ಈ ಮುಂಬರುವ ಕ್ರಿಸ್ಮಸ್ ಋತುವಿನಲ್ಲಿ, ಭವ್ಯ ಭಕ್ತಿಯ ಹೊಸ ದ್ವಾರವನ್ನು ತೆರೆಯಿರಿ, ಇದರಿಂದ ಕ್ರಿಸ್ತನ ಸರ್ವವ್ಯಾಪಿತ್ವವು ನಿಮ್ಮ ಪ್ರಜ್ಞೆಯಲ್ಲಿ ಮತ್ತೊಮ್ಮೆ ಬರಲು ಸಾಧ್ಯವಾಗುತ್ತದೆ. ಪ್ರತಿದಿನ, ಪ್ರತಿ ಗಂಟೆ, ಪ್ರತಿ ಸುವರ್ಣ ಕ್ಷಣ, ಕ್ರಿಸ್ತನು ನಿಮ್ಮ ಅಜ್ಞಾನದ ಕತ್ತಲೆಯ ಬಾಗಿಲುಗಳನ್ನು ತಟ್ಟುತ್ತಲೇ ಇದ್ದಾನೆ. ಈಗ, ಈ ಮಹಾವೈಭವದ ಪವಿತ್ರ ನಸುಕಿನಲ್ಲಿ, ಕ್ರಿಸ್ತನು ವಿಶೇಷವಾಗಿ ನಿಮ್ಮ ಆಂತರಿಕ ಕರೆಗೆ ಉತ್ತರವಾಗಿ ಬರುತ್ತಿದ್ದಾನೆ, ನಿಮ್ಮೊಳಗಿರುವ ತನ್ನ ಸರ್ವವ್ಯಾಪಿ ಕ್ರಿಸ್ತ ಪ್ರಜ್ಞೆಯನ್ನು ಜಾಗೃತಗೊಳಿಸಲು.
— ಪರಮಹಂಸ ಯೋಗಾನಂದ
ಕ್ರಿಸ್ಮಸ್ನ ಪವಿತ್ರ ಸಂದರ್ಭದಲ್ಲಿ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸನ್ಯಾಸಿಯೊಬ್ಬರು ಯೇಸುಕ್ರಿಸ್ತನ ಜನನದ ಗೌರವಾರ್ಥ ಇಂಗ್ಲಿಷ್ನಲ್ಲಿ ವಿಶೇಷ ಸ್ಮರಣಾರ್ಥ ಧ್ಯಾನವನ್ನು ನಡೆಸಿಕೊಟ್ಟರು. ಈ ಆನ್ಲೈನ್ ಕಾರ್ಯಕ್ರಮವು ಭಕ್ತಿಪೂರ್ಣ ಗಾಯನ, ವಾಚನ ಮತ್ತು ಧ್ಯಾನವನ್ನು ಒಳಗೊಂಡಿತ್ತು ಮತ್ತು ಪರಮಹಂಸ ಯೋಗಾನಂದರ ಉಪಶಮನದಾಯಕ ತಂತ್ರ ಹಾಗೂ ನಂತರ ಮುಕ್ತಾಯದ ಪ್ರಾರ್ಥನೆಯೊಂದಿಗೆ ಸಮಾಪ್ತಿಯಾಯಿತು.
ವೈಎಸ್ಎಸ್/ಎಸ್ಆರ್ಎಫ್ ಅಧ್ಯಕ್ಷ ಸ್ವಾಮಿ ಚಿದಾನಂದ ಗಿರಿಯವರಿಂದ ಕ್ರಿಸ್ಮಸ್ ಸಂದೇಶ
ಕ್ರಿಸ್ಮಸ್ ಸಮಯದಲ್ಲಿ ವೈಎಸ್ಎಸ್/ಎಸ್ಆರ್ಎಫ್ ಅಧ್ಯಕ್ಷ ಸ್ವಾಮಿ ಚಿದಾನಂದ ಗಿರಿಯವರ ವಿಶೇಷ ಸಂದೇಶವನ್ನು ಓದಲು, ದಯವಿಟ್ಟು ಕೆಳಗಿನ ಬಟನ್ ಅನ್ನು ಕ್ಲಿಕ್ ಮಾಡಿ.
ವೈಎಸ್ಎಸ್ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳೂ ಈ ಸಂದರ್ಭದಲ್ಲಿ ವಿಶೇಷ ವ್ಯಕ್ತಿಗತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವು.
ಈ ಸಮಯದಲ್ಲಿ ನೀವು ದೇಣಿಗೆ ನೀಡಬಯಸಿದರೆ, ದಯವಿಟ್ಟು ಕೆಳಗಿನ ಬಟನ್ ಅನ್ನು ಕ್ಲಿಕ್ ಮಾಡಿ. ನಿಮ್ಮ ದೇಣಿಗೆಗೆ ನಾವು ಪ್ರಾಮಾಣಿಕವಾಗಿ ಕೃತಜ್ಞರಾಗಿರುತ್ತೇವೆ.