ಅಂತರಾಷ್ಟ್ರೀಯ ಯೋಗ ದಿನ
ಈಗ ಯೋಗದ ತತ್ವ ಮತ್ತು ವಿಜ್ಞಾನಕ್ಕಾಗಿ ಇಡೀ ವಿಶ್ವವು ಪ್ರತಿ ವರ್ಷವೂ ಗೌರವ ಸಮರ್ಪಿಸುತ್ತಿದೆ ಎಂಬುದನ್ನು ತಿಳಿದು ಪರಮಹಂಸ ಯೋಗಾನಂದರು ಅತ್ಯಂತ ಸಂತಸಗೊಳ್ಳುವರು. ಏಕೆಂದರೆ ಅವರ ಜೀವನವು ಎಲ್ಲಾ ಸತ್ಯಾನ್ವೇಷಕರಿಗೆ ಯೋಗಧ್ಯಾನದ ಪ್ರಾಚೀನ ತಂತ್ರಗಳನ್ನು ಪರಿಚಯಿಸಲು ಸಮರ್ಪಿತವಾಗಿತ್ತು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯೋಗದ ಬಗ್ಗೆ ಪ್ರಸ್ತುತ ವಿಶ್ವದ ಹೆಚ್ಚಾದ ಆಸಕ್ತಿಯು, ಪರಮಹಂಸ ಯೋಗಾನಂದರು ನೂರಾರು ವರ್ಷಗಳ ಹಿಂದೆ ಭಾರತದಿಂದ ಅಮೆರಿಕಾಗೆ ತೆಗೆದುಕೊಂಡು ಹೋದ ಅವರ ಬೋಧನೆಗಳ ಪರಿಣಾಮವೇ ಆಗಿರುತ್ತದೆ. “ಭಾರತದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ವಿಚಾರವು ಯುನೈಟೆಡ್ ನೇಶನ್ಸ್ ನಲ್ಲಿ ಅತಿ ಸುಲಭವಾಗಿ ಒಪ್ಪಿಗೆ ಪಡೆದಿದೆ ಎಂದರೆ ಅದಕ್ಕೆ ಅತಿ ಹೆಚ್ಚು ಗೌರವವು ಅಮೇರಿಕಾದಲ್ಲಿನ ಭಾರತದ ಮೊದಲ ಯೋಗ ಗುರು ಪರಮಹಂಸ ಯೋಗಾನಂದರಿಗೆ ಸಲ್ಲುತ್ತದೆ.” ಹೀಗೆ ಒಂದು ಆನ್ಲೈನ್ ಸಮಾಚಾರ ವರದಿ ಮಾಡಿರುತ್ತದೆ. “ಅವರು ಯುನೈಟೆಡ್ ಸ್ಟೇಟ್ಸ್ ನಲ್ಲಿ ಒಂದು ಶತಮಾನದ ಹಿಂದೆಯೇ ಯೋಗದ ಬಗ್ಗೆ ಅಡಿಪಾಯ ಹಾಕುವುದರಲ್ಲಿ ಮಹತ್ತಾದ ಪಾತ್ರವಹಿಸಿದ್ದಾರೆ.”
ಅತಿ ಹೆಚ್ಚು ಮನ್ನಣೆ ಪಡೆದಿರುವ ಭಗವದ್ಗೀತೆಯ ಅನುವಾದ ಮತ್ತು ವ್ಯಾಖ್ಯಾನ (ಗಾಡ್ ಟಾಕ್ಸ್ ವಿತ್ ಅರ್ಜುನ) ದಲ್ಲಿ ಪರಮಹಂಸ ಯೋಗಾನಂದರು ವಿವರಿಸುತ್ತಾರೆ: “ಯೋಗ ಎನ್ನುವ ಪದವು ಮನಸ್ಸು ಭಗವಂತನೊಡನೆ ಶ್ರುತಿಗೊಳ್ಳುವ ಪರಿಣಾಮದ ಪರಿಪೂರ್ಣ ಪ್ರಶಾಂತಿ ಅಥವಾ ಮಾನಸಿಕ ಸಮತೋಲನ ಎಂಬುದನ್ನು ಸೂಚಿಸುತ್ತದೆ. ಯೋಗವು ಧ್ಯಾನದ ಆಧ್ಯಾತ್ಮಿಕ ತಂತ್ರದಿಂದ ವ್ಯಕ್ತಿಯು ಭಗವತ್ಚೇತನದೊಂದಿಗೆ ಶ್ರುತಿಗೊಳ್ಳುವುದನ್ನು ಸೂಚಿಸುತ್ತದೆ. ಇನ್ನು ಹೆಚ್ಚಾಗಿ, ಯೋಗವು ದೈವಿಕ ತಾದಾತ್ಮ್ಯತೆಯೆಡೆಗೆ ಮಾರ್ಗದರ್ಶಿಸುವ ಯಾವುದೇ ಪ್ರಕ್ರಿಯೆಯನ್ನು ತಿಳಿಸುತ್ತದೆ.”
