⁠ಈ ಕಾರ್ಯಕ್ರಮವು ಈಗ ಮುಕ್ತಾಯಗೊಂಡಿದೆ.
ಮುಂದೆ ಆಯೋಜಿಸುವ ಘಟನಾವಳಿಯಲ್ಲಿ ನೀವು ನಮ್ಮೊಂದಿಗೆ ಭಾಗಿಯಾಗಲು ಇಚ್ಛಿಸಿದಲ್ಲಿ, ದಯವಿಟ್ಟು ಘಟನಾವಳಿಗಳು ಪುಟಕ್ಕೆ ಭೇಟಿ ನೀಡಿ.

ಗುರು ಪೂರ್ಣಿಮೆ

(ಸ್ಮರಣಾರ್ಥ ಧ್ಯಾನ ಮತ್ತು ಪ್ರವಚನ)

ವೈಎಸ್ಎಸ್ ಒಡಿಕೆ ಗುರು ಪೂರ್ಣಿಮೆ ಸ್ಮರಣಾರ್ಥ ಧ್ಯಾನ ಮತ್ತು ಪ್ರವಚನ — ಜುಲೈ 2026

ಕಾರ್ಯಕ್ರಮದ ಬಗ್ಗೆ

ಗುರುವನ್ನು ಆಳವಾದ ಪ್ರೀತಿಯಿಂದ ಕಾಣಿರಿ. ಗುರುವಿನೊಂದಿಗಿರುವುದು ಎಂದರೆ ಕೇವಲ ಅವರ ಶಾರೀರಿಕ ಉಪಸ್ಥಿತಿಯಲ್ಲಿ ಇರುವುದೆಂದಲ್ಲ (ಇದು ಕೆಲವೊಮ್ಮೆ ಅಸಾಧ್ಯವೂ ಹೌದು), ಬದಲಿಗೆ ಪ್ರಧಾನವಾಗಿ ಅವನನ್ನು ನಮ್ಮ ಹೃದಯದಲ್ಲಿ ಸ್ಥಾಪಿಸಿಕೊಳ್ಳುವುದು, ತಾತ್ವಿಕವಾಗಿ ಅವನೊಂದಿಗೆ ಒಂದಾಗುವುದು ಮತ್ತು ನಮ್ಮನ್ನೇ ಆತನೊಂದಿಗೆ ಶ್ರುತಿಗೂಡಿಸಿಕೊಳ್ಳುವುದು.

— ಸ್ವಾಮಿ ಶ್ರೀ ಯುಕ್ತೇಶ್ವರಗಿರಿ

ಪವಿತ್ರ ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ, ವೈಎಸ್ಎಸ್ ಭಕ್ತರು ವೈಎಸ್ಎಸ್ ಗುರುಗಳ ಪೂಜ್ಯ ಪರಂಪರೆಗೆ, ವಿಶೇಷವಾಗಿ ನಮ್ಮ ಪ್ರೀತಿಯ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರಿಗೆ ಹೃತ್ಪೂರ್ವಕ ಗೌರವ ಸಲ್ಲಿಸುತ್ತಾರೆ. ಅವರ ದಿವ್ಯ ಸ್ಫೂರ್ತಿ ಮತ್ತು ಮಾರ್ಗದರ್ಶನವು ಆತ್ಮ ಸಾಕ್ಷಾತ್ಕಾರದ ಹಾದಿಯಲ್ಲಿ ನಮ್ಮನ್ನು ಮುನ್ನಡೆಸುತ್ತಲೇ ಇದೆ.

