ಒಂದು ‘ಅಪೂರ್ವ’ ಅನುಭವ: ಯುವ ಸೇವಾ ಸ್ವಯಂಸೇವಕ ಕಾರ್ಯಾಗಾರ

6 ಜೂನ್, 2025
ವೈಎಸ್‌ಎಸ್ ಸನ್ಯಾಸಿಗಳೊಂದಿಗೆ ಭಾಗವಹಿಸಿದ್ದವರ ಸಾಮೂಹಿಕ ಛಾಯಾಚಿತ್ರ.

ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ (ವೈಎಸ್‌ಎಸ್) ಯುವ ಸೇವಾ ಸ್ವಯಂಸೇವಕ ಕಾರ್ಯಾಗಾರವು ಮೊದಲ ಬಾರಿಗೆ ಮೇ 1 ರಿಂದ 4, 2025 ರವರೆಗೆ ವೈಎಸ್‌ಎಸ್ ನೋಯ್ಡಾ ಆಶ್ರಮದಲ್ಲಿ ನಡೆಯಿತು. ಭಾರತದಾದ್ಯಂತದ ಎಲ್ಲಾ ವೈಎಸ್‌ಎಸ್ ಆಶ್ರಮಗಳು ಮತ್ತು 40 ಕ್ಕೂ ಹೆಚ್ಚು ಕೇಂದ್ರಗಳಿಂದ 125 ಭಕ್ತರನ್ನು — ಅನುಭವಿ ಸ್ವಯಂಸೇವಕರು ಮತ್ತು ಸೇವೆ ಸಲ್ಲಿಸಲು ಹೊಸದಾಗಿ ಪ್ರೇರಿತರಾದವರನ್ನು — ಇದು ಒಟ್ಟುಗೂಡಿಸಿತು.

ವೈಎಸ್‌ಎಸ್ ಸನ್ಯಾಸಿಗಳಿಂದ ಮಾರ್ಗದರ್ಶಿಸಲ್ಪಟ್ಟ ಈ ನಾಲ್ಕು ದಿನಗಳ ಕಾರ್ಯಾಗಾರವು, ಯುವ ಸೇವಾ ವಿಭಾಗದ ದೃಷ್ಟಿ ಮತ್ತು ಗುರಿಗಳ ಸುತ್ತ ಸ್ವಯಂಸೇವಕರನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿತ್ತು, ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಲ್ಲಿ ಕೇಂದ್ರೀಕೃತವಾಗಿ, ಮಕ್ಕಳು, ಹದಿಹರೆಯದವರು ಮತ್ತು ಯುವ ಸಾಧಕರಿಗೆ (18 ರಿಂದ 35 ವರ್ಷ ವಯಸ್ಸಿನವರು) ಸೇವೆ ಸಲ್ಲಿಸುವಲ್ಲಿ ಅವರಿಗೆ ತರಬೇತಿ ನೀಡುವುದನ್ನೂ ಇದು ಒಳಗೊಂಡಿತ್ತು.

“ಈ ತರಬೇತಿಯು ನಿಜಕ್ಕೂ ಅನನ್ಯವಾದುದು ಮತ್ತು ನಿಮ್ಮ ಸಾಧನೆಯನ್ನು, ಭಗವಂತ ಮತ್ತು ಗುರುಗಳೊಂದಿಗಿನ ನಿಮ್ಮ ಅನುಸಂಧಾನವನ್ನು ಇನ್ನಷ್ಟು ಆಳಗೊಳಿಸಲು ನೆರವಾಗುವ ತರಬೇತಿ ಕಾರ್ಯಕ್ರಮವೊಂದಕ್ಕೆ ನೀವು ಹಾಜರಾಗಲು ಬಯಸುತ್ತಿದ್ದರೆ, ಇದೇ ಅದು!”

