ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಪ್ರತಿಪಾದಿಸಿದ ಮಾರ್ಗವು, ಪ್ರಾಪಂಚಿಕ ವ್ಯವಹಾರಗಳಲ್ಲಿ ನಿರತರಾಗಿರುವ ವ್ಯಕ್ತಿಗೂ ಹಾಗೂ ಅತ್ಯುನ್ನತ ಆಧ್ಯಾತ್ಮಿಕ ಸಾಧಕನಿಗೂ ಸಮತೋಲನದ, ಮಧ್ಯಮವಾದ, ಸುವರ್ಣ ಮಾರ್ಗವಾಗಿದೆ.
— ಪರಮಹಂಸ ಯೋಗಾನಂದ
ಭಗವಾನ್ ಶ್ರೀಕೃಷ್ಣನ ಜನ್ಮದಿನವಾದ ಜನ್ಮಾಷ್ಟಮಿಯನ್ನು ಪ್ರತಿವರ್ಷ ಯೋಗದಾ ಸತ್ಸಂಗ ಸೊಸೈಟಿಯ ವತಿಯಿಂದ ವಿಶೇಷ ಸ್ಮರಣಾರ್ಥ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಭಗವದ್ಗೀತೆಯಲ್ಲಿ ಕೃಷ್ಣನ ಬೋಧನೆಗಳನ್ನು ಅಡಕಗೊಳಿಸಲಾಗಿದೆ. ಈ ವರ್ಷ ಜನ್ಮಾಷ್ಟಮಿಯು ಸೆಪ್ಟೆಂಬರ್ 4 ರಂದು ಬಂದಿದೆ.
ಈ ಪವಿತ್ರ ಸಂದರ್ಭವನ್ನು ಈ ಕೆಳಗಿನ ಕಾರ್ಯಕ್ರಮಗಳೊಂದಿಗೆ ಆಚರಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ:
- ಶುಕ್ರವಾರ, ಸೆಪ್ಟೆಂಬರ್ 4: ವೈಎಸ್ಎಸ್/ಎಸ್ಆರ್ಎಫ್ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿಯವರೊಂದಿಗೆ ವಿಶೇಷ ಸ್ಮರಣಾರ್ಥ ಧ್ಯಾನ
- ಶನಿವಾರ, ಆಗಸ್ಟ್ 29: ವೈಎಸ್ಎಸ್ ಸನ್ಯಾಸಿಯವರಿಂದ ಹಿಂದಿಯಲ್ಲಿ ಪ್ರವಚನ
ವೈಎಸ್ಎಸ್/ಎಸ್ಆರ್ಎಫ್ ಅಧ್ಯಕ್ಷರಾದ ಸ್ವಾಮಿ ಚಿದಾನಂದ ಗಿರಿಯವರೊಂದಿಗೆ
ಜನ್ಮಾಷ್ಟಮಿ ಸ್ಮರಣಾರ್ಥ ಧ್ಯಾನ
(ನೇರ ಹಿಂದಿ ವ್ಯಾಖ್ಯಾನದೊಂದಿಗೆ)
ಶುಕ್ರವಾರ, ಸೆಪ್ಟೆಂಬರ್ 4, 2026
ಬೆಳಿಗ್ಗೆ 7:00 – ಬೆಳಿಗ್ಗೆ 8:00 (ಭಾರತೀಯ ಕಾಲಮಾನ)
ಈ ವಿಶೇಷ ದಿನದಂದು, ವೈಎಸ್ಎಸ್/ಎಸ್ಆರ್ಎಫ್ ಅಧ್ಯಕ್ಷರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರು ಸ್ಮರಣಾರ್ಥ ಧ್ಯಾನದ ನೇತೃತ್ವ ವಹಿಸಲಿರುವರು. ಇದನ್ನು ಯುಎಸ್ಎ ಯ ಲಾಸ್ ಏಂಜಲೀಸ್ನಲ್ಲಿರುವ ಎಸ್ಆರ್ಎಫ್ ಅಂತರರಾಷ್ಟ್ರೀಯ ಮುಖ್ಯ ಕಚೇರಿಯಿಂದ ಬೆಳಿಗ್ಗೆ 7 ರಿಂದ ಬೆಳಿಗ್ಗೆ 8 ರವರೆಗೆ (ಭಾರತೀಯ ಕಾಲಮಾನ) ನೇರ ಪ್ರಸಾರ ಮಾಡಲಾಗುತ್ತದೆ.
