿಸಿ.

YSS SRF App Introductory Video

ನಾನು ಹೇಗೆ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಆಪ್‌ ಪಡೆದುಕೊಳ್ಳಬಹುದು

  • ಇನ್ನೂ ಪಾಠಗಳ ವಿದ್ಯಾರ್ಥಿಯಾಗಿಲ್ಲವೆ? ಮೊದಲು ವೈಎಸ್‌ಎಸ್‌ ಪಾಠಗಳಿಗೆ ಚಂದಾದಾರರಾಗಿ. ನಂತರ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಮತ್ತು ಹೇಗೆ ಸೈನ್‌ ಇನ್‌ ಮಾಡಬೇಕೆಂಬ ಸೂಚನೆಗಳಿರುವ ಇಮೇಲ್‌ ನಿಮಗೆ ಬರುತ್ತದೆ.
  • ಈಗಾಗಲೇ ವೈಎಸ್‌ಎಸ್‌ ಮೂಲ ಪಾಠಗಳಿಗೆ ಚಂದಾದಾರರಾಗಿದ್ದೀರಾ? ಗೂಗಲ್‌ ಪ್ಲೇ ಅಥವಾ ಆಪಲ್‌ ಸ್ಟೋರ್‌ನಿಂದ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ಲಾಗಿನ್‌ ಆಗಲು ನಿಮ್ಮ ವೈಎಸ್‌ಎಸ್‌ ಡಿವೋಟಿ ಪೋರ್ಟಲ್‌ನ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ನ ಅವಶ್ಯಕತೆಯಿದೆ.

ವೈಎಸ್‌ಎಸ್‌ ಪಾಠಗಳ ವಿದ್ಯಾರ್ಥಿಗಳು ಡೆಸ್ಕ್‌ಟಾಪ್‌ ಆಪ್‌ ಮೇಲೂ ಕೂಡ ವೈಎಸ್‌ಎಸ್‌ ಪಾಠಗಳನ್ನು ಮತ್ತು ಸಹಾಯಕ ವಿಷಯಗಳನ್ನು ನೋಡಬಹುದು:

ನಮ್ಮ ಇತ್ತೀಚಿನ ಬದಲಾವಣೆಗೆ ಪ್ರಶಂಸೆ

ಪದೇ ಪದೇ ಕೇಳುವ ಪ್ರಶ್ನೆಗಳು

ಆಪ್‌ಗೆ ಸಂಬಂಧಿಸಿದ ಪದೇ ಪದೇ ಕೇಳುವ ಕೆಲವು ಪ್ರಶ್ನೆಗಳನ್ನು ಓದಲು ಕೆಳಗೆ ಕೊಟ್ಟಿರುವ ಲಿಂಕ್‌ ಮೇಲೆ ಒತ್ತಿ.

ಮೇಲಿನ ಪದೇ ಪದೇ ಕೇಳುವ ಪ್ರಶ್ನೆಗಳು (ಏಫ್‌ಎಕ್ಯೂ) ನಿರ್ದಿಷ್ಟವಾಗಿ ಎಸ್‌ಆರ್‌ಎಫ್‌/ವೈಎಸ್‌ಎಸ್‌ ಆಪ್‌ಗೆ ಸಂಬಂಧಪಟ್ಟಿವೆ, ನೀವು ವೈಎಸ್‌ಎಸ್‌ ಮತ್ತು ಈ ಬೋಧನೆಗಳ ಬಗ್ಗೆ ಏಫ್‌ಎಕ್ಯೂ ನೋಡಬೇಕೆಂದಿದ್ದರೆ ದಯವಿಟ್ಟು ನಮ್ಮ ಏಫ್‌ಎಕ್ಯೂ ಪುಟಕ್ಕೆ ಭೇಟಿ ನೀಡಿ.

ವೈಎಸ್‌ಎಸ್‌ ಕನ್ನಡ ಪಾಠಗಳು: ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ವೈಎಸ್‌ಎಸ್‌ ಕನ್ನಡ ಪಾಠಗಳಿಗೆ ಯಾರು ಅರ್ಜಿ ಸಲ್ಲಿಸಬಹುದು?

ಹೊಸ ಅರ್ಜಿದಾರರು ಹಾಗೂ ಪ್ರಸ್ತುತ ಪಾಠಗಳ ವಿದ್ಯಾರ್ಥಿಗಳು, ಅವರು ಯಾವ ದೇಶದಲ್ಲೇ ವಾಸಿಸುತ್ತಿರಲಿ, ಕನ್ನಡ ಪಾಠಗಳಿಗೆ ಅರ್ಜಿ ಸಲ್ಲಿಸಬಹುದು.


