ಯುವ ಹೃದಯಗಳಲ್ಲಿ ದೈವೀ ಪ್ರೇಮವನ್ನು ಬೆಳೆಸುವುದು
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್) ಹಿಮಾಲಯದ ತಪ್ಪಲಿನಲ್ಲಿ ಮಕ್ಕಳು ಹಾಗೂ ಹದಿಹರೆಯದವರಿಗಾಗಿ ಹೊಸ ಅಖಿಲ ಭಾರತ ಬೇಸಿಗೆ ಶಿಬಿರವನ್ನು ಹರ್ಷದಿಂದ ಪ್ರಕಟಿಸುತ್ತಿದೆ.
ಸ್ಥಳ: ಶೂಲಿನಿ ವಿಶ್ವವಿದ್ಯಾಲಯ, ಸೋಲನ್, ಹಿಮಾಚಲ ಪ್ರದೇಶ
ದಿನಾಂಕ: ಮೇ 31 ರಿಂದ ಜೂನ್ 6, 2026 (ಭಾನುವಾರದಿಂದ ಶನಿವಾರದವರೆಗೆ).
12–17 ವಯೋಮಿತಿಯ ಬಾಲಕರು ಮತ್ತು ಬಾಲಕಿಯರು ಪಾಲ್ಗೊಳ್ಳಲು ಸ್ವಾಗತ.
ಮುಖ್ಯಾಂಶಗಳು
- ಪೋಷಕರು ಮೇಲ್ಕಂಡ ದಿನಾಂಕಗಳನ್ನು ತಮ್ಮ ದಿನದರ್ಶಿಕೆಗಳಲ್ಲಿ ಗುರುತಿಸಿಕೊಳ್ಳಲು ಕೋರಲಾಗಿದೆ. ಮಕ್ಕಳು ಹಾಗೂ ಹದಿಹರೆಯದವರು ಮೇ 30, ಶನಿವಾರದ ಮಧ್ಯಾಹ್ನದೊಳಗೆ ಶಿಬಿರದ ಸ್ಥಳಕ್ಕೆ ಆಗಮಿಸಬೇಕಾಗಿದ್ದು, ಜೂನ್ 6, ಶನಿವಾರದ ಸಂಜೆ ನಿರ್ಗಮಿಸಬಹುದು.
- ಎಲ್ಲಾ ತರಗತಿಗಳು ಮತ್ತು ಧ್ಯಾನಗಳು ಇಂಗ್ಲಿಷ್ನಲ್ಲಿ ನಡೆಯುತ್ತವೆ.
- ಶಿಬಿರದಲ್ಲಿ ಭಾಗವಹಿಸಲು ಅರ್ಜಿ ಪ್ರಕ್ರಿಯೆಯು ಫೆಬ್ರವರಿ ಅಂತ್ಯದಲ್ಲಿ ಆರಂಭವಾಗಲಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ಆಧಾರದ ಮೇಲೆ 108 ಬಾಲಕರು ಹಾಗೂ 108 ಬಾಲಕಿಯರನ್ನು ಸೇರಿಸಿಕೊಳ್ಳಲಾಗುವುದು.
- ದಯವಿಟ್ಟು ಫೆಬ್ರವರಿ ಅಂತ್ಯದ ವೇಳೆಗೆ ಅರ್ಜಿ ಕೊಂಡಿಗಾಗಿ ಈ ಜಾಗವನ್ನು ಪರಿಶೀಲಿಸಿ.
ಶಿಬಿರದ ಕುರಿತು
ಇದು ಶ್ರೀ ಶ್ರೀ ಪರಮಹಂಸ ಯೋಗಾನಂದರ ‘ಬದುಕುವುದು ಹೇಗೆ’ ಎಂಬ ಬೋಧನೆಗಳನ್ನು ಆಧರಿಸಿದೆ; ಅವು ಶರೀರ, ಮನಸ್ಸು ಹಾಗೂ ಆತ್ಮದ ಸಮತೋಲನಯುತ ವಿಕಾಸವನ್ನು ಉತ್ತೇಜಿಸುತ್ತವೆ.