ಈ ವೀಡಿಯೊವು ನಂತರವೂ ವೀಕ್ಷಣೆಗೆ ಲಭ್ಯವಿರುತ್ತದೆ.
ಈ ಕಾರ್ಯಕ್ರಮವು ಇಂಗ್ಲಿಷ್ನಲ್ಲಿ ನಡೆಯಲಿದೆ. ಹಿಂದಿ ಭಾಷೆಯಲ್ಲಿ ಏಕಕಾಲಿಕ ಭಾಷಾಂತರದ ಸೌಲಭ್ಯವಿರುತ್ತದೆ (ನೇರ ಕಾರ್ಯಕ್ರಮದ ಸಮಯದಲ್ಲಿ ಮಾತ್ರ, ಝೂಮ್ ಮೂಲಕ).
ಹಿಂದಿ ಭಾಷೆಯಲ್ಲಿ ಏಕಕಾಲಿಕ ಭಾಷಾಂತರವನ್ನು ಪಡೆಯಲು:
- ಝೂಮ್ ಮೂಲಕ ಸೇರಿ (ನೇರ ಕಾರ್ಯಕ್ರಮದ ಸಮಯದಲ್ಲಿ). ಕಾರ್ಯಕ್ರಮ ಪ್ರಾರಂಭವಾಗುವ ಕೆಲವು ನಿಮಿಷಗಳ ಮುನ್ನವೇ ಸೇರಿಕೊಳ್ಳುವಂತೆ ಸೂಚಿಸಲಾಗಿದೆ.
- ನಿಮ್ಮ ಝೂಮ್ ವೀಕ್ಷಣೆಯ ಕೆಳಭಾಗದಲ್ಲಿರುವ ಟೂಲ್ಬಾರ್ನಲ್ಲಿರುವ “Interpretation” ಗುಂಡಿಯನ್ನು ಒತ್ತಿ. (ನಿಮಗೆ ಆ ಆಯ್ಕೆ ಕಾಣದಿದ್ದರೆ, “More” ಗುಂಡಿಯನ್ನು ಒತ್ತಿ ಮತ್ತು ಕಾಣಿಸಿಕೊಳ್ಳುವ ಮೆನುವಿನಿಂದ “Interpretation” ಅನ್ನು ಆಯ್ಕೆ ಮಾಡಿ.)
- ಪಟ್ಟಿಯಿಂದ “Hindi” ಯನ್ನು ಆಯ್ಕೆ ಮಾಡಿ.
- ಕಾರ್ಯಕ್ರಮ ಪ್ರಾರಂಭವಾದ ನಂತರ, ನೀವು ಹಿಂದಿಯಲ್ಲಿ ಏಕಕಾಲಿಕ ವ್ಯಾಖ್ಯಾನವನ್ನು ಕೇಳುವಿರಿ.
ದಯವಿಟ್ಟು ಗಮನಿಸಿ:
- ನಿಮಗೆ ತಾಂತ್ರಿಕ ಸಹಾಯದ ಅಗತ್ಯವಿದ್ದರೆ, ದಯವಿಟ್ಟು (0651) 6655 555 ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ [email protected] ಗೆ ಇಮೇಲ್ ಕಳುಹಿಸುವ ಮೂಲಕ ವೈಎಸ್ಎಸ್ ಸಹಾಯವಾಣಿಯನ್ನು ಸಂಪರ್ಕಿಸಿ.
- ಈ ನೇರಪ್ರಸಾರ ಕಾರ್ಯಕ್ರಮಕ್ಕಾಗಿ, ವೈಎಸ್ಎಸ್ ಸಹಾಯವಾಣಿ ಬೆಳಿಗ್ಗೆ 6:30 ಗಂಟೆಯಿಂದ (ಅಧಿಕೃತ ಭಾರತೀಯ ಕಾಲಮಾನ) ತಾಂತ್ರಿಕ ಬೆಂಬಲಕ್ಕಾಗಿ ಲಭ್ಯವಿರುತ್ತದೆ.