ವೈಎಸ್‌ಎಸ್‌ ಕನ್ನಡ ಪಾಠಮಾಲೆಗೆ ಚಂದಾ ಶುಲ್ಕ ಎಷ್ಟಿದೆ?

ಕನ್ನಡ ಪಾಠಗಳ ಮೂಲ ಪಾಠಮಾಲೆಯು ಈ ಕೆಳಗಿನ ದರಗಳಲ್ಲಿ ಲಭ್ಯವಿದೆ:

ಭಾರತದ ನಿವಾಸಿಗಳಿಗೆ:

  • ₹1,600 – ಕೊರಿಯರ್/ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗುತ್ತದೆ

ಭಾರತದ ಹೊರಗಿನ ನಿವಾಸಿಗಳಿಗೆ:

  • ₹7,500 – ಸಾರ್ಕ್ ದೇಶಗಳಿಗೆ
  • ₹11,000 – ಸಾರ್ಕ್ ದೇಶಗಳನ್ನು ಹೊರತುಪಡಿಸಿ

ಚಂದಾದಾರರು ಪಾಠಗಳ ಡಿಜಿಟಲ್ ಆವೃತ್ತಿಯನ್ನು, ಪಾಠಗಳಲ್ಲಿನ ಎಲ್ಲಾ ಪೂರಕ ಸಾಮಗ್ರಿಗಳನ್ನೂ ಒಳಗೊಂಡಂತೆ, ಆ್ಯಪ್ ನಲ್ಲಿ ಉಚಿತವಾಗಿ ಪಡೆಯಬಹುದು.

ದಯವಿಟ್ಟು ಗಮನಿಸಿ: ನಿಮಗೆ ಪೂರ್ಣ ಮೊತ್ತವನ್ನು ಪಾವತಿಸಲು ಕಷ್ಟವಾಗುತ್ತಿದ್ದರೆ, ದಯವಿಟ್ಟು [email protected] ಗೆ ಇಮೇಲ್ ಮಾಡಿ ಅಥವಾ ಸೋಮವಾರದಿಂದ ಶನಿವಾರದವರೆಗೆ, ಬೆಳಗ್ಗೆ 9:00 ರಿಂದ ಸಂಜೆ 4:30 ರವರೆಗೆ (ಭಾರತೀಯ ಕಾಲಮಾನ), (0651) 6655 555 ಕ್ಕೆ ಕರೆ ಮಾಡಿ.


ವೈಎಸ್‌ಎಸ್‌ ಕನ್ನಡ ಪಾಠಗಳಿಗೆ ನಾನು ಹೇಗೆ ಅರ್ಜಿ ಸಲ್ಲಿಸಬಹುದು?

ಭಕ್ತರು ಕೆಳಗೆ ನೀಡಲಾದ ಯಾವುದೇ ಒಂದು ವಿಧಾನವನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು:

ಹೊಸ ಅರ್ಜಿದಾರರು (ಪ್ರಸ್ತುತ ವೈಎಸ್‌ಎಸ್‌ ಪಾಠಗಳ ಸದಸ್ಯರಲ್ಲದವರು)

  • ವಿಧಾನ 1: ಡಿವೋಟಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.
  • ವಿಧಾನ 2: ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು, ಭಾರತದಾದ್ಯಂತ ಮಾನ್ಯವಾಗಿರುವ, "ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ" ಹೆಸರಿಗೆ ಪಾವತಿಸಬೇಕಾದ ಚೆಕ್‌ನೊಂದಿಗೆ ಅಂಚೆ ಮೂಲಕ ಕಳುಹಿಸಿ.
    • ಅರ್ಜಿ ನಮೂನೆಯನ್ನು ಮುದ್ರಿಸಿ ಮತ್ತು ಭರ್ತಿ ಮಾಡಲು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
    • ದಯವಿಟ್ಟು ಮನಿ ಆರ್ಡರ್, ಬ್ಯಾಂಕ್ ಡ್ರಾಫ್ಟ್ ಅಥವಾ ಐಪಿಓ (IPO) ಮೂಲಕ ಪಾವತಿಗಳನ್ನು ಮಾಡಬೇಡಿ.