ಕಾರ್ಯಕ್ರಮಗಳ ಕುರಿತು
ಜೀವನದ ದೈನಂದಿನ ಸವಾಲುಗಳ ಮಧ್ಯೆ, ನಾವು ಅಚಲವಾದ ಶಾಂತಿ ಮತ್ತು ಆಂತರಿಕ ನೆಮ್ಮದಿಯನ್ನು ಹೇಗೆ ಸಾಧಿಸಬಹುದು ಮತ್ತು ಕಾಯ್ದುಕೊಳ್ಳಬಹುದು? ಸತ್ಯಾನ್ವೇಷಕರಿಗೆ ಯಾವುದೇ ಪರಿಸ್ಥಿತಿಯಲ್ಲೂ ಆಂತರಿಕ ಸಮತೋಲನವನ್ನು ಕಾಯ್ದುಕೊಳ್ಳುವುದು ಹೇಗೆಂದು ಅರಿಯಲು ವಿಶೇಷವಾಗಿ ವಿನ್ಯಾಸಗೊಳಿಸಲಾದ, ಯೋಗ-ಧ್ಯಾನದ ಕುರಿತ ಸ್ಫೂರ್ತಿದಾಯಕ ಪರಿಚಯಾತ್ಮಕ ಅವಧಿಗಳಿಗೆ ನಮ್ಮೊಂದಿಗೆ ಸೇರಿಕೊಳ್ಳಿ.
ಪರಮಹಂಸ ಯೋಗಾನಂದರ ಕಾಲಾತೀತ ಕ್ರಿಯಾಯೋಗ ಬೋಧನೆಗಳ ಆಧಾರದ ಮೇಲೆ, ಯೋಗವು ದೈವಿಕ ಶಾಂತಿಯ ಆಳವಾದ ಪರಿವರ್ತನಾತ್ಮಕ ಅನುಭವಕ್ಕೆ ಹೇಗೆ ದಾರಿ ಮಾಡಿಕೊಡುತ್ತದೆ ಮತ್ತು ನಾವು ನಮ್ಮ ಉತ್ತಮ ರೂಪವಾಗಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಈ ಆನ್ಲೈನ್ ಕಾರ್ಯಕ್ರಮಗಳು ತಿಳಿಸಿಕೊಡುತ್ತವೆ.
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸನ್ಯಾಸಿಯೊಬ್ಬರ ನೇತೃತ್ವದಲ್ಲಿ, ಈ ಅವಧಿಗಳು ವೈಜ್ಞಾನಿಕ ಆಧ್ಯಾತ್ಮಿಕ ಬೋಧನೆಗಳ ಸಂಕ್ಷಿಪ್ತ ಪರಿಚಯವನ್ನು ಒಳಗೊಂಡಿರುತ್ತವೆ. ನಂತರ ಮಾರ್ಗದರ್ಶಿ ಧ್ಯಾನ, ಇದರಲ್ಲಿ ಸರಿಯಾದ ಭಂಗಿಯ ಮೂಲಭೂತ ಅಂಶಗಳು, ಪೂರ್ವಭಾವಿ ಉಸಿರಾಟದ ವ್ಯಾಯಾಮಗಳು, ದೃಢೀಕರಣಗಳು, ಮತ್ತು ದೃಶ್ಯೀಕರಣ ತಂತ್ರಗಳು ನಿಮ್ಮ ಮನಸ್ಸನ್ನು ಆಳವಾದ ಶಾಂತಿಯಲ್ಲಿ ನೆಲೆಗೊಳಿಸಲು ಸಹಾಯ ಮಾಡುತ್ತವೆ.