भगवान कृष्ण : मानव रूप, दिव्य स्वरूप
(ಭಗವಾನ್ ಕೃಷ್ಣ: ಮಾನವ ರೂಪದಲ್ಲಿನ ದಿವ್ಯ ಸ್ವರೂಪ)
ಶನಿವಾರ, ಆಗಸ್ಟ್ 29, 2026
ಸಂಜೆ 6:30 – ಸಂಜೆ 7:30 (ಭಾರತೀಯ ಕಾಲಮಾನ)
ಜನ್ಮಾಷ್ಟಮಿಯ ಪವಿತ್ರ ಸಂದರ್ಭದಲ್ಲಿ, ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸನ್ಯಾಸಿಯಾದ ಸ್ವಾಮಿ ಅಚ್ಯುತಾನಂದ ಗಿರಿ ಅವರು “भगवान कृष्ण : मानव रूप, दिव्य स्वरूप (ಭಗವಾನ್ ಕೃಷ್ಣ: ಮಾನವ ರೂಪ, ದಿವ್ಯ ಸ್ವರೂಪ)” ಎಂಬ ವಿಷಯದ ಕುರಿತು ಹಿಂದಿಯಲ್ಲಿ ಪ್ರವಚನ ನೀಡಲಿದ್ದಾರೆ.
ಈ ಪ್ರವಚನದಲ್ಲಿ ಸ್ವಾಮಿ ಅಚ್ಯುತಾನಂದರು ಶ್ರೀಕೃಷ್ಣನ ಉದಾತ್ತ ದಿವ್ಯ ಸ್ವರೂಪವನ್ನು ವಿವರಿಸಲಿದ್ದಾರೆ — ಅವರು ಪೂರ್ಣಾವತಾರರಾಗಿದ್ದು, ಅವರ ನಾಮವೇ ಪ್ರತಿರೋಧಿಸಲಾಗದ ವಿಶ್ವಾತ್ಮಕ ಆಕರ್ಷಣೆಯನ್ನು ಸೂಚಿಸುತ್ತದೆ (ಆಕರ್ಷಯತಿ ಇತಿ ಕೃಷಃ) — ಭಗವಂತನಿಂದ ದೂರವಾಗಿರುವ ಆತ್ಮಗಳನ್ನು ಅವರ ದಿವ್ಯ ನೆಲೆಯತ್ತ ಮರಳಿ ಸೆಳೆಯುವ ಆಕರ್ಷಣೆ. ಸಾಮಾನ್ಯ ಇಂದ್ರಿಯ ಗ್ರಹಿಕೆ ಮತ್ತು ಮರ್ತ್ಯ ಬುದ್ಧಿಯ ವ್ಯಾಪ್ತಿಯನ್ನು ಮೀರಿರುವ, ಭಗವಂತನ ಶಾಶ್ವತ ಆನಂದ (ಆನಂದ) ಮತ್ತು ನಿಷ್ಕಪಟ ಪ್ರೇಮ (ಪ್ರೇಮ)ಗಳ ಅವಿಭಾಜ್ಯ ಸ್ವರೂಪವನ್ನು ಭಗವಾನ್ ಶ್ರೀಕೃಷ್ಣನು ಹೇಗೆ ಸಾಕಾರಗೊಳಿಸುತ್ತಾನೆ ಎಂಬುದನ್ನು ಅವರು ವಿವರಿಸಲಿದ್ದಾರೆ.