ಪ್ರಸ್ತುತ ವೈಎಸ್‌ಎಸ್‌ ಪಾಠಗಳ ಸದಸ್ಯರು

  • ವಿಧಾನ 1: ವೈಎಸ್‌ಎಸ್‌ ಡಿವೋಟಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.
  • ವಿಧಾನ 2: ಸರಿಯಾಗಿ ಭರ್ತಿ ಮಾಡಿದ ಪಾಠಗಳ ಚಂದಾದಾರಿಕೆ ಅರ್ಜಿಯನ್ನು ಪಾವತಿ ವಿವರಗಳೊಂದಿಗೆ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾಕ್ಕೆ ಕಳುಹಿಸಿ.
    • ಅರ್ಜಿ ನಮೂನೆಯನ್ನು ಮುದ್ರಿಸಿ ಭರ್ತಿ ಮಾಡಲು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
    • ದಯವಿಟ್ಟು ಮನಿ ಆರ್ಡರ್, ಬ್ಯಾಂಕ್ ಡ್ರಾಫ್ಟ್ ಅಥವಾ IPO ಮೂಲಕ ಪಾವತಿಗಳನ್ನು ಮಾಡಬೇಡಿ.
  • ವಿಧಾನ 3: ದೂರವಾಣಿ – ವೈಎಸ್‌ಎಸ್‌ ಸಹಾಯ ಕೇಂದ್ರದಲ್ಲಿ ಪಾಠಗಳ ಚಂದಾದಾರಿಕೆ ವಿನಂತಿಗಳನ್ನು ಸ್ವೀಕರಿಸಲಾಗುತ್ತದೆ ಮತ್ತು ಚಂದಾದಾರಿಕೆಗಾಗಿ ಪಾವತಿ ಮಾಡಲು ಭಕ್ತರಿಗೆ ಪಾವತಿ ಲಿಂಕ್ ಅನ್ನು ಕಳುಹಿಸಲಾಗುತ್ತದೆ.

ಪಾಠಗಳ ಡಿಜಿಟಲ್ ಆವೃತ್ತಿಯನ್ನು ಹೇಗೆ ಪ್ರವೇಶಿಸಬಹುದು?

ಪಾಠಗಳನ್ನು ಎಸ್‌ಆರ್‌ಎಫ್‌ / ವೈಎಸ್‌ಎಸ್‌ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಓದಬಹುದು. ಭಕ್ತರ ಲಾಗಿನ್ ವಿವರಗಳೊಂದಿಗೆ, ಆನ್‌ಲೈನ್ ವೆಬ್ ಪೋರ್ಟಲ್ ಆದ study.yssofindia.org ಗೆ ಲಾಗ್ ಇನ್ ಮಾಡುವ ಮೂಲಕವೂ ಅವುಗಳನ್ನು ಪ್ರವೇಶಿಸಬಹುದು.


ಕ್ರಿಯಾ ಯೋಗವನ್ನು ಕುರಿತು

ನಾನು ಕ್ರಿಯಾ ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸುತ್ತೇನೆ. ಅದಕ್ಕಾಗಿ ನಾನು ಕನ್ನಡ ಪಾಠಗಳಿಗೆ ಚಂದಾದಾರನಾಗಬೇಕೇ?

ಕ್ರಿಯಾ ಯೋಗಕ್ಕೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ವೈಎಸ್‌ಎಸ್‌ ಪಾಠಗಳ ಹೊಸ ಮೂಲಭೂತ ಸರಣಿಯನ್ನು (ಇಂಗ್ಲಿಷ್, ಕನ್ನಡ, ತೆಲುಗು ಅಥವಾ ತಮಿಳು ಭಾಷೆಗಳಲ್ಲಿ) ಅಧ್ಯಯನ ಮಾಡುವುದು ಕಡ್ಡಾಯವಾಗಿದೆ.


ನಾನು ಒಬ್ಬ ಕ್ರಿಯಾಯೋಗಿ. ನಾನು ಕನ್ನಡದಲ್ಲಿ ಕ್ರಿಯಾ ಪಾಠಗಳಿಗೆ ಚಂದಾದಾರನಾಗಬಹುದೇ?

ದಯವಿಟ್ಟು ಗಮನಿಸಿ, ವೈಎಸ್‌ಎಸ್‌ ಪಾಠಗಳ ಕನ್ನಡ ಮೂಲಭೂತ ಸರಣಿಗೆ ನೋಂದಣಿ ಪ್ರಾರಂಭವಾದ ನಂತರ, ಕನ್ನಡದಲ್ಲಿನ ಹೊಸ ಕ್ರಿಯಾ ಪಾಠಗಳು ಲಭ್ಯವಾಗಲು ಸುಮಾರು 9 ತಿಂಗಳುಗಳು ಬೇಕಾಗಬಹುದು.