ಯೋಗ-ಧ್ಯಾನದಲ್ಲಿ ಆಸಕ್ತಿ ಹೊಂದಿರುವ ಸ್ನೇಹಿತರು ಮತ್ತು ಎಲ್ಲರನ್ನೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಲು ಆಹ್ವಾನಿಸುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
ವೈಶಿಷ್ಟ್ಯಪೂರ್ಣ ಕಾರ್ಯಕ್ರಮ
“ಯೋಗ-ಧ್ಯಾನದ ಮೂಲಕ ಶಾಂತಿಯನ್ನು ಅನುಭವಿಸಿ”
(ಮಾರ್ಗದರ್ಶಿತ ಧ್ಯಾನ ಅವಧಿಯನ್ನು ಒಳಗೊಂಡಿದೆ)
ಶನಿವಾರ, ಜೂನ್ 13, 2026
ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:00 (ಅಧಿಕೃತ ಭಾರತೀಯ ಕಾಲಮಾನ)
ವೈಎಸ್ಎಸ್ ದಕ್ಷಿಣೇಶ್ವರ ಆಶ್ರಮದಿಂದ ನೇರಪ್ರಸಾರವಾಗುವ ಈ ಕಾರ್ಯಕ್ರಮವನ್ನು ವೈಎಸ್ಎಸ್ ಸಂನ್ಯಾಸಿ ಸ್ವಾಮಿ ಶ್ರೇಯಾನಂದ ಗಿರಿ ಅವರು ನಡೆಸಿಕೊಡಲಿದ್ದು, ನಂತರವೂ ವೀಕ್ಷಣೆಗೆ ಲಭ್ಯವಿರುತ್ತದೆ.
ಎಲ್ಲಾ ಆನ್ಲೈನ್ ಕಾರ್ಯಕ್ರಮಗಳು
“ಯೋಗ-ಧ್ಯಾನದ ಮೂಲಕ ಶಾಂತಿಯನ್ನು ಅನುಭವಿಸಿ”
(ಮಾರ್ಗದರ್ಶಿತ ಧ್ಯಾನ ಅವಧಿಯನ್ನು ಒಳಗೊಂಡಿದೆ)
ಶನಿವಾರ, ಜೂನ್ 13, 2026
ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:00 (ಅಧಿಕೃತ ಭಾರತೀಯ ಕಾಲಮಾನ)
ವೈಎಸ್ಎಸ್ ದಕ್ಷಿಣೇಶ್ವರ ಆಶ್ರಮದಿಂದ ನೇರಪ್ರಸಾರವಾಗುವ ಈ ಕಾರ್ಯಕ್ರಮವನ್ನು ವೈಎಸ್ಎಸ್ ಸಂನ್ಯಾಸಿ ಸ್ವಾಮಿ ಶ್ರೇಯಾನಂದ ಗಿರಿ ಅವರು ನಡೆಸಿಕೊಡಲಿದ್ದು, ನಂತರವೂ ವೀಕ್ಷಣೆಗೆ ಲಭ್ಯವಿರುತ್ತದೆ.
“యోగ-ధ్యానం ద్వారా శాంతిని అనుభూతిచెందండి”
(కార్యక్రమంలో నిర్దేశిత ధ్యానం కూడా కూడి ఉంటుంది)
ಶನಿವಾರ, ಜೂನ್ 13, 2026
ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:00 (ಅಧಿಕೃತ ಭಾರತೀಯ ಕಾಲಮಾನ)
ವೈಎಸ್ಎಸ್ ಚೆನ್ನೈ ಆಶ್ರಮದಿಂದ ನೇರಪ್ರಸಾರವಾಗುವ ಈ ಕಾರ್ಯಕ್ರಮವನ್ನು ವೈಎಸ್ಎಸ್ ಸಂನ್ಯಾಸಿ ಸ್ವಾಮಿ ಕೇದಾರಾನಂದ ಗಿರಿ ಅವರು ನಡೆಸಿಕೊಡಲಿದ್ದು, ನಂತರವೂ ವೀಕ್ಷಣೆಗೆ ಲಭ್ಯವಿರುತ್ತದೆ.
“Experience Peace Through Yoga-Meditation”
(Includes a guided meditation session)
ಶನಿವಾರ, ಜೂನ್ 13, 2026
ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:00 (ಅಧಿಕೃತ ಭಾರತೀಯ ಕಾಲಮಾನ)
ವೈಎಸ್ಎಸ್ ನೋಯ್ಡಾ ಆಶ್ರಮದಿಂದ ಪ್ರಸಾರವಾಗಲಿರುವ ಈ ಕಾರ್ಯಕ್ರಮವನ್ನು ವೈಎಸ್ಎಸ್ ಸನ್ಯಾಸಿ ಸ್ವಾಮಿ ಆದ್ಯಾನಂದ ಗಿರಿ ಅವರು ಮುನ್ನಡೆಸಲಿದ್ದು, ನಂತರ ವೀಕ್ಷಣೆಗೂ ಲಭ್ಯವಿರಲಿದೆ.