ಈ ಪ್ರವಚನವು ಭಗವಂತನ ಲೀಲೆಯ ಗೂಢಾರ್ಥ, ರಾಧೆಯು ನಿದರ್ಶನವಾಗಿ ತೋರಿದ ಶುದ್ಧ ಆತ್ಮದಿಂದ ಪರಮಾತ್ಮನವರೆಗಿನ ಭಕ್ತಿ, ಮತ್ತು ಸೃಷ್ಟಿಯನ್ನು ಕಾಪಾಡುವ ವಿಶ್ವ ಸಾಮರಸ್ಯವನ್ನು ಮತ್ತಷ್ಟು ಆಳವಾಗಿ ಪರಿಶೋಧಿಸುತ್ತದೆ. ಪರಮಹಂಸ ಯೋಗಾನಂದರ ಭಗವದ್ಗೀತೆಯ ಸ್ಫೂರ್ತಿದಾಯಕ ವ್ಯಾಖ್ಯಾನವಾದ ಗಾಡ್ ಟಾಕ್ಸ್ ವಿತ್ ಅರ್ಜುನ ಗ್ರಂಥದಿಂದ ಆಯ್ದುಕೊಂಡು, ಕ್ರಿಯಾಯೋಗದ ವಿಜ್ಞಾನ ಮತ್ತು ಆಳವಾದ ಅಂತರ್ಮುಖಿ ಧ್ಯಾನವು ಸಾಧಕರಿಗೆ ಇಂದ್ರಿಯ ಮಿತಿಗಳ ಪರದೆಯನ್ನು ಭೇದಿಸಲು, ಮಿತಿಯಾದ ಮಾನವೀಯ ಬಾಂಧವ್ಯಗಳನ್ನು ವಿಶ್ವ ಪ್ರೇಮವಾಗಿ (ವಸುಧೈವ ಕುಟುಂಬಕಂ) ಪರಿವರ್ತಿಸಲು ಮತ್ತು ಒಳಗೆ ನೆಲೆಸಿರುವ ಸರ್ವವ್ಯಾಪಿ ಕೃಷ್ಣ ಚೈತನ್ಯದಲ್ಲಿ ಜಾಗೃತಗೊಳ್ಳಲು ಹೇಗೆ ಅವಕಾಶ ನೀಡುತ್ತದೆ ಎಂಬುದರ ಕುರಿತು ಸ್ವಾಮಿ ಅಚ್ಯುತಾನಂದರು ತಮ್ಮ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ.
ಆಗಸ್ಟ್ 29 ರ ಶನಿವಾರದಂದು ದಕ್ಷಿಣೇಶ್ವರದ ಯೋಗದಾ ಸತ್ಸಂಗ ಮಠದಿಂದ ನೇರಪ್ರಸಾರವಾಗುವ ಈ ಪ್ರವಚನದಲ್ಲಿ ಭಾಗವಹಿಸಲು ಎಲ್ಲರಿಗೂ ಸ್ವಾಗತ.
ದಯವಿಟ್ಟು ಗಮನಿಸಿ: ಈ ಪ್ರವಚನವು ಶುಕ್ರವಾರ, ಸೆಪ್ಟೆಂಬರ್ 4 ರ ರಾತ್ರಿ 10:00 (ಭಾರತೀಯ ಕಾಲಮಾನ) ವರೆಗೆ ವೀಕ್ಷಿಸಲು ಲಭ್ಯವಿರುತ್ತದೆ.
ನೇರ ಉಪಸ್ಥಿತಿಯ ಕಾರ್ಯಕ್ರಮಗಳು
ಈ ಪವಿತ್ರ ಸಂದರ್ಭದಲ್ಲಿ, ವೈಎಸ್ಎಸ್ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳಲ್ಲಿ ನೇರ ಉಪಸ್ಥಿತಿಯ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಈ ಕಾರ್ಯಕ್ರಮಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತು ಪಾಲ್ಗೊಳ್ಳಲು, ದಯವಿಟ್ಟು ನಿಮ್ಮ ಹತ್ತಿರದ ಧ್ಯಾನ ಕೇಂದ್ರವನ್ನು ಸಂಪರ್ಕಿಸಿ.