ನೀವು ಈಗಾಗಲೇ ವೈಎಸ್ಎಸ್ ಕ್ರಿಯಾಯೋಗಿಯಾಗಿದ್ದರೆ, ಕನ್ನಡ ಭಾಷೆಯಲ್ಲಿನ ಹೊಸ ಮೂಲಭೂತ ಸರಣಿಯನ್ನು ಮೊದಲು ಅಧ್ಯಯನ ಮಾಡದೆಯೇ, ನೀವು ಹೊಸ ಕನ್ನಡ ಕ್ರಿಯಾ ಪಾಠಗಳನ್ನು ವಿನಂತಿಸಬಹುದು.

ಆದರೆ, ನೀವು ಇನ್ನೂ ಪಾಠಗಳ ಮೂಲಭೂತ ಸರಣಿಯನ್ನು ಅಧ್ಯಯನ ಮಾಡದಿದ್ದರೆ, ಮೂಲಭೂತ ಸರಣಿಗೆ ನೊಂದಾಯಿಸಿಕೊಳ್ಳಲು ನಾವು ಬಲವಾಗಿ ಶಿಫಾರಸು ಮಾಡುತ್ತೇವೆ, ಏಕೆಂದರೆ ಹೊಸ ಪಾಠಗಳು ಮಾನವ ಅಸ್ತಿತ್ವದ ವಿವಿಧ ಆಯಾಮಗಳ ಕುರಿತು – ಶಕ್ತಿ ಸಂಚಲನ ವ್ಯಾಯಾಮಗಳು, ಹಾಂಗ್-ಸಾ, ಮತ್ತು ಓಂ ತಂತ್ರಗಳನ್ನು ಒಳಗೊಂಡಂತೆ – ಹೆಚ್ಚು ಆಳವಾದ ಮಾರ್ಗದರ್ಶನವನ್ನು ನೀಡುತ್ತವೆ.


ಕನ್ನಡ ಪಾಠಗಳ ಆನ್‌ಲೈನ್ ನೊಂದಣಿ ಕುರಿತು

ನನಗೆ ಇಂಗ್ಲಿಷ್ ತಿಳಿದಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಡಿವೋಟಿ ಪೋರ್ಟಲ್‌ನ ಮುಖಪುಟ ಮತ್ತು ಅರ್ಜಿ ನಮೂನೆ ಈಗ ಕನ್ನಡದಲ್ಲಿ ಲಭ್ಯವಿದೆ.

ಡಿವೋಟಿ ಪೋರ್ಟಲ್‌ನಲ್ಲಿ:

  • ಲಭ್ಯವಿರುವ ಭಾಷೆಗಳ ಪಟ್ಟಿಯನ್ನು ವೀಕ್ಷಿಸಲು ಮೇಲಿನ ಬಲ ಮೂಲೆಯಲ್ಲಿರುವ “ಇಂಗ್ಲಿಷ್” ಮೇಲೆ ಒತ್ತಿ.
  • ನಂತರ ಪುಟವನ್ನು ಕನ್ನಡ ಭಾಷೆಯಲ್ಲಿ ವೀಕ್ಷಿಸಲು "ಕನ್ನಡ"ವನ್ನು ಆಯ್ಕೆಮಾಡಿ.

ದಯವಿಟ್ಟು ಗಮನಿಸಿ: ಡಿವೋಟಿ ಪೋರ್ಟಲ್‌ನ ಇಂಗ್ಲಿಷ್ ಆವೃತ್ತಿಯಲ್ಲಿಯೂ ಸಹ, ಕನ್ನಡ ಪಾಠಗಳ ಅರ್ಜಿ ನಮೂನೆ ಕನ್ನಡದಲ್ಲಿ ಲಭ್ಯವಿದೆ.