ಈ ಸಂದರ್ಭವನ್ನು ಸ್ಮರಿಸಲು ಮತ್ತು ಪವಿತ್ರ ಗುರು-ಶಿಷ್ಯ ಸಂಬಂಧವನ್ನು ಗೌರವಿಸಲು, ಜುಲೈನಲ್ಲಿ ನಡೆಯುವ ಈ ಕೆಳಗಿನ ವಿಶೇಷ ಕಾರ್ಯಕ್ರಮಗಳಲ್ಲಿ ನಮ್ಮೊಂದಿಗೆ ಭಾಗವಹಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ:

ವೈಎಸ್ಎಸ್ ಸನ್ಯಾಸಿಯಿಂದ ಹಿಂದಿಯಲ್ಲಿ ವಿಶೇಷ ಪ್ರವಚನ

बलिहारी गुरु आपने, गोविंद दियो बताय

(ನಮ್ಮನ್ನು ಭಗವಂತನ ಕಡೆಗೆ ಕೊಂಡೊಯ್ಯುವ ಗುರುವಿಗೆ ಮಹಿಮೆ)

ಮಂಗಳವಾರ, ಜುಲೈ 28, 2026
ಸಂಜೆ 6:30 – 7:30 (ಅಧಿಕೃತ ಭಾರತೀಯ ಕಾಲಮಾನ)

ಈ ಪ್ರವಚನದಲ್ಲಿ, ವೈಎಸ್‌ಎಸ್‌ನ ಸನ್ಯಾಸಿಯಾದ ಸ್ವಾಮಿ ವಾಸುದೇವಾನಂದ ಗಿರಿ ಅವರು ಪರಮಹಂಸ ಯೋಗಾನಂದರ ಜ್ಞಾನಬೋಧನೆಗಳನ್ನು ಆಧಾರವಾಗಿಟ್ಟುಕೊಂಡು, ಗುರುವು ಮಾನವ ಆತ್ಮವನ್ನು ಭಗವಂತನೊಂದಿಗೆ ಸಂಪರ್ಕಿಸುವ ಪ್ರತ್ಯಕ್ಷ, ಸಜೀವ ಸೇತುವೆಯಾಗಿದ್ದಾರೆ ಎಂದು ವಿವರಿಸುತ್ತಾರೆ. ನಮ್ಮ ಆಧ್ಯಾತ್ಮಿಕ ಜಾಗೃತಿಯ ಮೂಲವನ್ನು ಗುರುತಿಸಿ ಗೌರವಿಸದೆ ಆಧ್ಯಾತ್ಮಿಕ ಪ್ರಗತಿ ಸಾಧ್ಯವಿಲ್ಲ ಎಂಬುದನ್ನು ಅವರು ನೆನಪಿಸುತ್ತಾರೆ. ಹಾಗೆಯೇ, ಗುರು ಪೂರ್ಣಿಮೆಯ ಸಾರವು ಕೇವಲ ವಿಧಿ-ವಿಧಾನಗಳ ಪೂಜೆಯಲ್ಲ; ನಮ್ಮ ಅಂತರಂಗದ ಅಂಧಕಾರವನ್ನು ದೂರಮಾಡುವ ಜ್ಞಾನದ ಬೆಳಕನ್ನು ಆಚರಿಸುವುದೇ ಅದರ ನಿಜವಾದ ಮಹತ್ವವಾಗಿದೆ.

ಹಿಂದಿಯಲ್ಲಿರುವ ಈ ಪ್ರವಚನಕ್ಕೆ “बलिहारी गुरु आपने, गोविंद दियो बताय (ನಮ್ಮನ್ನು ಭಗವಂತನ ಬಳಿಗೆ ಕರೆದೊಯ್ಯುವ ಗುರುವಿಗೆ ಕೀರ್ತಿ)” ಎಂದು ಶೀರ್ಷಿಕೆ ನೀಡಲಾಗಿದೆ.