—ಕೆ. ಎಂ.,ಮಹಾರಾಷ್ಟ್ರ

ಸ್ವಾಮಿ ಲಲಿತಾನಂದರು ದೀಪ ಬೆಳಗುವುದರೊಂದಿಗೆ ಕಾರ್ಯಾಗಾರವು ಪ್ರಾರಂಭವಾಯಿತು.
ಸ್ವಾಮಿ ಶಂಕರಾನಂದರು ಯುವ ಸೇವಾ ವಿಭಾಗದ ಉದ್ದೇಶ ಮತ್ತು ಗುರಿಗಳನ್ನು ಸಭಿಕರೊಂದಿಗೆ ಹಂಚಿಕೊಂಡರು.
ಸ್ವಾಮಿ ಶಂಕರಾನಂದರು ಯುವ ಸೇವಾ ವಿಭಾಗದ ಧ್ಯೇಯ ಮತ್ತು ಗುರಿಗಳನ್ನು ಸಭಿಕರೊಂದಿಗೆ ಹಂಚಿಕೊಂಡರು.
Joyful ice-breaker activities helped attendees to get to know each other.
ಹರ್ಷಮಯವಾದ, ಪರಸ್ಪರ ಸೌಹಾರ್ದದಿಂದ ಬೆರೆಯಲು ಪ್ರೇರೇಪಿಸುವ ಚಟುವಟಿಕೆಗಳು ಭಾಗವಹಿಸಿದವರಿಗೆ ಒಬ್ಬರನ್ನೊಬ್ಬರು ಅರಿತುಕೊಳ್ಳಲು ನೆರವಾದವು.
ಸ್ವಯಂಸೇವಕರು ಯುವ ಸೇವೆಗಳ ಸಂಯೋಜಕರಾಗಿ ತಮ್ಮ ಪಾತ್ರದ ಮೂಲಭೂತ ತಿಳುವಳಿಕೆಯನ್ನು ಪಡೆದುಕೊಂಡರು
ಸ್ವಯಂಸೇವಕರು ಯುವ ಸೇವಾ ಸಂಯೋಜಕರಾಗಿ ತಮ್ಮ ಪಾತ್ರದ ಮೂಲಭೂತ ತಿಳುವಳಿಕೆಯನ್ನು ಪಡೆದುಕೊಂಡರು.
A senior trainer conducts a session for the attendees.
ಒಬ್ಬ ಹಿರಿಯ ತರಬೇತುದಾರರು ಹಾಜರಿದ್ದವರಿಗಾಗಿ ಅಧಿವೇಶನವನ್ನು ನಡೆಸಿದರು.

ವೈಎಸ್‌ಎಸ್ ಸನ್ಯಾಸಿಗಳು ಮತ್ತು ಅನುಭವಿ ಸ್ವಯಂಸೇವಕರು ತರಬೇತಿ ಅಧಿವೇಶನಗಳನ್ನು ಮುನ್ನಡೆಸಿದರು ಮತ್ತು ಭಾಗವಹಿಸಿದವರಿಗೆ ಮಾರ್ಗದರ್ಶನ ನೀಡಿದರು. ಹೊಸದಾಗಿ ರಚಿಸಲಾದ ವಿಭಾಗದ ಐದು ಕ್ಷೇತ್ರಗಳಾದ್ಯಂತ ಲಭ್ಯವಿರುವ ವಿವಿಧ ಸೇವಾ ಅವಕಾಶಗಳನ್ನು ಸಹ ಅವರು ಪರಿಚಯಿಸಿದರು:

  • ಸಮುದಾಯ ಮತ್ತು ಸಂವಹನ,
  • ತರಬೇತಿ ಮತ್ತು ವಿಷಯ,
  • ಕಾರ್ಯಕ್ರಮ ಮತ್ತು ಕಾರ್ಯಾಚರಣೆಗಳು,
  • ವೈಎಸ್‌ಎಸ್ ಕೇಂದ್ರಗಳಲ್ಲಿ ಯುವ ಸೇವಾ ಕಾರ್ಯಕ್ರಮಗಳ ಅಭಿವೃದ್ಧಿ, ಮತ್ತು
  • ಸ್ವಯಂಸೇವಕರ ಸಮನ್ವಯ.

“ಗುರೂಜಿಯವರ ಬೋಧನೆಗಳನ್ನು ಪ್ರತಿ ಅಧಿವೇಶನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಕಲಿಯಲು ಇದೊಂದು ಅದ್ಭುತ ಅವಕಾಶವಾಗಿದೆ—ಇದರಿಂದ ಪ್ರತಿಯೊಂದು ಅಧಿವೇಶನವೂ ಹೆಚ್ಚು ರೋಮಾಂಚಕ, ಅರ್ಥಪೂರ್ಣ, ಆನಂದದಾಯಕ ಮತ್ತು ಮಕ್ಕಳಿಗೆ ಉಪಯುಕ್ತವಾಗುತ್ತದೆ.”