“ध्यान-योग द्वारा शांति की अनुभूति”
(एक निर्देशित ध्यान सत्र के साथ)
ಭಾನುವಾರ, ಜೂನ್ 14, 2026
ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:00 (ಅಧಿಕೃತ ಭಾರತೀಯ ಕಾಲಮಾನ)
ವೈಎಸ್ಎಸ್ ರಾಂಚಿ ಆಶ್ರಮದಿಂದ ಪ್ರಸಾರವಾಗಲಿರುವ ಈ ಕಾರ್ಯಕ್ರಮವು, ವೈಎಸ್ಎಸ್ ಸನ್ಯಾಸಿ ಸ್ವಾಮಿ ಈಶ್ವರಾನಂದ ಗಿರಿ ಅವರ ನೇತೃತ್ವದಲ್ಲಿ ನಡೆಯಲಿದೆ ಮತ್ತು ನಂತರ ವೀಕ್ಷಣೆಗೂ ಲಭ್ಯವಿರುತ್ತದೆ.
“யோகா-தியானம் மூலம் அமைதியை உணருங்கள்”
(வழி நடத்தப்படும் தியான அமர்வை உள்ளடக்கியது)
ಭಾನುವಾರ, ಜೂನ್ 14, 2026
ಸಂಜೆ 6:30 ರಿಂದ ರಾತ್ರಿ 7:30 (ಅಧಿಕೃತ ಭಾರತೀಯ ಕಾಲಮಾನ)
ವೈಎಸ್ಎಸ್ ಚೆನ್ನೈ ಕೇಂದ್ರದಿಂದ ನೇರಪ್ರಸಾರವಾಗುವ ಈ ಕಾರ್ಯಕ್ರಮವನ್ನು ವೈಎಸ್ಎಸ್ ಸಂನ್ಯಾಸಿ ಸ್ವಾಮಿ ಶುದ್ಧಾನಂದ ಗಿರಿ ಅವರು ನಡೆಸಿಕೊಡಲಿದ್ದು, ನಂತರವೂ ವೀಕ್ಷಣೆಗೆ ಲಭ್ಯವಿರುತ್ತದೆ.
ವ್ಯಕ್ತಿಗತ ಕಾರ್ಯಕ್ರಮಗಳು
ಈ ಆನ್ಲೈನ್ ಕಾರ್ಯಕ್ರಮಗಳ ಜೊತೆಗೆ, ದೇಶಾದ್ಯಂತ ಇರುವ ವಿವಿಧ ವೈಎಸ್ಎಸ್ ಕೇಂದ್ರಗಳು ಮತ್ತು ಮಂಡಳಿಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಸಹ ನಡೆಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಮತ್ತು ಸಂಬಂಧಿತ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಗುಂಡಿಯನ್ನು ಒತ್ತಿ:
ಆಟೋಬಯೋಗ್ರಫಿ ಆಫ್ ಎ ಯೋಗಿ ಪುಸ್ತಕದ ಮೇಲೆ ವಿಶೇಷ ಕೊಡುಗೆಗಳು
ಈ ಸಂದರ್ಭದಲ್ಲಿ, ಆಟೋಬಯೋಗ್ರಫಿ ಆಫ್ ಎ ಯೋಗಿ ಪುಸ್ತಕದ ಉಚಿತ ಇ-ಪುಸ್ತಕ ಪ್ರತಿಯನ್ನು (ಇಂಗ್ಲಿಷ್ ಮತ್ತು ಇತರ ಕೆಲವು ಭಾಷೆಗಳಲ್ಲಿ) ನಾವು ನೀಡುತ್ತಿದ್ದೇವೆ. ಇದರ ಜೊತೆಗೆ, ಈ ಆಧ್ಯಾತ್ಮಿಕ ಶ್ರೇಷ್ಠ ಕೃತಿಯ ಎಲ್ಲಾ ಮುದ್ರಿತ ಆವೃತ್ತಿಗಳು 25% ರಿಯಾಯಿತಿಯಲ್ಲಿ ಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಕೆಳಗಿನ ವಿಭಾಗಗಳನ್ನು ನೋಡಿ.

