ದೈವ ಸಾಕ್ಷಾತ್ಕಾರದ ವೈಜ್ಞಾನಿಕ ತಂತ್ರವಾದ ಕ್ರಿಯಾಯೋಗ, ಅಂತಿಮವಾಗಿ ಎಲ್ಲೆಡೆ ಹರಡುತ್ತದೆ ಮತ್ತು ಅನಂತ ತಂದೆಯ ಬಗ್ಗೆ ಮನುಷ್ಯನ ವೈಯಕ್ತಿಕ, ಅತೀಂದ್ರಿಯ ಅರಿವಿನ ಮೂಲಕ ರಾಷ್ಟ್ರಗಳನ್ನು ಸಾಮರಸ್ಯಗೊಳಿಸಲು ಸಹಾಯ ಮಾಡುತ್ತದೆ.
— ಯೋಗಿಯ ಆತ್ಮಕಥೆ ಯಲ್ಲಿ ಮಹಾವತಾರ ಬಾಬಾಜಿ
1920 ರಲ್ಲಿ ಪರಮಹಂಸ ಯೋಗಾನಂದರು ಅಮೆರಿಕಕ್ಕೆ ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ಮಹಾವತಾರ ಬಾಬಾಜಿಯವರು ಕೋಲ್ಕತ್ತಾದ ಗಾರ್ಪಾರ್ ರಸ್ತೆಯಲ್ಲಿರುವ ಗುರುದೇವರ ಮನೆಗೆ ಭೇಟಿ ನೀಡಿ, ಜಗತ್ತಿನಾದ್ಯಂತ ಕ್ರಿಯಾ ಯೋಗ ಬೋಧನೆಗಳನ್ನು ಹರಡುವ ಅವರ ಉದ್ದೇಶದ ಬಗ್ಗೆ ದೈವಿಕ ಭರವಸೆ ನೀಡಿದರು. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಭಕ್ತರು, ಮಹಾವತಾರ ಬಾಬಾಜಿ ಮತ್ತು ಪರಮಹಂಸ ಯೋಗಾನಂದರ ಈ ಭೇಟಿಯನ್ನು ಮಹಾವತಾರ ಬಾಬಾಜಿ ಸ್ಮೃತಿ ದಿವಸ ಎಂದು ಸ್ಮರಿಸಿದ್ದಾರೆ.
ಈ ಪವಿತ್ರ ದಿನವನ್ನು ಆಚರಿಸಲು ಮಹಾವತಾರ್ ಬಾಬಾಜಿಯವರ ಗೌರವಾರ್ಥ ಯೋಗದಾ ಸತ್ಸಂಗ ಸೊಸೈಟಿಯ ಸನ್ಯಾಸಿಯೊಬ್ಬರಿಂದ ಇಂಗ್ಲಿಷ್ನಲ್ಲಿ ಒಂದು ವಿಶೇಷವಾದ ಆನ್ಲೈನ್ ಧ್ಯಾನವನ್ನು ನಡೆಸಲಾಯಿತು. ಈ ಕಾರ್ಯಕ್ರಮವನ್ನು ವೈಎಸ್ಎಸ್ ನೋಯ್ಡಾ ಆಶ್ರಮದಿಂದ ನೇರ ಪ್ರಸಾರ ಮಾಡಲಾಗಿದ್ದು, ಇದು ಭಜನೆ, ಪ್ರೇರಣದಾಯಕ ವಾಚನ, ಹಾಗೂ ಧ್ಯಾನದ ಅವಧಿಗಳನ್ನು ಒಳಗೊಂಡಿತ್ತು.
ಈ ಶುಭ ಸಂದರ್ಭದಲ್ಲಿ, ವೈಎಸ್ಎಸ್ ಆಶ್ರಮಗಳು, ಕೇಂದ್ರಗಳು ಹಾಗೂ ಮಂಡಳಿಗಳಲ್ಲಿ ನೇರ ವೈಯುಕ್ತಿಕ ಕಾರ್ಯಕ್ರಮಗಳನ್ನು ಸಹ ನಡೆಸಲಾಯಿತು.
ಈ ಪವಿತ್ರ ದಿನದಂದು ಕಾಣಿಕೆ ಅರ್ಪಿಸಲು ನೀವು ಇಚ್ಚಿಸುವಿರಾದರೆ, ದಯವಿಟ್ಟು ಕೆಳಗೆ ನೀಡಿರುವ ಗುಂಡಿಯನ್ನು ಒತ್ತಿ. ನಿಮ್ಮ ಔದಾರ್ಯಕ್ಕಾಗಿ ನಾವು ಸದಾ ಕೃತಜ್ಞರಾಗಿದ್ದೇವೆ. ಯೋಗದಾ ಸತ್ಸಂಗ ಸೊಸೈಟಿಯ ಗುರು ಪರಂಪರೆಯ ಮೂಲಕ ಲಭಿಸುವ ಅನೇಕ ಅನುಗ್ರಹಗಳಿಗೆ ಹೃತ್ಪೂರ್ವಕ ಕೃತಜ್ಞತೆಯ ಅಭಿವ್ಯಕ್ತಿಯಾಗಿ ನಾವು ಇದನ್ನು ಭಾವಿಸುತ್ತೇವೆ.
