—ಎಸ್. ಎನ್., ಜಾರ್ಖಂಡ್

ಸಮತೋಲಿತ ಕಾರ್ಯಕ್ರಮ

ಆರಂಭಿಕ ದಿನದಂದು ಮೂರು ಗಂಟೆಗಳ ಧ್ಯಾನ ಮತ್ತು ದಿನಕ್ಕೆ ಮೂರು ಬಾರಿ ನಡೆಸಿದ ಸಾಮೂಹಿಕ ಧ್ಯಾನಗಳು ಪ್ರತಿ ದಿನದ ಚಟುವಟಿಕೆಗಳಿಗೆ ಶಾಂತಿಯುತ ಮತ್ತು ಗ್ರಹಣಶೀಲ ವಾತಾವರಣವನ್ನು ಸೃಷ್ಟಿಸಿದವು.

ಭಾಗವಹಿಸಿದವರು ತಮ್ಮ ಆಧ್ಯಾತ್ಮಿಕ ಜೀವನದಲ್ಲಿ ಸಾಧನೆ ಮತ್ತು ಸೇವೆಯನ್ನು ಸಮತೋಲನಗೊಳಿಸುವುದು ಅತ್ಯಗತ್ಯ ಎಂದು ಕಲಿತರು — ಮತ್ತು ಈ ಸಮತೋಲನದಲ್ಲಿ ಬದುಕುವುದು ತಾವು ಸೇವೆ ಸಲ್ಲಿಸುವ ಯುವಕರಿಗೆ ಶಕ್ತಿಯುತ ಉದಾಹರಣೆಯನ್ನು ನೀಡುತ್ತದೆ ಎಂಬುದನ್ನು ಅವರು ಮನಗಂಡರು.

ಸ್ವಯಂಸೇವಕರು ಸಾಮೂಹಿಕ ಧ್ಯಾನದಲ್ಲಿ ಸೇರಿಕೊಂಡರು.

ಎರಡು ಕಲಿಕಾ ಮಾರ್ಗಗಳು: ಮಕ್ಕಳ ಮತ್ತು ಹದಿಹರೆಯದವರ ಸತ್ಸಂಗ

ಕಾರ್ಯಾಗಾರವು ಎರಡು ಕೇಂದ್ರೀಕೃತ ಕಲಿಕಾ ಮಾರ್ಗಗಳನ್ನು ನೀಡಿತು — ಮಕ್ಕಳ ಸತ್ಸಂಗ (ಮಸ) ಮತ್ತು ಹದಿಹರೆಯದವರ ಸತ್ಸಂಗ (ಹಸ) — ಇದರಲ್ಲಿ ಭಾಗವಹಿಸಿದವರನ್ನು ಅವರ ಆಸಕ್ತಿ ಮತ್ತು ಹಿಂದಿನ ಅನುಭವದ ಆಧಾರದ ಮೇಲೆ ಗುಂಪುಗಳಾಗಿ ವಿಂಗಡಿಸಲಾಯಿತು.

ಪ್ರತಿ ಕಲಿಕಾ ಮಾರ್ಗದಲ್ಲಿ, ಮುಕ್ತವಾಗಿ ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಆಳವಾದ ಬಾಂಧವ್ಯವನ್ನು ಬೆಳೆಸಲು ಸ್ವಯಂಸೇವಕರನ್ನು ಚಿಂತನಶೀಲವಾಗಿ ಗುಂಪುಗಳಾಗಿ ವಿಂಗಡಿಸಲಾಗಿತ್ತು. ತರಬೇತಿಯು ಪರಿಣಾಮಕಾರಿ ಸತ್ಸಂಗ ಸುಗಮಗೊಳಿಸುವಿಕೆಯ ಮೂಲ ತತ್ವಗಳನ್ನು ಒಳಗೊಂಡಿತ್ತು: ಅಧಿವೇಶನವನ್ನು ದೇವರ ಮೇಲೆ ಕೇಂದ್ರೀಕರಿಸುವುದು, ಗುರುದೇವರ ಬೋಧನೆಗಳ ಶುದ್ಧತೆಯನ್ನು ಕಾಪಾಡುವುದು, ಮತ್ತು ಪ್ರೀತಿ, ಆನಂದ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸುವುದು.