ಇದು ವೈಎಸ್ಎಸ್ ಸನ್ಯಾಸಿಗಳ ಮಾರ್ಗದರ್ಶನದಲ್ಲಿ, ಅನುಭವಿ ಗೃಹಸ್ಥ ಶಿಷ್ಯರು ಹಾಗೂ ಸುಶಿಕ್ಷಿತ ಸ್ವಯಂಸೇವಕರ ಬೆಂಬಲದೊಂದಿಗೆ ಆಯೋಜಿಸಲಾಗಿದೆ.
ಶಿಬಿರ ಮತ್ತು ಆವರಣದ ವೈಶಿಷ್ಟ್ಯಗಳು
- ಶಿಬಿರವು ಹಿಮಾಚಲ ಪ್ರದೇಶದ ಸೋಲನ್ ನ, 25 ಎಕರೆ ವಿಸ್ತೀರ್ಣದ ಶೂಲಿನಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.
- ಶಿಬಿರವು ಭಾರತದಲ್ಲಿರುವ ಪ್ರಮುಖ ಸಂಶೋಧನಾ-ಕೇಂದ್ರಿತ ಖಾಸಗಿ ವಿಶ್ವವಿದ್ಯಾಲಯವಾದ ಶೂಲಿನಿ ವಿಶ್ವವಿದ್ಯಾಲಯದ ಸಂಪೂರ್ಣ ಬೆಂಬಲವನ್ನು ಹೊಂದಿದೆ.
- ಅತ್ಯಾಧುನಿಕ ಆವರಣದ ಸೌಲಭ್ಯಗಳಾದ — ವಸತಿ ನಿಲಯದ ಕೊಠಡಿಗಳು, ತರಗತಿ ಕೊಠಡಿಗಳು, ಭೋಜನ ಸೌಲಭ್ಯಗಳು, ಕ್ರೀಡಾಂಗಣಗಳು ಮತ್ತು ಸಭಾಂಗಣಗಳನ್ನು ವೈಎಸ್ಎಸ್ ಶಿಬಿರಕ್ಕಾಗಿ ಒದಗಿಸಲಾಗಿದೆ.
- ಬಾಲಕ-ಬಾಲಕಿಯರ ಶಿಬಿರಗಳನ್ನು ಪ್ರತ್ಯೇಕವಾಗಿ ಆದರೆ ಒಂದೇ ಆವರಣದಲ್ಲಿ ಹಾಗೂ ಒಂದೇ ವಾರದಲ್ಲಿ ನಡೆಸಲಾಗುವುದು. ಇದರಿಂದ ಗಂಡು ಮತ್ತು ಹೆಣ್ಣು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ತಮ್ಮ ಮಕ್ಕಳನ್ನು ಏಕಕಾಲದಲ್ಲಿ ಶಿಬಿರಕ್ಕೆ ಕಳುಹಿಸಲು ಸಾಧ್ಯವಾಗುತ್ತದೆ.
- ಶಿಬಿರದ ಅವಧಿಯಲ್ಲಿ, ಮಕ್ಕಳು ಮತ್ತು ಹದಿಹರೆಯದವರು, ಒಂದೇ ವಯೋಮಾನದ ಆಧ್ಯಾತ್ಮಿಕ ಮಿತ್ರರ ಸಮುದಾಯವಾಗಿ, ಕಾಳಜಿಯುಳ್ಳ ಹಿರಿಯರ ಮಾರ್ಗದರ್ಶನದಲ್ಲಿ ಒಟ್ಟಾಗಿ ಇರುವರು.