ವಿವಿಧ ಬಳಕೆದಾರರಿಗೆ ಸನ್ನಿವೇಶಗಳು

ಪ್ರಕರಣ 1: ವೈಎಸ್‌ಎಸ್‌ ಪಾಠಗಳ ವಿದ್ಯಾರ್ಥಿಯಲ್ಲದವರು – ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರು

  • ಪಾಠಗಳಿಗೆ ಅರ್ಜಿ ಸಲ್ಲಿಸಿ → “ಕನ್ನಡ” ವನ್ನು ಒತ್ತಿ
  • ಕನ್ನಡ ಭಾಷೆಯಲ್ಲಿರುವುದನ್ನು ಹೊರತುಪಡಿಸಿ, ಉಳಿದದ್ದೆಲ್ಲವೂ ಇಂಗ್ಲಿಷ್ ವಿದ್ಯಾರ್ಥಿ ಅರ್ಜಿಯಲ್ಲಿರುವಂತೆಯೇ ಇರುತ್ತದೆ

ಪ್ರಕರಣ 2: ವೈಎಸ್‌ಎಸ್‌ ಪಾಠಗಳ ವಿದ್ಯಾರ್ಥಿಯಲ್ಲದವರು – ಸಹವರ್ತಿ ಅರ್ಜಿ

  • ಪಾಠಗಳಿಗಾಗಿ ಅರ್ಜಿ ಸಲ್ಲಿಸಿ → “ಕನ್ನಡ” ವನ್ನು ಒತ್ತಿ
  • ಕನ್ನಡ ಭಾಷೆಯಲ್ಲಿರುವುದನ್ನು ಹೊರತುಪಡಿಸಿ, ಉಳಿದವೆಲ್ಲವೂ ಇಂಗ್ಲಿಷ್ ಸಹವರ್ತಿ ಅರ್ಜಿಯಲ್ಲಿರುವಂತೆಯೇ ಇರುತ್ತವೆ.

ಪ್ರಕರಣ 3: Aಈಗಾಗಲೇ ವೈಎಸ್‌ಎಸ್‌ ಪಾಠಗಳ ವಿದ್ಯಾರ್ಥಿಯಾಗಿದ್ದು, ದೃಢೀಕರಿಸಿದ ವೈಎಸ್‌ಎಸ್‌ ಡಿವೋಟಿ ಪೋರ್ಟಲ್ ಖಾತೆಯನ್ನು ಹೊಂದಿಲ್ಲ

ಮೊದಲು, ನಿಮ್ಮ ಖಾತೆಯನ್ನು ದೃಢೀಕರಿಸಿ, ನಂತರ ಭಕ್ತರ ಪಾಠಗಳ ಚಂದಾದಾರಿಕೆಯ ಸ್ಥಿತಿಯನ್ನು ಅವಲಂಬಿಸಿ ಪ್ರಕರಣ 4 ರಲ್ಲಿನ ಸನ್ನಿವೇಶಗಳಲ್ಲಿ ಒಂದನ್ನು ಅನುಸರಿಸಿ.

ಪ್ರಕರಣ 4: ದೃಢೀಕರಿಸಿದ ಡಿವೋಟಿ ಪೋರ್ಟಲ್ ಖಾತೆಯನ್ನು ಹೊಂದಿರುವ ಪ್ರಸ್ತುತ ವೈಎಸ್‌ಎಸ್‌ ಪಾಠಗಳ ವಿದ್ಯಾರ್ಥಿ

  • ಸನ್ನಿವೇಶ A: ಹಳೆಯ ಇಂಗ್ಲಿಷ್/ಹಿಂದಿ ಪಾಠಗಳನ್ನು ಪೂರ್ಣಗೊಳಿಸಿದವರು ಮತ್ತು/ಅಥವಾ ಇಂಗ್ಲಿಷ್/ತಮಿಳು/ತೆಲುಗು ಭಾಷೆಗಳಲ್ಲಿನ ಪಾಠಗಳ ಹೊಸ ಆವೃತ್ತಿಗೆ ಚಂದಾದಾರರಾಗಿರುವವರು.
    • ಪಾಠಗಳಿಗಾಗಿ ಅರ್ಜಿ ಸಲ್ಲಿಸಿ → “ಕನ್ನಡ” ಆಯ್ಕೆಯನ್ನು ಒತ್ತಿ
    • ಕನ್ನಡ ಭಾಷೆ ಹೊರತುಪಡಿಸಿ, ಉಳಿದ ಪ್ರಕ್ರಿಯೆಯು ಇಂಗ್ಲಿಷ್‌ನಲ್ಲಿರುವಂತೆಯೇ ಇರುತ್ತದೆ