ಸ್ವಯಂಸೇವಕರು ಮಕ್ಕಳು ಮತ್ತು ಹದಿಹರೆಯದವರನ್ನು (6-17 ವರ್ಷ ವಯಸ್ಸಿನವರು) ಆಧ್ಯಾತ್ಮಿಕವಾಗಿ ಉತ್ಕೃಷ್ಟತೆಗೇರಿಸುವ ಮತ್ತು ಸೃಜನಾತ್ಮಕ ವಿಧಾನಗಳ ಮೂಲಕ ತೊಡಗಿಸಿಕೊಳ್ಳಲು ಬೇಕಾಗುವ ಉತ್ತಮ ಅಭ್ಯಾಸಗಳನ್ನು ಸಹ ಹಂಚಿಕೊಂಡರು. ಕಥೆ ಹೇಳುವಿಕೆಯ ನೇರ ಪ್ರದರ್ಶನಗಳು, ಧ್ಯಾನಗಳನ್ನು ಮುನ್ನಡೆಸುವ ಬಗ್ಗೆ ಪ್ರಾಯೋಗಿಕ ಮಾರ್ಗದರ್ಶನ, ಮತ್ತು ಅಧಿವೇಶನಗಳನ್ನು ಯೋಜಿಸಲು ಬೇಕಾಗುವ ಪ್ರಾಯೋಗಿಕ ತರಬೇತಿಗಳು ಇದರ ಪ್ರಮುಖ ಅಂಶಗಳಾಗಿದ್ದವು — ಇವೆಲ್ಲವೂ ಯುವ ಮನಸ್ಸುಗಳು ಮತ್ತು ಹೃದಯಗಳ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲ್ಪಟ್ಟಿದ್ದವು.

A session in progress.
ಅಧಿವೇಶನ ನಡೆಯುತ್ತಿದೆ.
Volunteer groups during a learning session.
ಕಲಿಕಾ ಅಧಿವೇಶನದಲ್ಲಿ ಸ್ವಯಂಸೇವಕರ ಗುಂಪುಗಳು.

“ಮೂಲಭೂತ ತತ್ವಗಳು ಅಧಿವೇಶನಕ್ಕೆ ಸಿದ್ಧಗೊಳ್ಳಲು ನಿಜವಾಗಿಯೂ ಅಮೂಲ್ಯವಾಗಿವೆ, ಮತ್ತು ‘ಪ್ರೀತಿ ಹಾಗೂ ಕೃತಜ್ಞತೆ’ಯ ಮೇಲೆ ಕೇಂದ್ರೀಕರಿಸಲು ಅದ್ಭುತವಾಗಿದೆ. ವಾಸ್ತವವಾಗಿ, ಇಡೀ ತರಬೇತಿಯು ಅತ್ಯಂತ ಉತ್ತಮವಾಗಿ ಆಯೋಜಿಸಲ್ಪಟ್ಟಿತ್ತು. ಈ ಪ್ರಯತ್ನಕ್ಕಾಗಿ ನಿಜಕ್ಕೂ ಕೃತಜ್ಞರಾಗಿದ್ದೇವೆ ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯವಾದಗಳು.”

—ಎಸ್. ಎಲ್., ತಮಿಳುನಾಡು

“ಇದು ನಮಗೆ ಪ್ರತಿ ಅಧಿವೇಶನದ ಪ್ರತಿಯೊಂದು ಅಂಶದ ಬಗ್ಗೆ ಹೆಚ್ಚು ರಚನಾತ್ಮಕ ರೀತಿಯಲ್ಲಿ ಯೋಚಿಸಲು ಉತ್ತಮ ಅವಕಾಶವನ್ನು ಒದಗಿಸಿತು. ಇದು ಗುರೂಜಿಯವರ ಬೋಧನೆಗಳನ್ನು ಅಳವಡಿಸಿಕೊಳ್ಳಲು ಮತ್ತು ಮಸ (ಮಕ್ಕಳ ಸತ್ಸಂಗ) ಅಧಿವೇಶನದಲ್ಲಿ ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಲು ನಮಗೆ ಸಹಾಯ ಮಾಡುತ್ತದೆ.”

—ಎಸ್. ಎಸ್., ಪಶ್ಚಿಮ ಬಂಗಾಳ

ಅಧಿವೇಶನಗಳ ಸಮಯದಲ್ಲಿ ಆನಂದಮಯ ಕಲಿಕೆ.