ಉಚಿತ ಆಟೋಬಯೋಗ್ರಫಿ ಆಫ್ ಎ ಯೋಗಿ
— ಇ-ಪುಸ್ತಕ ಪಡೆಯಿರಿ
ಮಾನ್ಯತೆ:
ಜೂನ್ 22, 2026
ಮಾನ್ಯತೆ:
ಜೂನ್ 22, 2026
ಪರಮಹಂಸ ಯೋಗಾನಂದರ ಬಗ್ಗೆ
ಪರಮಹಂಸ ಯೋಗಾನಂದರು ತಮ್ಮ ಸಮಗ್ರ ಬೋಧನೆಗಳಿಂದ ಲಕ್ಷಾಂತರ ಜನರ ಜೀವನದ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ್ದಾರೆ. ವ್ಯಾಪಕವಾಗಿ “ಪಶ್ಚಿಮದಲ್ಲಿ ಯೋಗ ಪಿತಾಮಹ”ಎಂದು ಪರಿಗಣಿಸಲ್ಪಟ್ಟ ಪರಮಹಂಸಜಿಯವರು ವೈಜ್ಞಾನಿಕ ಪ್ರಾಣಾಯಾಮ (ಪ್ರಾಣಶಕ್ತಿ ನಿಯಂತ್ರಣ )ತಂತ್ರಗಳನ್ನು ಒಳಗೊಂಡ ಬೋಧನೆಗಳನ್ನು ವಿಶ್ವಾದ್ಯಂತ ದೊರೆಯುವಂತೆ ಮಾಡಿದವರಲ್ಲಿ ಮೊದಲಿಗರು. ಯೋಗದ ಅಂತಿಮ ಉದ್ದೇಶ ತನ್ನನ್ನು ತಾನು ಸರ್ವವ್ಯಾಪಿ, ಸರ್ವಶಕ್ತ ಆತ್ಮ ಎಂಬುದನ್ನು ಅರಿಯುವುದು. ಯೋಗಾನಂದಜಿ ಅವರ ಕಾರ್ಯವ್ಯಾಪ್ತಿ – ಯೋಗದಾ ಸತ್ಸಂಗ ಪಾಠ ಮಾಲಿಕೆ ಯಲ್ಲಿ ವಿಸ್ತೃತಗೊಂಡಿದ್ದು- ಇದು ಅನುಷ್ಠಾನಕ್ಕೆ ಆಧಾರವಾಗಿರುವ ತಳಹದಿಗೆ ಪ್ರಾಯೋಗಿಕ ವಿಧಾನವನ್ನು ನೀಡುತ್ತದೆ. ಮತ್ತು ಈ ವ್ಯವಸ್ಥೆಯು ಅತಿ ಹೆಚ್ಚಿನ ಸಂಖ್ಯೆಯ ಜನರಿಗೆ ಮೆಚ್ಚುಗೆಯಾಗುತ್ತಿದೆ: ಕೇವಲ ಹಠಯೋಗದ ಭೌತಿಕ ಲಾಭಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಅಷ್ಟೇ ಅಲ್ಲ , ಯಾರು ತಮ್ಮ ಮಾನಸಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಇಚ್ಛಿಸುವರೋ ಅಲ್ಲದೆ, ಅತ್ಯಂತ ಹೆಚ್ಚಾಗಿ ತಮ್ಮ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಹೆಚ್ಚಿಸುವ ಆಸಕ್ತರೆಲ್ಲರಿಗೂ ಸಹಾಯಕಾರಿ.
