ಹೊಸ ವರ್ಷದ ಆರಂಭದೊಂದಿಗೆ, ನಾವು ಏಕಾಗ್ರಗೊಂಡ ಸಂಕಲ್ಪ ಮತ್ತು ಆಧ್ಯಾತ್ಮಿಕ ನಿರ್ಣಯದೊಂದಿಗೆ ನಮ್ಮ ಜೀವನದ ಹೊಸ ಯುಗಕ್ಕೆ ಪ್ರವೇಶಿಸೋಣ.
— ಪರಮಹಂಸ ಯೋಗಾನಂದ
ಪರಮಹಂಸ ಯೋಗಾನಂದಜಿಯವರ ಪ್ರಕಾರ, ಹೊಸ ವರ್ಷದ ಆಗಮನವು ನಮ್ಮ ಯುಕ್ತ ಗುರಿಗಳು ಮತ್ತು ಆಕಾಂಕ್ಷೆಗಳನ್ನು ಪರ್ಯಾಲೋಚಿಸಲು ಪರಿಪೂರ್ಣ ಸಮಯವಾಗಿದೆ. ಈ ಪ್ರಯತ್ನದಲ್ಲಿ ನಮಗೆ ನೆರವಾಗಲು ಅವರು ಹೊಸ ವರ್ಷವನ್ನು ಧ್ಯಾನದೊಂದಿಗೆ ಬರಮಾಡಿಕೊಳ್ಳುವ ಸಂಪ್ರದಾಯವನ್ನು ಸ್ಥಾಪಿಸಿದರು.
ಹೊಸ ವರ್ಷವನ್ನು ಸ್ವಾಗತಿಸುವ ಈ ವಿಶಿಷ್ಟ ವಿಧಾನವನ್ನು ಅನುಭವಿಸಲು, ವೈಎಸ್ಎಸ್ ಸನ್ಯಾಸಿಯೊಬ್ಬರಿಂದ ಹೊಸ ವರ್ಷದ ಮುನ್ನಾದಿನದ ವಿಶೇಷ ಧ್ಯಾನವನ್ನು ನಡೆಸಿಕೊಡಲಾಯಿತು.
ನಮ್ಮ ಆಶ್ರಮಗಳು, ಧ್ಯಾನಕೇಂದ್ರಗಳು ಮತ್ತು ಮಂಡಳಿಗಳಲ್ಲಿ ಹೊಸ ವರ್ಷದ ಮುನ್ನಾದಿನದ ಧ್ಯಾನವನ್ನೂ ಕೂಡ ನಡೆಸಿಕೊಡಲಾಯಿತು.
ನೀವು ಇವುಗಳನ್ನೂ ಪರಿಶೋಧಿಸ ಬಯಸಬಹುದು:
ಹೊಸ ವರ್ಷದ ಈ ಸಂದರ್ಭದಲ್ಲಿ, ಪರಮಹಂಸ ಯೋಗಾನಂದಜಿಯವರ ಆಧ್ಯಾತ್ಮಿಕ ಮತ್ತು ಮಾನವೀಯ ಕಾರ್ಯಗಳಿಗೆ ದೇಣಿಗೆ ನೀಡಲು ನಿಮಗೆ ಸ್ವಾಗತ. ದೇಣಿಗೆ ನೀಡಲು ದಯವಿಟ್ಟು ಕೆಳಗಿನ ಬಟನ್ ಕ್ಲಿಕ್ ಮಾಡಿ.