“‘ಧ್ಯಾನ ಅಭ್ಯಾಸಗಳನ್ನು ಆಸಕ್ತಿದಾಯಕ ಮತ್ತು ಆಕರ್ಷಕವಾಗಿಸುವುದು’ ಕುರಿತ ಅಧಿವೇಶನವು ಅದ್ಭುತವಾಗಿತ್ತು! ಮಕ್ಕಳಿಗಾಗಿ ಧ್ಯಾನವನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಇದು ಒಂದು ಉತ್ತಮ ಉದಾಹರಣೆಯಾಗಿತ್ತು.”

—ಎನ್. ಪಿ., ಉತ್ತರ ಪ್ರದೇಶ

ಯುವ ಸೇವಾ ವಿಭಾಗದಲ್ಲಿ ಸೇವೆ ಸಲ್ಲಿಸಲು ಮಾರ್ಗದರ್ಶಿ ಸೂತ್ರಗಳು

ಕಾರ್ಯಾಗಾರದ ಕೊನೆಯಲ್ಲಿ, ಸ್ವಾಮಿ ಶಂಕರಾನಂದರು ಮತ್ತು ಹಿರಿಯ ಸ್ವಯಂಸೇವಕರು ಯುವ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಪ್ರಮುಖ ಮಾರ್ಗದರ್ಶಿ ಸೂತ್ರಗಳನ್ನು ಹಂಚಿಕೊಂಡರು. ಇದು ಮಕ್ಕಳು ಮತ್ತು ಹದಿಹರೆಯದವರು ದೇವರ ಮೇಲಿನ ತಮ್ಮ ಪ್ರೀತಿಯಲ್ಲಿ ಬೆಳೆಯಲು ಸಾಧ್ಯವಾಗುವಂತಹ ಸುರಕ್ಷಿತ ಮತ್ತು ಆಧ್ಯಾತ್ಮಿಕವಾಗಿ ಪೋಷಿಸುವ ವಾತಾವರಣವನ್ನು ಖಚಿತಪಡಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು.

ಭಾಗವಹಿಸಿದವರಿಗೆ ಯುವ ಸೇವೆಗಳ ವಿಭಾಗದ ಐದು ಕ್ಷೇತ್ರಗಳನ್ನು ಅರಿಯಲು ಮತ್ತು ತಮಗೆ ಹೆಚ್ಚು ಪ್ರೇರಣೆ ದೊರೆತ ಸ್ಥಳದಲ್ಲಿ ಸೇವೆ ಸಲ್ಲಿಸಲು ತಮ್ಮ ಆಸಕ್ತಿಯನ್ನು ನೋಂದಾಯಿಸಿಕೊಳ್ಳಲು ಸಹಾಯ ಮಾಡಲು, ಒಂದು ಸೇವಾ ಅವಕಾಶಗಳ ಮಾಹಿತಿ ಕೇಂದ್ರವನ್ನು ಸಹ ಸ್ಥಾಪಿಸಲಾಗಿತ್ತು.

A working group member sharing her experience.
ಒಬ್ಬ ಸ್ವಯಂಸೇವಕಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ.
ಸ್ವಯಂ ಸೇವಕರ ಸಹಾಯವಾಣಿ
ಸ್ವಯಂಸೇವಕ ಸಹಾಯವಾಣಿ.

ತರಬೇತಿಯ ಅಳವಡಿಕೆ

ಕಾರ್ಯಾಗಾರದ ಅಂತಿಮ ದಿನದಂದು, ಸ್ವಯಂಸೇವಕರು ತಮ್ಮ ನಗರಗಳಿಗೆ ಹಿಂದಿರುಗಿದ ನಂತರ ಯುವಕರನ್ನು ತಲುಪುವ ಕಾರ್ಯವನ್ನು ಹೇಗೆ ಬಲಪಡಿಸಬಹುದು ಎಂಬುದರ ಕುರಿತು ಮುಂದಿನ ಹೆಜ್ಜೆಗಳನ್ನು ವಿವರಿಸಲಾಯಿತು. ಸ್ಥಳೀಯ ಕೇಂದ್ರಗಳಲ್ಲಿ ಸಾಮರಸ್ಯದ ತಂಡಕಾರ್ಯದ ಮೂಲಕ ಯುವ ಸೇವೆಗಳನ್ನು ಹೇಗೆ ಪೋಷಿಸಬೇಕು ಮತ್ತು ಬೆಳೆಸಬೇಕು ಎಂಬುದರ ಕುರಿತು ಅತ್ಯುತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲಾಯಿತು.