“गुरु गोविंद दोऊ खड़े, काके लागूं पाँय
बलिहारी गुरु आपने, गोविंद दियो बताय”

15ನೇ ಶತಮಾನದ ಪ್ರಖ್ಯಾತ ಸಂತ ಹಾಗೂ ಕವಿ ಕಬೀರರ ಈ ಸುಂದರ ದೋಹೆಯನ್ನು ಆಧಾರವಾಗಿಟ್ಟುಕೊಂಡು, ಸ್ವಾಮಿ ವಾಸುದೇವಾನಂದರು ಗುರುಗಳ ಕೃಪೆ, ಜ್ಞಾನ ಹಾಗೂ ಮಾರ್ಗದರ್ಶನವಿಲ್ಲದೆ ಸಾಧಕನು ಸರ್ವವ್ಯಾಪಿಯಾದ ಭಗವಂತನ ದಿವ್ಯ ಸಾನ್ನಿಧ್ಯವನ್ನು ಅರಿಯಲು ಅಸಮರ್ಥನಾಗಿ, “ಕುರುಡನಾಗಿ” ಉಳಿಯುತ್ತಾನೆ ಎಂದು ವಿವರಿಸುತ್ತಾರೆ. ಮನಸ್ಸಿನ ಕನ್ನಡಿಯನ್ನು ಹೊಳಪುಗೊಳಿಸಿ, ಅಜ್ಞಾನದ (ಅವಿದ್ಯೆಯ) ಅಂಧಕಾರವನ್ನು ನಿವಾರಿಸಿ, ಭಗವಂತನತ್ತ ಸಾಗುವ ಮಾರ್ಗವನ್ನು ತೋರಿಸುವವರು ಗುರುವೇ. ಆದ್ದರಿಂದ, ಅಂತಿಮ ಗಮ್ಯಸ್ಥಾನವಾದ ಭಗವಂತನಿಗಿಂತ ಮೊದಲು, ಆ ಸಾಕ್ಷಾತ್ಕಾರಕ್ಕೆ ಮಾಧ್ಯಮರಾದ ಗುರುವನ್ನು ನಾವು ಗೌರವಿಸುತ್ತೇವೆ.

ಈ ಪ್ರವಚನವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ವೀಕ್ಷಿಸಲು ನಿಮ್ಮನ್ನು ಸ್ವಾಗತಿಸುತ್ತೇವೆ.

ದಯವಿಟ್ಟು ಗಮನಿಸಿ: ಈ ಪ್ರವಚನವು ಜುಲೈ 30, ಗುರುವಾರ ರಾತ್ರಿ 10 ಗಂಟೆಯ (ಅಧಿಕೃತ ಭಾರತೀಯ ಕಾಲಮಾನ) ವರೆಗೆ ವೀಕ್ಷಣೆಗೆ ಲಭ್ಯವಿರುತ್ತದೆ.

ಸ್ಮರಣಾರ್ಥ ಧ್ಯಾನ

ಬುಧವಾರ, ಜುಲೈ 29, 2026
ಬೆಳಿಗ್ಗೆ 6:30 – ಬೆಳಿಗ್ಗೆ 8:30 (ಅಧಿಕೃತ ಭಾರತೀಯ ಕಾಲಮಾನ)

ಜುಲೈ 29 ರಂದು, ವೈಎಸ್ಎಸ್ ಸನ್ಯಾಸಿಯೊಬ್ಬರು ನಡೆಸುವ ವಿಶೇಷ ಆನ್‌ಲೈನ್ ಧ್ಯಾನವಿರುತ್ತದೆ. ಇದರಲ್ಲಿ ಭಜನೆ ಮತ್ತು ಧ್ಯಾನದ ಅವಧಿಗಳು ಸೇರಿರುತ್ತವೆ, ನಂತರ ಪ್ರವಚನವಿರುತ್ತದೆ.

ದಯವಿಟ್ಟು ಗಮನಿಸಿ: ಈ ಕಾರ್ಯಕ್ರಮವು ಆಗಸ್ಟ್ 1, ಶನಿವಾರ ರಾತ್ರಿ 10 ಗಂಟೆಯ (ಅಧಿಕೃತ ಭಾರತೀಯ ಕಾಲಮಾನ) ವರೆಗೆ ವೀಕ್ಷಣೆಗೆ ಲಭ್ಯವಿರುತ್ತದೆ.