ಅವರ ಬೋಧನೆಗಳು ಮತ್ತು ಅವರು ಕಲಿಸಿದ ಧ್ಯಾನ ತಂತ್ರಗಳು ಈಗ ಇವುಗಳ ಮೂಲಕ ದೊರಕುತ್ತಿವೆ:
- ಯೋಗದಾ ಸತ್ಸಂಗ ಪಾಠ ಮಾಲಿಕೆ ಒಂದು ಸಮಗ್ರ ಗೃಹ ಅಧ್ಯಯನದ ಸರಣಿಯು ಸ್ವತಃ ಯೋಗಾನಂದಜಿಯವರಿಂದಲೇ ಆರಂಭಗೊಂಡಿದೆ. ಡಿಜಿಟಲ್ ಆಪ್ ನಲ್ಲಿಯೂ ಲಭ್ಯ
- ಅವರ ಬೋಧನೆಗಳನ್ನು ವಿಶ್ವಾದ್ಯಂತ ಪ್ರಸರಿಸಲು ಅವರಿಂದ ಸಂಸ್ಥಾಪನೆಗೊಂಡ ವೈ ಎಸ್ ಎಸ್ ಸಂಸ್ಥೆಯಿಂದ ಪುಸ್ತಕಗಳು, ಧ್ವನಿಸುರಳಿಗಳು ಮತ್ತು ವೈ ಎಸ್ ಎಸ್ ನ ಇತರ ಪ್ರಕಾಶನಗಳು
- ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸನ್ಯಾಸಿಗಳು ದೇಶದಾದ್ಯಂತ ನಡೆಸುವ ಪ್ರವಾಸಗಳಲ್ಲಿ, ಚೈತನ್ಯದಾಯಕ, ಏಕಾಗ್ರತೆಯ ಮತ್ತು ಧ್ಯಾನಗಳ ವೈಜ್ಞಾನಿಕ ಯೋಗ ತಂತ್ರಗಳ ವಿವರಣೆಯನ್ನು ನೀಡುವರು
- ಸನ್ಯಾಸಿಗಳು ಮುನ್ನಡೆಸುವ ಶಿಬಿರಗಳು
- ಸಾಧನ ಸಂಗಮಗಳು
- ಧ್ಯಾನ ಮತ್ತು ಆಧ್ಯಾತ್ಮ ಜೀವನದ ಬಗ್ಗೆ ಮಕ್ಕಳಿಗಾಗಿ ಕಾರ್ಯಕ್ರಮಗಳು
ಇತರರ ಹೇಳಿಕೆಗಳು
“ನಾನು ಪರಮಹಂಸ ಯೋಗಾನಂದಜಿ ಅವರನ್ನು 1935 ರಲ್ಲಿ ಕಲ್ಕತ್ತಾದಲ್ಲಿ ಭೇಟಿಯಾದೆ. ಆಗಿನಿಂದಲೂ ಅವರ ಅಮೆರಿಕಾದಲ್ಲಿನ ಚಟುವಟಿಕೆಗಳೆಲ್ಲವನ್ನು ಅನುಸರಿಸುತ್ತಲೇ ಇದ್ದೇನೆ. ಹೇಗೆ ಅಂಧಕಾರದ ಮಧ್ಯದಲ್ಲಿ ಉಜ್ವಲ ಬೆಳಕು ಬೆಳಗುತ್ತಿದೆಯೋ ಹಾಗೆ ಈ ವಿಶ್ವದಲ್ಲಿ ಯೋಗಾನಂದರ ಉಪಸ್ಥಿತಿ. ಮಾನವರ ಮಧ್ಯದಲ್ಲಿ ನಿಜವಾದ ಅವಶ್ಯಕತೆ ಇದ್ದಾಗ ಮಾತ್ರ ಅಪರೂಪವಾಗಿ ಅಂತಹ ಮಹೋನ್ನತ ಆತ್ಮ ಭೂಮಿಗಿಳಿದು ಬರುತ್ತದೆ.”
“ಇಂದು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಶನ್ ಫೆಲೋಶಿಪ್ ನ ವಿಶ್ವಕೇಂದ್ರಗಳು, ಪರಮಹಂಸರು ಕಾರ್ಯ ತತ್ಪರರಾಗಿರುವುದನ್ನು ಪ್ರತಿನಿಧಿಸುತ್ತವೆ. ಅವು ತಾವಾಗಿಯೇ ದ್ವಿಗುಣಗೊಂಡು, ನಿಕಟವಾಗಿ ಹೆಣೆದಿರುವ ಆಧ್ಯಾತ್ಮದ ಆಯಸ್ಕಾಂತೀಯ ಬಲೆಯಾಗಿ, ಇಡೀ ವಿಶ್ವದಲ್ಲಿ, ಪ್ರಶಾಂತತೆ ಮತ್ತು ಆನಂದವನ್ನು ಸುರಿಸುತ್ತವೆ.”
“ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್ -ರಿಯಲೈಝೇಶನ್ ಫೆಲೋಶಿಪ್ (ಪರಮಹಂಸ ಯೋಗಾನಂದರಿಂದ ಸಂಸ್ಥಾಪಿಸಲ್ಪಟ್ಟಿದ್ದು) ನಲ್ಲಿ ಅತ್ಯುನ್ನತ ಆಧ್ಯಾತ್ಮಿಕತೆ, ಸೇವೆ ಮತ್ತು ಪ್ರೇಮವನ್ನು,ನೀಡುತ್ತಿರುವುದನ್ನು ಕಂಡಿದ್ದೇನೆ.”