ಸ್ವಾಮಿ ಸ್ಮರಣಾನಂದ ಗಿರಿ ಅವರ ಸಮಾರೋಪ ಸತ್ಸಂಗವು, ಆಧ್ಯಾತ್ಮಿಕ ಪೋಷಣೆ ಮತ್ತು ದೈವಿಕ ಆದರ್ಶಗಳ ಬೆಳಕಿನಲ್ಲಿ ಯುವ ಆತ್ಮಗಳಿಗೆ ಮಾರ್ಗದರ್ಶನ ನೀಡುವ ಪವಿತ್ರ ಜವಾಬ್ದಾರಿಯ ಕುರಿತು ಜ್ಞಾನವನ್ನು ನೀಡಿತು.

ನೂತನವಾಗಿ ರಚಿಸಲಾದ ಯುವ ಸೇವಾ ವಿಭಾಗದ ಯಶಸ್ಸಿಗಾಗಿ ದಿವ್ಯ ಆಶೀರ್ವಾದಗಳನ್ನು ಕೋರಿ, ಸಾಮೂಹಿಕ ಜಪ ಮತ್ತು ದೃಢೀಕರಣದೊಂದಿಗೆ ಕಾರ್ಯಾಗಾರವು ಮುಕ್ತಾಯಗೊಂಡಿತು.

Swami Smaranananda gives the concluding satsanga.
ಸ್ವಾಮಿ ಸ್ಮರಣಾನಂದರು ಸಮಾರೋಪ ಸತ್ಸಂಗವನ್ನು ನೀಡಿದರು.

“ಈ ತರಬೇತಿಯು ನಿಜಕ್ಕೂ ಅನನ್ಯವಾದುದು. ನಿಮ್ಮ ಸಾಧನೆಯನ್ನು, ಭಗವಂತ ಮತ್ತು ಗುರುಗಳೊಂದಿಗಿನ ನಿಮ್ಮ ಅನುಸಂಧಾನವನ್ನು ಇನ್ನಷ್ಟು ಆಳಗೊಳಿಸಲು ನೆರವಾಗುವ ತರಬೇತಿ ಕಾರ್ಯಕ್ರಮವೊಂದಕ್ಕೆ ನೀವು ಹಾಜರಾಗಲು ಬಯಸುವುದಾದರೆ, ಇದೇ ಅದು!”

—ಕೆ. ಎಂ.,ಮಹಾರಾಷ್ಟ್ರ

ಸ್ವಯಂ ಸೇವಕರು ಯುವ ಆತ್ಮಗಳನ್ನು ಆತ್ಮ-ಸಾಕ್ಷಾತ್ಕಾರದ ಹಾದಿಯಲ್ಲಿ ಮುನ್ನಡೆಸಲು ತಮ್ಮ ಹೃದಯ ಮತ್ತು ಮನಸ್ಸನ್ನು ಉತ್ತಮವಾಗಿ ಸಿದ್ಧಪಡಿಸಲು ಅವಕಾಶವನ್ನು ನೀಡಿದ ಈ ಪವಿತ್ರ ತರಬೇತಿ ಅವಕಾಶ ಮತ್ತು ಕಲಿಕೆಯ ಅನುಭವಕ್ಕಾಗಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