ಸ್ವಾಮಿ ಚಿದಾನಂದ ಗಿರಿಯವರ ಜನ್ಮಾಷ್ಟಮಿ ಸಂದೇಶ
“ಭಗವಾನ್ ಶ್ರೀಕೃಷ್ಣನ ಜನ್ಮದಿನವಾದ ಈ ಆಧ್ಯಾತ್ಮಿಕವಾಗಿ ಉನ್ನತೀಕರಿಸುವ ಜನ್ಮಾಷ್ಟಮಿ ಸಂದರ್ಭದಲ್ಲಿ ನಿಮ್ಮ ಪ್ರತಿಯೊಬ್ಬರಿಗೂ ಪ್ರೀತಿಯ ಶುಭಾಶಯಗಳು. ಸಹಸ್ರಾರು ವರ್ಷಗಳ ಹಿಂದೆ ಜನಿಸಿದ್ದರೂ ಸಹ, ದಿವ್ಯ ಪ್ರೀತಿಯ ಈ ಮಹಾನ್ ಮತ್ತು ಅಚ್ಚುಮೆಚ್ಚಿನ ಅವತಾರವು, ತಮ್ಮ ಸುಂದರವಾದ ಮಾನವ ರೂಪದಲ್ಲಿ ಭೂಮಿಯ ಮೇಲೆ ಸಂಚರಿಸಿದಾಗ ಹೇಗಿದ್ದರೋ, ಇಂದು ತಮ್ಮ ಹೃದಯವನ್ನು ಅವರೊಂದಿಗೆ ತಾದಾತ್ಮ್ಯಗೊಳಿಸಿಕೊಂಡಿರುವವರಿಗೆ ಅಷ್ಟೇ ವಾಸ್ತವಿಕವಾಗಿದ್ದಾರೆ – ಯೋಗದ ರಾಜಮಾರ್ಗದ ಮೂಲಕ ಆತ್ಮಸಾಕ್ಷಾತ್ಕಾರದ ಗುರಿಯತ್ತ ಪ್ರಾಮಾಣಿಕ ಸಾಧಕರನ್ನು ಮಾರ್ಗದರ್ಶನ ಮಾಡಲು ಮತ್ತು ಉನ್ನತೀಕರಿಸಲು ಯಾವಾಗಲೂ ಸಿದ್ಧರಾಗಿದ್ದಾರೆ.”
ಕಾಣಿಕೆ ಅರ್ಪಿಸಿ
ಭಗವದ್ಗೀತೆಯ ಶಾಶ್ವತ ಜ್ಞಾನವನ್ನು ನಮಗೆ ಅನುಗ್ರಹಿಸಿದ್ದಕ್ಕಾಗಿ ಭಗವಾನ್ ಕೃಷ್ಣನಿಗೆ ಕೃತಜ್ಞತೆ ಸಲ್ಲಿಸಲು ಜನ್ಮಾಷ್ಟಮಿಯು ನಮಗೆ ಒಂದು ಅವಕಾಶವನ್ನು ನೀಡುತ್ತದೆ.
ಈ ಸಂದರ್ಭದಲ್ಲಿ ನೀವು ಏನಾದರೂ ಕಾಣಿಕೆಯನ್ನು ಅರ್ಪಿಸಲು ಬಯಸಿದರೆ, ದಯವಿಟ್ಟು ಕೆಳಗಿನ ಕೊಂಡಿಗೆ ಭೇಟಿ ನೀಡಿ.
ಇನ್ನಷ್ಟು ತಿಳಿದುಕೊಳ್ಳಲು, ನೀವು ಈ ಕೆಳಗಿನ ಕೊಂಡಿಗಳನ್ನು ವೀಕ್ಷಿಸಬಹುದು:
- ಭಗವಾನ್ ಕೃಷ್ಣ ಮತ್ತು ಯೋಗದ ಸುವರ್ಣ ಮಧ್ಯಮ ಮಾರ್ಗದ ಕುರಿತು ಪರಮಹಂಸ ಯೋಗಾನಂದರು
- ಭಗವದ್ಗೀತೆಯಲ್ಲಿನ ರಹಸ್ಯ ಸತ್ಯಗಳು
- “ಕೃಷ್ಣ ಎಲ್ಲಿದ್ದಾನೆಯೋ, ಅಲ್ಲಿ ವಿಜಯವಿದೆ” — ಸ್ವಾಮಿ ಚೈತನ್ಯಾನಂದ ಗಿರಿಯವರಿಂದ
- “ನಿಜವಾದ ಭಕ್ತಿ ಎಂದರೇನು?” ಎಂಬ ಪ್ರಶ್ನೆಗೆ ಭಗವಾನ್ ಕೃಷ್ಣನ ಉತ್ತರ
- ಓದಿ: ಗಾಡ್ ಟಾಕ್ಸ್ ವಿತ್ ಅರ್ಜುನ: ದ ಭಗವದ್ಗೀತ
- ವೀಕ್ಷಿಸಿ: ಭಗವದ್ಗೀತೆಯ ಕುರಿತು ಪ್ರವಚನಗಳು

