“ನಾನು ಈ ಪುಸ್ತಕವನ್ನು ಪ್ರೀತಿಸುತ್ತೇನೆ. ತಮ್ಮ ಆಲೋಚನೆಗಳು ಮತ್ತು ಸಿದ್ಧಾಂತಗಳನ್ನು ಸವಾಲಿಗೊಡ್ಡಲು ಸಾಕಷ್ಟು ಧೈರ್ಯವಿರುವ ಎಲ್ಲರೂ ಇದನ್ನು ಓದಲೇಬೇಕು. ಈ ಪುಸ್ತಕದಲ್ಲಿನ ಜ್ಞಾನವನ್ನು ಅರ್ಥಮಾಡಿಕೊಳ್ಳುವುದರಿಂದ ಮತ್ತು ಅನುಷ್ಠಾನಿಸುವುದರಿಂದ ನಿಮ್ಮ ಸಂಪೂರ್ಣ ದೃಷ್ಟಿಕೋನ ಮತ್ತು ಜೀವನ ಬದಲಾಗುತ್ತದೆ. ದೈವತ್ವದಲ್ಲಿ ನಂಬಿಕೆಯಿಡಿ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡುತ್ತಲೇ ಇರಿ. 😇#ಒಂದುಪ್ರೀತಿ #ಕೃತಜ್ಞತೆಯಿಂದಿರಿ #ಒಬ್ಬರಿಗೊಬ್ಬರುನೆರವಾಗಿ”
“ನಾನು ಪರಮಹಂಸ ಯೋಗಾನಂದರನ್ನು ಎರಡು ಸಂದರ್ಭಗಳಲ್ಲಿ ಭೇಟಿಯಾಗಿದ್ದೆ. 1930ರಲ್ಲಿ ಹುಡುಗನಾಗಿದ್ದಾಗ.... 20 ವರ್ಷಗಳ ನಂತರ ಯಾರೋ ಒಬ್ಬರು ಆಟೋಬಯೋಗ್ರಫಿ ಆಫ್ ಎ ಯೋಗಿ ಪುಸ್ತಕವನ್ನು ನನಗೆ ಕೊಟ್ಟರು. ಅದನ್ನು ಓದಲು ಪ್ರಾರಂಭಿಸಿದ ಕೂಡಲೇ ಆ ಪುಸ್ತಕವು ನನಗೆ ಏನನ್ನು ಮಾಡಿತೋ ನಾನು ಅದನ್ನು ವಿವರಿಸಲಾರೆ. ನಾನು ಯೋಗದ ಬಗ್ಗೆ ಅನೇಕ ಯೋಗಿಗಳ ಪುಸ್ತಕಗಳನ್ನು ಓದಿರುವೆನು; ಆದರೆ ಈ ಪುಸ್ತಕದಷ್ಟು ನನ್ನ ಮೇಲೆ ಯಾವುದೂ ಪ್ರಭಾವ ಬೀರಿಲ್ಲ. ಇದರಲ್ಲಿ ಏನೋ ಅಲೌಕಿಕ ಮಾಂತ್ರಿಕತೆ ಇದೆ.”
“ನಾನು ಮನೆಯ ತುಂಬಾ ಆಟೋಬಯೋಗ್ರಫಿ ಆಫ್ ಎ ಯೋಗಿ ಯ ರಾಶಿಯನ್ನೇ ಇಟ್ಟಿರುವೆನು. ಮತ್ತು ಅದನ್ನು ನಿರಂತರ ಜನರಿಗೆ ಕೊಡುತ್ತಿರುತ್ತೇನೆ. ಯಾವಾಗ ಜನರು ಸರಿಯಾದ ಮನೋಧರ್ಮಕ್ಕೆ ಮರಳಬೇಕಾಗುತ್ತದೆಯೋ, ಆಗ ನಾನು ಇದನ್ನು ಓದಲು ಹೇಳುತ್ತೇನೆ. ಏಕೆಂದರೆ ಅದು ಪ್ರತಿಯೊಂದು ಧರ್ಮದ ಹೃದಯವನ್ನೇ ಸ್ಪರ್ಶಿಸುತ್ತದೆ.”