ನೇರ ಕಾರ್ಯಕ್ರಮಗಳು

ಗುರು ಪೂರ್ಣಿಮೆಯ ಸ್ಮರಣಾರ್ಥವಾಗಿ ವಿಶೇಷ ವ್ಯಕ್ತಿಗತ ಕಾರ್ಯಕ್ರಮಗಳನ್ನು ವೈಎಸ್‌ಎಸ್ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳಲ್ಲಿಯೂ ಸಹ ನಡೆಸಲಾಗುವುದು. ಈ ಕಾರ್ಯಕ್ರಮಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅವುಗಳಲ್ಲಿ ಭಾಗವಹಿಸಲು, ದಯವಿಟ್ಟು ನಿಮ್ಮ ಹತ್ತಿರದ ಧ್ಯಾನ ಕೇಂದ್ರವನ್ನು ಸಂಪರ್ಕಿಸಿ.

ವೈಎಸ್‌ಎಸ್/ಎಸ್‌ಆರ್‌ಎಫ್ ಅಧ್ಯಕ್ಷ ಸ್ವಾಮಿ ಚಿದಾನಂದ ಗಿರಿ ಅವರ ಸಂದೇಶ

ನಮ್ಮ ಪೂಜ್ಯ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರ ವಿಶೇಷ ಸಂದೇಶವನ್ನು ಈ ಸಂದರ್ಭದಲ್ಲಿ ಓದಲು, ದಯವಿಟ್ಟು ಕೆಳಗಿನ ಗುಂಡಿಯನ್ನು ಒತ್ತಿ:

ಈ ಪವಿತ್ರ ದಿನದಂದು ಕಾಣಿಕೆ ಅರ್ಪಿಸಲು ನಿಮಗೆ ಸ್ಫೂರ್ತಿಯಿದ್ದರೆ, ಕೆಳಗಿನ ಗುಂಡಿಯನ್ನು ಒತ್ತುವ ಮೂಲಕ ನೀವು ಹಾಗೆ ಮಾಡಬಹುದು. ನಿಮ್ಮ ಉದಾರತೆಗಾಗಿ ನಾವು ನಿಜವಾಗಿಯೂ ಕೃತಜ್ಞರಾಗಿದ್ದೇವೆ. ಇದನ್ನು ವೈಎಸ್‌ಎಸ್ ಗುರುಗಳ ಪರಂಪರೆಯಿಂದ ಬರುವ ಅನೇಕ ಆಶೀರ್ವಾದಗಳಿಗೆ ಕೃತಜ್ಞತೆಯ ಪ್ರಾಮಾಣಿಕ ಅಭಿವ್ಯಕ್ತಿ ಎಂದು ನಾವು ಭಾವಿಸುತ್ತೇವೆ.

ನಮ್ಮ ಗುರುದೇವರಾದ ಶ್ರೀ ಶ್ರೀ ಪರಮಹಂಸ ಯೋಗಾನಂದರು ಮತ್ತು ವೈಎಸ್ಎಸ್ ಗುರುಗಳ ಪರಂಪರೆಯು ನಿಮ್ಮ ಜೀವನದಲ್ಲಿ ಸುರಿಸಿರುವ ಅಪಾರ ಆಶೀರ್ವಾದಗಳಿಗಾಗಿ ನಿಮ್ಮ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ಹಾಗೂ ಅವರ ದೈವಿಕ ಧ್ಯೇಯವನ್ನು ಸೇವೆ ಮಾಡಲು ನಿಮ್ಮ ಬದ್ಧತೆಯನ್ನು ಪುನರ್ ದೃಢಪಡಿಸಲು ನೀವು ಇಚ್ಛಿಸುವುದಾದರೆ, ಗುರು ಪೂರ್ಣಿಮಾ ಮನವಿಯನ್ನು ಓದಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ:

To make an offering on this special occasion, please click the button below:

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