ದೈನಂದಿನ ಕಾರ್ಯಕ್ರಮ
ಶಿಬಿರದಲ್ಲಿನ ಒಂದು ಸಾಮಾನ್ಯ ದಿನವು ಮಕ್ಕಳು ಮತ್ತು ಹದಿಹರೆಯದವರನ್ನು ವಿನೋದಭರಿತ ರೀತಿಯಲ್ಲಿ ತೊಡಗಿಸಿಕೊಳ್ಳುತ್ತಾ, ಅವರಲ್ಲಿ ಶಿಸ್ತು ಮತ್ತು ಆತ್ಮಾವಲೋಕನವನ್ನು ಮೂಡಿಸುವ ಅನೇಕ ಚಟುವಟಿಕೆಗಳಿಂದ ತುಂಬಿರುತ್ತದೆ:
- ದೈನಂದಿನ ಸಾಮೂಹಿಕ ಧ್ಯಾನಗಳು
- ಇಚ್ಛಾಶಕ್ತಿ, ಸ್ನೇಹ ಮತ್ತು ನಿರ್ಭಯತೆ ಮುಂತಾದ ವಿಷಯಗಳ ಕುರಿತ ‘ಜೀವಿಸುವುದು ಹೇಗೆ’ ತರಗತಿಗಳು
- ಸಂನ್ಯಾಸಿಗಳ ನೇತೃತ್ವದ ಸತ್ಸಂಗಗಳು ಮತ್ತು ಧ್ಯಾನ ವಿಧಾನಗಳ ಪುನರಾವಲೋಕನ ತರಗತಿಗಳು
- ಕ್ರೀಡೆಗಳು ಮತ್ತು ಆಟಗಳು
- ಗೀತಾ ಪಠಣ
- ಕೀರ್ತನೆ
- ಚಲನಚಿತ್ರ ರಾತ್ರಿ
- ಕಲೆ ಮತ್ತು ಕರಕುಶಲ ಚಟುವಟಿಕೆಗಳು
- ಪ್ರಕೃತಿಯಲ್ಲಿ ನಡಿಗೆ
- ಆಧ್ಯಾತ್ಮಿಕ ಮೇಳ
- ಸಾಂಸ್ಕೃತಿಕ ಸಂಜೆ
- ಸಮೂಹ ಚರ್ಚೆಗಳು ಮತ್ತು ಪಾತ್ರಾಭಿನಯಗಳು
ಪೋಷಕರ ಅನಿಸಿಕೆಗಳು
ಹಿಂದಿನ ವೈಎಸ್ಎಸ್ ಮಕ್ಕಳ ಶಿಬಿರಗಳ ಕುರಿತು ಕೆಲವು ಪೋಷಕರ ಅನಿಸಿಕೆಗಳನ್ನು ಕೆಳಗೆ ನೀಡಲಾಗಿದೆ:
“ಬದುಕುವುದು ಹೇಗೆ ಬಾಲಕಿಯರ ಶಿಬಿರವು ವಿನೋದ ಮತ್ತು ಕಲಿಕೆಯ ಪರಿಪೂರ್ಣ ಸಮತೋಲನವಾಗಿತ್ತು, ಇದು ಮಕ್ಕಳು ಗುರೂಜಿಯವರ ಬೋಧನೆಗಳನ್ನು ಮೈಗೂಡಿಸಿಕೊಳ್ಳಲು ಮತ್ತು ಪ್ರತಿ ಕ್ಷಣವನ್ನೂ ಉತ್ಸಾಹದಿಂದ ಆನಂದಿಸಲು ಅವಕಾಶ ಮಾಡಿಕೊಟ್ಟಿತು. ಶಿಬಿರವು ಕುತೂಹಲ, ಆನಂದ ಮತ್ತು ಬೆಳವಣಿಗೆಯ ವಾತಾವರಣವನ್ನು ಪೋಷಿಸಿ, ಮಕ್ಕಳು ಹೆಚ್ಚು ಸ್ಫೂರ್ತಿಭರಿತರಾಗಿ, ಉತ್ಸುಕರಾಗಿ ಮತ್ತು ಈಗಾಗಲೇ ಮುಂದಿನ ವರ್ಷದ ಶಿಬಿರಕ್ಕಾಗಿ ಕಾತರದಿಂದ ಎದುರು ನೋಡುವಂತೆ ಮಾಡಿತು.”