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಬಗ್ಗೆ
ಕಳೆದ ನೂರು ವರ್ಷಗಳಿಂದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈ ಎಸ್ ಎಸ್), ಅದರ ಸಂಸ್ಥಾಪಕರಾದ ಪಶ್ಚಿಮದ ಯೋಗ ಪಿತಾಮಹ ಎಂದು ಅಪಾರವಾಗಿ ಗೌರವಿಸಲ್ಪಡುವ ಶ್ರೀ ಶ್ರೀ ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಮತ್ತು ಜನೋಪಕಾರಿ ಕಾರ್ಯವನ್ನು ನಡೆಸಿಕೊಂಡು ಹೋಗಲು ಸಮರ್ಪಿಸಿಕೊಂಡಿದೆ.
ಪರಮಹಂಸ ಯೋಗಾನಂದರು ಯೋಗದಾ ಸತ್ಸಂಗ ಸೊಸೈಟಿಯನ್ನು 1917ರಲ್ಲಿ ಸಂಸ್ಥಾಪಿಸಿ, ಭಾರತದಲ್ಲಿ ಯುಗಯುಗಗಳ ಹಿಂದೆಯೇ ಜನ್ಮತಳೆದ ಪವಿತ್ರ ಅಧ್ಯಾತ್ಮ ವಿಜ್ಞಾನವಾದ ಕ್ರಿಯಾಯೋಗದ ವಿಶ್ವ ಬೋಧನೆಗಳು ಎಲ್ಲೆಡೆಗೆ ದೊರಕುವಂತೆ ಮಾಡಿದರು. ಈ ಪಂಥೀಯವಲ್ಲದ ಬೋಧನೆಗಳು, ಸಂಪೂರ್ಣ ತತ್ವ ಹಾಗೂ ಬದುಕುವ ಕಲೆಯು ಸರ್ವತೋಮುಖ ಸಫಲತೆ ಮತ್ತು ಯೋಗಕ್ಷೇಮಗಳನ್ನು ಸಾಕಾರಗೊಳಿಸುವ ಹಾಗೂ ಜೀವನದ ಅಂತಿಮ ಗುರಿಯಾದ ಆತ್ಮವು ಚೇತನ (ಭಗವಂತ)ದೊಂದಿಗೆ ತಾದಾತ್ಮ್ಯತೆಯನ್ನು ಹೊಂದಲು ಬೇಕಾದ ಧ್ಯಾನದ ವಿಧಾನಗಳನ್ನು ಒಳಗೊಂಡಿದೆ.
ಅತಿ ಹೆಚ್ಚು ಮನ್ನಣೆ ಪಡೆದಿರುವ ಭಗವದ್ಗೀತೆಯ ಅನುವಾದ ಮತ್ತು ವ್ಯಾಖ್ಯಾನ (ಗಾಡ್ ಟಾಕ್ಸ್ ವಿತ್ ಅರ್ಜುನ) ದಲ್ಲಿ ಪರಮಹಂಸ ಯೋಗಾನಂದರು ವಿವರಿಸುತ್ತಾರೆ: “ಯೋಗ ಎನ್ನುವ ಪದವು ಮನಸ್ಸು ಭಗವಂತನೊಡನೆ ಶ್ರುತಿಗೊಳ್ಳುವ ಪರಿಣಾಮದ ಪರಿಪೂರ್ಣ ಪ್ರಶಾಂತಿ ಅಥವಾ ಮಾನಸಿಕ ಸಮತೋಲನ ಎಂಬುದನ್ನು ಸೂಚಿಸುತ್ತದೆ. ಯೋಗವು ಧ್ಯಾನದ ಆಧ್ಯಾತ್ಮಿಕ ತಂತ್ರದಿಂದ ವ್ಯಕ್ತಿಯು ಭಗವತ್ಚೇತನದೊಂದಿಗೆ ಶ್ರುತಿಗೊಳ್ಳುವುದನ್ನು ಸೂಚಿಸುತ್ತದೆ. ಇನ್ನು ಹೆಚ್ಚಾಗಿ, ಯೋಗವು ದೈವಿಕ ತಾದಾತ್ಮ್ಯತೆಯೆಡೆಗೆ ಮಾರ್ಗದರ್ಶಿಸುವ ಯಾವುದೇ ಪ್ರಕ್ರಿಯೆಯನ್ನು ತಿಳಿಸುತ್ತದೆ.”

















