ಪ್ರತಿ ವರ್ಷ ಕ್ರಿಸ್ಮಸ್ ಸಮಯದಲ್ಲಿ ಸ್ವರ್ಗೀಯ ಲೋಕದಿಂದಿಳಿದು ಭೂಮಿಗೆ ಬರುವ ಕ್ರಿಸ್ತ-ಪ್ರೇಮ ಮತ್ತು ಆನಂದದ ಕಂಪನಗಳು ಸಾಮಾನ್ಯಕ್ಕಿಂತಲೂ ಹೆಚ್ಚು ಪ್ರಬಲವಾಗಿರುತ್ತವೆ. ಪ್ರಪಂಚದಲ್ಲಿ ಯೇಸು ಜನಿಸಿದಾಗ ಪ್ರಭಾಮಯವಾಗಿ ಹೊಳೆಯುತ್ತಿದ್ದ ಅನಂತ ಜ್ಯೋತಿಯಿಂದ ಆಕಾಶಮಂಡಲವೇ ತುಂಬಿಬಿಟ್ಟಿತ್ತು. ಭಕ್ತಿ ಮತ್ತು ಆಳವಾದ ಧ್ಯಾನದ ಮೂಲಕ ಸಾಮರಸ್ಯದಲ್ಲಿರುವ ವ್ಯಕ್ತಿಗಳು ಕ್ರಿಸ್ತ ಯೇಸುವಿನಲ್ಲಿರುವ ಸರ್ವವ್ಯಾಪಿ ಪ್ರಜ್ಞೆಯಿಂದ ಪರಿವರ್ತಿಸುವ ಕಂಪನಗಳನ್ನು ಅದ್ಭುತವಾಗಿ ಸ್ಪರ್ಶಿಸಬಹುದಾದ ರೀತಿಯಲ್ಲಿ ಅನುಭವಿಸುತ್ತಾರೆ.
— ಪರಮಹಂಸ ಯೋಗಾನಂದ
ಕ್ರಿಸ್ಮಸ್ ಎಂಬ ಪವಿತ್ರ ಸಂದರ್ಭದಂದು ಯೇಸು ಕ್ರಿಸ್ತರ ಜನ್ಮವನ್ನು ಗೌರವಿಸುವ ಸಲುವಾಗಿ, ಡಿಸೆಂಬರ್ 25 ಗುರುವಾರ ವೈಎಸ್ಎಸ್ನ ಒಬ್ಬ ಸನ್ಯಾಸಿಯವರಿಂದ ವಿಶೇಷ ಆನ್ಲೈನ್ ಧ್ಯಾನವನ್ನು ನಡೆಸಲಾಯಿತು.
ಕಾರ್ಯಕ್ರಮವು ಪ್ರಾರ್ಥನೆ ಮತ್ತು ಭಜನೆಗಳಿಂದ ಆರಂಭವಾಗಿ, ನಂತರ ಕೆಲವು ಸ್ಫೂರ್ತಿದಾಯಕ ವಾಚನಗಳು ಹಾಗೂ ಮೌನ ಧ್ಯಾನದ ಅವಧಿಯನ್ನು ಒಳಗೊಂಡಿತ್ತು. ಅಧಿವೇಶನವು ಇತರರಿಗಾಗಿ ಪ್ರಾರ್ಥನೆ ಮತ್ತು ಪರಮಹಂಸ ಯೋಗಾನಂದರವರ ಉಪಶಮನಕಾರಿ ಚಿಕಿತ್ಸಾ ತಂತ್ರವನ್ನು ನೆರವೇರಿಸುವುದರೊಂದಿಗೆ ಕೊನೆಗೊಂಡಿತು. ಇದರ ನಂತರ ಸಮಾರೋಪ ಪ್ರಾರ್ಥನೆ ನಡೆಯಿತು.
ಕ್ರಿಸ್ಮಸ್ ಸ್ಮರಣಾರ್ಥ ಧ್ಯಾನಗಳನ್ನು ವೈಎಸ್ಎಸ್ ಆಶ್ರಮಗಳು, ಕೇಂದ್ರಗಳು ಹಾಗೂ ಮಂಡಳಿಗಳಲ್ಲಿಯೂ ಸಹ ನಡೆಸಲಾಯಿತು. ನಿಮ್ಮ ಸಮೀಪದಲ್ಲಿರುವ ಕೇಂದ್ರದ ವಿವರಗಳನ್ನು ತಿಳಿದುಕೊಳ್ಳಲು, ದಯವಿಟ್ಟು ಇಲ್ಲಿ ಒತ್ತಿ.
ವೈಎಸ್ಎಸ್/ಎಸ್ಆರ್ಎಫ್ ಅಧ್ಯಕ್ಷ ಸ್ವಾಮಿ ಚಿದಾನಂದ ಗಿರಿ ಅವರಿಂದ ಕ್ರಿಸ್ಮಸ್ ಸಂದೇಶ
ಕ್ರಿಸ್ಮಸ್ ಸಂದರ್ಭದಲ್ಲಿ ವೈಎಸ್ಎಸ್/ಎಸ್ಆರ್ಎಫ್ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿ ಅವರ ವಿಶೇಷ ಸಂದೇಶವನ್ನು ಓದಲು, ದಯವಿಟ್ಟು ಕೆಳಗಿನ ಗುಂಡಿಯನ್ನು ಒತ್ತಿ.
ಈ ಪವಿತ್ರ ಸಂದರ್ಭದಲ್ಲಿ ನೀವು ಕಾಣಿಕೆ ನೀಡಲು ಬಯಸಿದರೆ, ಕೆಳಗೆ ಹಂಚಿಕೊಂಡಿರುವ ಲಿಂಕ್ ಮೂಲಕ ನೀವು ಕಾಣಿಕೆ ಸಲ್ಲಿಸಬಹುದು. ನಿಮ್ಮ ಬೆಂಬಲಕ್ಕೆ ನಾವು ಕೃತಜ್ಞರಾಗಿರುತ್ತೇವೆ.
