“ನಮ್ಮ ಮಕ್ಕಳಿಗೆ ಈ ಬೇಸಿಗೆ ಶಿಬಿರವು ಅತ್ಯಂತ ಸಾರ್ಥಕ ಹಾಗೂ ಯಶಸ್ವಿ ಅನುಭವವಾಗಿತ್ತು. ಅಲ್ಲಿನ ವಾತಾವರಣವು ಆನಂದಮಯವಾಗಿಯೂ ಆಸಕ್ತಿದಾಯಕವಾಗಿಯೂ ಇದ್ದು, ಆಧ್ಯಾತ್ಮಿಕವಾಗಿ ಉನ್ನತಿಗೇರಿಸುವಂತಹುದಾಗಿತ್ತು ಹಾಗೂ ನಮ್ಮ ಮೌಲ್ಯಗಳು ಮತ್ತು ಪರಂಪರೆಗಳಲ್ಲಿ ಆಳವಾಗಿ ಬೇರುಬಿಟ್ಟಿತ್ತು. ಮಕ್ಕಳಿಗೆ ಪ್ರೀತಿ ಮತ್ತು ವಾತ್ಸಲ್ಯದಿಂದ ಮಾರ್ಗದರ್ಶನ ನೀಡಲಾಗಿದ್ದು, ಪ್ರಶಾಂತತೆ, ಉತ್ಸಾಹ ಮತ್ತು ಭಕ್ತಿಯಿಂದ ಪ್ರೇರೇಪಿಸಲಾಯಿತು. ನನ್ನ ಮಗು ಈಗಾಗಲೇ ಎಲ್ಲರೊಂದಿಗೆ ಕಳೆದ ಆ ಸುಂದರ ಕ್ಷಣಗಳನ್ನು ಬಹಳವಾಗಿ ನೆನಪಿಸಿಕೊಳ್ಳುತ್ತಿದೆ.”
ಮುಂದಿನ ಹಂತಗಳು
- ನಿಮ್ಮ ಮಗು ಅಥವಾ ಹದಿಹರೆಯದವರು ಶಿಬಿರದಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸುವ ಕುರಿತು ಅಗತ್ಯ ಮಾಹಿತಿ ಫೆಬ್ರವರಿ ತಿಂಗಳ ಉತ್ತರಾರ್ಧದಲ್ಲಿ ಒದಗಿಸಲಾಗುವುದು. ಮಾಹಿತಿ ಹಾಗೂ ಅರ್ಜಿ ಕೊಂಡಿಗಾಗಿ ದಯವಿಟ್ಟು ಈ ಪುಟವನ್ನು ಮತ್ತೆ ನೋಡಿ.
- ಕೆಲವು ಪೋಷಕರು ಶಿಬಿರದ ಅವಧಿಯಲ್ಲಿ ದೆಹಲಿ, ನೋಯ್ಡಾ, ಚಂಡೀಗಢ, ಶಿಮ್ಲಾ, ಸೋಲನ್ ಅಥವಾ ಸಮೀಪದ ಸ್ಥಳಗಳಲ್ಲಿ ವೈಯಕ್ತಿಕ ಏಕಾಂತವಾಸ, ತೀರ್ಥಯಾತ್ರೆ ಅಥವಾ ರಜೆಯನ್ನು ಯೋಜಿಸಲು ಬಯಸಬಹುದು.
ಯೋಗದಾ ಕುಟುಂಬಗಳ ಮಕ್ಕಳು ಹಾಗೂ ಹದಿಹರೆಯದವರು ವಿಶಿಷ್ಟ ಮತ್ತು ಸಮೃದ್ಧಗೊಳಿಸುವ ಮಕ್ಕಳು ಹಾಗೂ ಹದಿಹರೆಯದವರಿಗಾಗಿ ನಡೆಯುವ ವೈಎಸ್ಎಸ್ ಶಿಬಿರದಲ್ಲಿ ಭಾಗವಹಿಸಿ, ಆಧ್ಯಾತ್ಮಿಕ ಸ್ನೇಹಗಳು, ವಿನೋದಮಯ ಚಟುವಟಿಕೆಗಳು, ಆತ್ಮಸಂಯಮ, ತರಗತಿಗಳು ಹಾಗೂ ದೇವರೊಂದಿಗೆ ವೈಯಕ್ತಿಕ ಸಂಬಂಧದ ಪುನರ್ಜಾಗೃತಿಯಿಂದ ಪ್ರಯೋಜನ ಪಡೆಯುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ.



