  • ಸನ್ನಿವೇಶ B: ಮೂಲ ವಿದ್ಯಾರ್ಥಿಯು ಈಗಾಗಲೇ ಕನ್ನಡ ಪಾಠಗಳಿಗೆ ಅರ್ಜಿ ಸಲ್ಲಿಸಿರುವಾಗ, ಪ್ರಸ್ತುತ ಸಹವರ್ತಿ ವಿದ್ಯಾರ್ಥಿಯಾಗಿ ಕನ್ನಡ ಪಾಠಗಳಿಗೆ ಅರ್ಜಿ ಸಲ್ಲಿಸಿರುವವರು.
    • ಕನ್ನಡ ಪಾಠಗಳಿಗಾಗಿ ಸಹವರ್ತಿ ವಿದ್ಯಾರ್ಥಿಯಾಗಿ ಮುಂದುವರಿಯಲು: ₹500 ಪಾವತಿಸಿ ಸಹವರ್ತಿ ವಿದ್ಯಾರ್ಥಿಯಾಗಿ ಮುಂದುವರಿಯಿರಿ
    • ಕನ್ನಡ ಪಾಠಗಳಿಗಾಗಿ ಮೂಲ ವಿದ್ಯಾರ್ಥಿಯಾಗಿ ನೋಂದಾಯಿಸಲು: “ಮೂಲ ವಿದ್ಯಾರ್ಥಿ” ಯನ್ನು ಆಯ್ಕೆಮಾಡಿ ಮತ್ತು ₹1,600 ಪೂರ್ಣ ಶುಲ್ಕವನ್ನು ಪಾವತಿಸುವ ಮೂಲಕ ಚಂದಾದಾರಿಕೆಯನ್ನು ಪೂರ್ಣಗೊಳಿಸಿ

  • ಸನ್ನಿವೇಶ C:ಒಬ್ಬ ಸಹವರ್ತಿ ವಿದ್ಯಾರ್ಥಿಯು ಕನ್ನಡ ಪಾಠಗಳಿಗೆ ಅರ್ಜಿ ಸಲ್ಲಿಸಿದ್ದಾರೆ, ಆದರೆ ಮೂಲ ವಿದ್ಯಾರ್ಥಿಯು ಕನ್ನಡ ಪಾಠಗಳಿಗೆ ಅರ್ಜಿ ಸಲ್ಲಿಸಿಲ್ಲ.
    • ಭಕ್ತರು ಮೂಲ ವಿದ್ಯಾರ್ಥಿಯಾಗಿ ಮುಂದುವರಿಯಬಹುದು ಮತ್ತು ಪೂರ್ಣ ಚಂದಾ ಶುಲ್ಕವನ್ನು (₹1,600) ಪಾವತಿಸುವ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಪ್ರಕರಣ 5: ಪ್ರಸ್ತುತ ಎಸ್‌ಆರ್‌ಎಫ್‌ ಪಾಠಗಳ ವಿದ್ಯಾರ್ಥಿಯಾಗಿದ್ದು, ವೈಎಸ್‌ಎಸ್‌ ಕನ್ನಡ ಪಾಠಗಳಿಗೆ ಚಂದಾದಾರರಾಗಲು ಇಚ್ಛಿಸುವವರು

ಎಸ್‌ಆರ್‌ಎಫ್‌ ಭಕ್ತರು ಹೊಸ ವೈಎಸ್‌ಎಸ್‌ ಪಾಠಗಳ ವಿದ್ಯಾರ್ಥಿಯಾಗಿ ಅರ್ಜಿ ಸಲ್ಲಿಸಬಹುದು ಮತ್ತು ಕನ್ನಡ ಪಾಠಗಳಿಗೆ ಚಂದಾದಾರರಾಗಬಹುದು.

ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ:

  • ಭಕ್ತರಿಗೆ ವೈಎಸ್‌ಎಸ್‌ ಅರ್ಜಿ ಸಂಖ್ಯೆ ಲಭ್ಯವಾಗುತ್ತದೆ
  • ಮತ್ತು ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ವೈಎಸ್‌ಎಸ್‌ ಪಾಠಗಳ ನೋಂದಣಿ ಸಂಖ್ಯೆಯನ್ನು ನೀಡಲಾಗುವುದು.

ಎಸ್ಆರ್‌ಎಫ್ ಪಾಠಗಳ ವಿದ್ಯಾರ್ಥಿಗಳಿಗೆ ಚಂದಾ ಶುಲ್ಕ:

  • ₹7,500 – ಸಾರ್ಕ್ ರಾಷ್ಟ್ರಗಳು
  • ₹11,000 – ಸಾರ್ಕ್ ರಾಷ್ಟ್ರಗಳನ್ನು ಹೊರತುಪಡಿಸಿ