ಮಹಾವತಾರ್‌ ಬಾಬಾಜಿ ಸ್ಮೃತಿ ದಿವಸ

ಸ್ಮರಣಾರ್ಥ ಧ್ಯಾನ

ಶುಕ್ರವಾರ, ಜುಲೈ 25

ಬೆಳಿಗ್ಗೆ 6:30

– ಬೆಳಿಗ್ಗೆ 8:00

(ಅಧಿಕೃತ ಭಾರತೀಯ ಕಾಲಮಾನ)

ಕಾರ್ಯಕ್ರಮದ ಬಗ್ಗೆ

ದೈವ ಸಾಕ್ಷಾತ್ಕಾರದ ವೈಜ್ಞಾನಿಕ ತಂತ್ರವಾದ ಕ್ರಿಯಾಯೋಗ, ಅಂತಿಮವಾಗಿ ಎಲ್ಲೆಡೆ ಹರಡುತ್ತದೆ ಮತ್ತು ಅನಂತ ತಂದೆಯ ಬಗ್ಗೆ ಮನುಷ್ಯನ ವೈಯಕ್ತಿಕ, ಅತೀಂದ್ರಿಯ ಅರಿವಿನ ಮೂಲಕ ರಾಷ್ಟ್ರಗಳನ್ನು ಸಾಮರಸ್ಯಗೊಳಿಸಲು ಸಹಾಯ ಮಾಡುತ್ತದೆ.

ಯೋಗಿಯ ಆತ್ಮಕಥೆ ಯಲ್ಲಿ ಮಹಾವತಾರ ಬಾಬಾಜಿ

1920 ರಲ್ಲಿ ಪರಮಹಂಸ ಯೋಗಾನಂದರು ಅಮೆರಿಕಕ್ಕೆ ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ಮಹಾವತಾರ ಬಾಬಾಜಿಯವರು ಕೋಲ್ಕತ್ತಾದ ಗಾರ್‌ಪಾರ್ ರಸ್ತೆಯಲ್ಲಿರುವ ಗುರುದೇವರ ಮನೆಗೆ ಭೇಟಿ ನೀಡಿ, ಜಗತ್ತಿನಾದ್ಯಂತ ಕ್ರಿಯಾ ಯೋಗ ಬೋಧನೆಗಳನ್ನು ಹರಡುವ ಅವರ ಉದ್ದೇಶದ ಬಗ್ಗೆ ದೈವಿಕ ಭರವಸೆ ನೀಡಿದರು. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಭಕ್ತರು, ಮಹಾವತಾರ ಬಾಬಾಜಿ ಮತ್ತು ಪರಮಹಂಸ ಯೋಗಾನಂದರ ಈ ಭೇಟಿಯನ್ನು ಮಹಾವತಾರ ಬಾಬಾಜಿ ಸ್ಮೃತಿ ದಿವಸ ಎಂದು ಸ್ಮರಿಸಿದ್ದಾರೆ.

ಈ ಪವಿತ್ರ ದಿನವನ್ನು ಆಚರಿಸಲು ಮಹಾವತಾರ್ ಬಾಬಾಜಿಯವರ ಗೌರವಾರ್ಥ ಯೋಗದಾ ಸತ್ಸಂಗ ಸೊಸೈಟಿಯ ಸನ್ಯಾಸಿಯೊಬ್ಬರಿಂದ ಇಂಗ್ಲಿಷ್‌ನಲ್ಲಿ ಒಂದು ವಿಶೇಷವಾದ ಆನ್‌ಲೈನ್ ಧ್ಯಾನವನ್ನು ನಡೆಸಲಾಯಿತು. ಈ ಕಾರ್ಯಕ್ರಮವನ್ನು ವೈಎಸ್ಎಸ್ ನೋಯ್ಡಾ ಆಶ್ರಮದಿಂದ ನೇರ ಪ್ರಸಾರ ಮಾಡಲಾಗಿದ್ದು, ಇದು ಭಜನೆ, ಪ್ರೇರಣದಾಯಕ ವಾಚನ, ಹಾಗೂ ಧ್ಯಾನದ ಅವಧಿಗಳನ್ನು ಒಳಗೊಂಡಿತ್ತು.

ಈ ಶುಭ ಸಂದರ್ಭದಲ್ಲಿ, ವೈಎಸ್ಎಸ್ ಆಶ್ರಮಗಳು, ಕೇಂದ್ರಗಳು ಹಾಗೂ ಮಂಡಳಿಗಳಲ್ಲಿ ನೇರ ವೈಯುಕ್ತಿಕ ಕಾರ್ಯಕ್ರಮಗಳನ್ನು ಸಹ ನಡೆಸಲಾಯಿತು.

ಈ ಪವಿತ್ರ ದಿನದಂದು ಕಾಣಿಕೆ ಅರ್ಪಿಸಲು ನೀವು ಇಚ್ಚಿಸುವಿರಾದರೆ, ದಯವಿಟ್ಟು ಕೆಳಗೆ ನೀಡಿರುವ ಗುಂಡಿಯನ್ನು ಒತ್ತಿ. ನಿಮ್ಮ ಔದಾರ್ಯಕ್ಕಾಗಿ ನಾವು ಸದಾ ಕೃತಜ್ಞರಾಗಿದ್ದೇವೆ. ಯೋಗದಾ ಸತ್ಸಂಗ ಸೊಸೈಟಿಯ ಗುರು ಪರಂಪರೆಯ ಮೂಲಕ ಲಭಿಸುವ ಅನೇಕ ಅನುಗ್ರಹಗಳಿಗೆ ಹೃತ್ಪೂರ್ವಕ ಕೃತಜ್ಞತೆಯ ಅಭಿವ್ಯಕ್ತಿಯಾಗಿ ನಾವು ಇದನ್ನು ಭಾವಿಸುತ್ತೇವೆ.

ಹೆಚ್ಚು ತಿಳಿದುಕೊಳ್ಳಲು, ನೀವು ಈ ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಬಹುದು:

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