“ಇದು ಎಷ್ಟು ಸುಂದರವಾಗಿ ಯೋಜಿಸಿದ ಮತ್ತು ಚಿಂತನಶೀಲ ಕಾರ್ಯಾಗಾರ... ಇದು ನಿಜವಾಗಿಯೂ ನಮ್ಮ ಗುರುದೇವರ ಕಾರ್ಯವೈಖರಿಯನ್ನು ಪ್ರತಿನಿಧಿಸುತ್ತದೆ. ಅವರು ನಮ್ಮ ಬಗ್ಗೆ ಮತ್ತು ನಮ್ಮ ವೈಎಸ್‌ಎಸ್‌ನ ಪುಟ್ಟ ಮಕ್ಕಳ ಬಗ್ಗೆ ಎಷ್ಟು ಯೋಚಿಸುತ್ತಾರೆ! ಗುರುದೇವರ ಹೃದಯಕ್ಕೆ ಹತ್ತಿರವಾದ ಈ ಕಾರ್ಯಕ್ಕೆ ದೈವಿಕ ಸಾಧನಗಳಾಗಿ ನಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯರಾಗಿದ್ದೇವೆ. ಈ ಅದ್ಭುತ ಕಾರ್ಯಾಗಾರವನ್ನು ಆಯೋಜಿಸಿದ ಎಲ್ಲಾ ಸನ್ಯಾಸಿಗಳಿಗೆ ಮತ್ತು ಸ್ವಯಂಸೇವಕರಿಗೆ ಆಳವಾದ ಕೃತಜ್ಞತೆಗಳು. ತರಬೇತಿಯಿಂದ ಹಿಡಿದು ವಸತಿ ಮತ್ತು ಊಟದವರೆಗೆ ಎಲ್ಲವೂ ಪರಿಪೂರ್ಣವಾಗಿತ್ತು. ಈ ಅದ್ಭುತ ಕಾರ್ಯಾಗಾರದ ಭಾಗವಾಗಿದ್ದಕ್ಕಾಗಿ ತುಂಬಾ ಸಂತೋಷವಾಗಿದೆ. ಹೃದಯ ತುಂಬಿ ಬಂದಿದೆ.”

—ಪಿ. ಎಸ್., ತಮಿಳುನಾಡು

ಮುಂದಿನ ಹೆಜ್ಜೆಗಳು

  • ಯುವ ಸೇವಾ ವಿಭಾಗಕ್ಕೆ ಸ್ವಯಂಸೇವಕರಾಗಲು ಮತ್ತು ಭವಿಷ್ಯದ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಯಸುವವರು [email protected] ಇ-ಮೇಲ್ ವಿಳಾಸಕ್ಕೆ ನಮ್ಮನ್ನು ಸಂಪರ್ಕಿಸಲು ಸ್ವಾಗತ.
  • 2025 ರ ಅಂತ್ಯದಲ್ಲಿ ಆನ್‌ಲೈನ್ ಹದಿಹರೆಯದವರ ಸತ್ಸಂಗ ಕಾರ್ಯಕ್ರಮದ ರಾಷ್ಟ್ರವ್ಯಾಪಿ ಪ್ರಾರಂಭದ ಸಿದ್ಧತೆಗಾಗಿ, ಹದಿಹರೆಯದವರ ಸತ್ಸಂಗ ಸ್ವಯಂಸೇವಕರಿಗಾಗಿ ಒಂದು ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ಜುಲೈ-ಆಗಸ್ಟ್‌ನಲ್ಲಿ ಯೋಜಿಸಲಾಗಿದೆ.
  • ಹೆಚ್ಚುವರಿ ಮೂಲಭೂತ ತರಬೇತಿ ಮತ್ತು ಸಂಯೋಜಕರ ಕೌಶಲ್ಯ-ವೃದ್ಧಿ ಕಾರ್ಯಾಗಾರಗಳನ್ನು ಈ ವರ್ಷದ ಉತ್ತರಾರ್ಧದಲ್ಲಿ ಯೋಜಿಸಲಾಗಿದೆ.

ಯುವ ಸೇವಾ ಸಂಯೋಜಕರಾಗಿ ತರಬೇತಿ ಪಡೆಯಲು ಆಸಕ್ತಿ ಇರುವವರು, ಭವಿಷ್ಯದ ತರಬೇತಿ ಕಾರ್ಯಕ್ರಮಗಳಲ್ಲಿ ಸೇರ್ಪಡೆಗೊಳ್ಳಲು ಈ ಫಾರ್ಮ್ ಅನ್ನು ಭರ್ತಿ ಮಾಡಬಹುದು.

ಗುರೂಜಿಯವರ ಮಾರ್ಗದರ್ಶನದಲ್ಲಿ — ಒಟ್ಟಾಗಿ, ಈ ಪವಿತ್ರ ಕಾರ್ಯವನ್ನು ಮುಂದುವರಿಸಲು ನಾವು ಎದುರು ನೋಡುತ್ತಿದ್ದೇವೆ.

ಇದನ್ನು ಹಂಚಿಕೊಳ್ಳಿ